<p><strong>ಚೆನ್ನೈ:</strong>ತಮಿಳುನಾಡಿನತೂತ್ತುಕುಡಿ ಜಿಲ್ಲೆಯ ಸತ್ತಾನ್ಕುಲಂನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅಪ್ಪ-ಮಗ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ಮದ್ರಾಸ್ ಹೈಕೋರ್ಟ್ನ ಮದುರೈ ನ್ಯಾಯಪೀಠದ ಮುಂದೆ ಮಂಗಳವಾರ ಹಾಜರಾಗಬೇಕಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗುವ ಕೆಲವೇ ಗಂಟೆಗಳಮುನ್ನ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವೈಟಿಂಗ್ ಲಿಸ್ಟ್ನಲ್ಲಿಯೂ ಕಾನ್ಸ್ಟೆಬಲ್ನ್ನು ಅಮಾನತುಮಾಡಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.</p>.<p>ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಿ. ಕುಮಾರನ್ ಮತ್ತು ಡಿಎಸ್ಪಿ ಸಿ.ಪ್ರತಾಪನ್ ಅವರನ್ನು ಸರ್ಕಾರ ವೈಟಿಂಗ್ ಲಿಸ್ಟಿನಲ್ಲಿರಿಸಿದ್ದು ಕಾನ್ಸ್ಟೆಬಲ್ ಮಹಾರಾಜನ್ ಅವರನ್ನು ಅಮಾನತುಗೊಳಿಸಿದೆ.</p>.<p><strong>ಇದನ್ನೂ ಓದಿ:</strong><a href="www.prajavani.net/stories/national/cctv-footage-demolishes-tn-polices-%E2%80%9Clies%E2%80%9D-on-father-son-case-740778.html" target="_blank">ತಮಿಳುನಾಡು: ಕಸ್ಟಡಿ ಸಾವಿಗೆ ತಿರುವು</a></p>.<p>ಪಿ.ಎನ್. ಪ್ರಕಾಶ್ ಮತ್ತು ಬಿ.ಪುಗಲೆಂದಿ ಅವರ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾಗಲು ಕೆಲವೇ ಗಂಟೆಗಳು ಬಾಕಿ ಇದ್ದಾಗ ಸರ್ಕಾರ ಈ ಆದೇಶ ಹೊರಡಿಸಿದೆ.</p>.<p>ಮಂಗಳವಾರ 10.30ಕ್ಕೆ ಕೋವಿಲ್ಪಟ್ಟಿ ಮೆಜಿಸ್ಟ್ರೇಟ್ ಮುಂದೆ ಹಾಜರಾಗಬೇಕು ಎಂದು ವಿಭಾಗೀಯ ಪೀಠ ಆದೇಶಿಸಿತ್ತು.<br />ತಾನು ವಿಚಾರಣೆಗೆ ಹೋದಾಗ ಕಸ್ಟಡಿಯಲ್ಲಿದ್ದ ಜಯರಾಜನ್ ಮತ್ತು ಅವರ ಮಗ ಬೆನಿಕ್ಸ್ಗೆ ಭಾನುವಾರ ಸಂಜೆ ಸತ್ತಾನ್ಕುಲಂ ಪೊಲೀಸ್ ಠಾಣೆಯಲ್ಲಿ ಕಿರುಕುಳ ನೀಡಲಾಗಿತ್ತು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿದೆ ಎಂದುಕೋವಿಲ್ಪಟ್ಟಿ ಜ್ಯುಡಿಷಿಯಲ್ ಮೆಜಿಸ್ಟ್ರೇಟ್ ಎಂ.ಎಸ್.ಭಾರತೀದಾಸನ್ ಹೇಳಿದ್ದಾರೆ.</p>.<p><strong>ಇದನ್ನೂ ಓದಿ</strong>:<a href="https://www.prajavani.net/op-ed/editorial/custodial-death-in-tamil-nadu-740846.html" target="_blank">ತಮಿಳುನಾಡಿನಲ್ಲಿ ಕಸ್ಟಡಿ ಸಾವು; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಅಗತ್ಯ</a></p>.<p>ಪೊಲೀಸ್ ಕಾನ್ಸ್ಟೆಬಲ್ ಮಹಾರಾಜನ್ ಅವರು ಡಿ.ಕುಮಾರ್ (ಎಎಸ್ಪಿ) ಮತ್ತು ಡಿಎಸ್ಪಿ ಸಿ.ಪ್ರತಾಪನ್ ಅವರ ಸಮ್ಮುಖದಲ್ಲೇ ನನ್ನ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ. ವಿಚಾರಣೆಯ ಭಾಗವಾಗಿ ಪೊಲೀಸರು ಇದನ್ನೆಲ್ಲ ರೆಕಾರ್ಡ್ ಮಾಡಿದ್ದಾರೆ ಎಂದಿದ್ದಾರೆ ಜ್ಯುಡಿಷಿಯಲ್ ಮೆಜಿಸ್ಟ್ರೇಟ್.</p>.<p>ನಿನ್ನಿಂದ ಏನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಜ್ಯುಡಿಷಿಯಲ್ ಮೆಜಿಸ್ಟ್ರೇಟ್ಗೆ ಕಾನ್ಸ್ಟೆಬಲ್ ಹೇಳಿರುವುದಾಗಿ ಸ್ವಯಂಪ್ರೇರಿತ ಅರ್ಜಿಯಲ್ಲಿದೆ. ಈ ಅರ್ಜಿಯ ಪ್ರತಿ ಡೆಕ್ಕನ್ ಹೆರಾಲ್ಡ್ಗೆ ಸಿಕ್ಕಿದೆ.</p>.<p><strong>ಇದನ್ನೂ ಓದಿ</strong>:<a href="www.prajavani.net/stories/national/tamilnadu-father-and-son-death-case-probe-cbi-740443.html" target="_blank">ತಮಿಳುನಾಡು | ಕಸ್ಟಡಿಯಲ್ಲಿದ್ದ ತಂದೆ, ಮಗ ಸಾವು ಪ್ರಕರಣ: ತನಿಖೆ ಸಿಬಿಐಗೆ</a></p>.<p>ಸುಮಾರು ಗಂಟೆಗಳ ಕಾಲ ವಿಚಾರಣೆ ನಡೆದ ಬಳಿಕ ಸೋಮವಾರ ತಮಿಳುನಾಡು ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಮುಕ್ತ ಹಾಗೂ ನಿಷ್ಪಕ್ಷವಾದತನಿಖೆಗಾಗಿಪ್ರಕರಣವನ್ನು ಕೋವಿಲ್ಪಟ್ಟಿ ಪೊಲೀಸ್ ಠಾಣೆಯಿಂದ ಸಿಬಿಐಗೆ ವರ್ಗಾಯಿಸಬೇಕು ಎಂದು ಡಿಜಿಪಿ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ತಮಿಳುನಾಡು ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಎಸ್.ಕೆ ಪ್ರಭಾಕರ್ ಸಹಿ ಮಾಡಿದ ಆದೇಶದಲ್ಲಿದೆ.</p>.<p>ಮದ್ರಾಸ್ ಹೈಕೋರ್ಟ್ನಲ್ಲಿ ಮದುರೈ ನ್ಯಾಯಪೀಠ ಗಮನಿಸಿದ ಅಂಶಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು ಈ ಪ್ರಕರಣದ ಬಗ್ಗೆ ಸ್ವಯಂ ಪ್ರೇರಿತವಾಗಿ ಮುತುವರ್ಜಿ ವಹಿಸಿದ ಕಾರಣ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.</p>.<p><strong>ಇದನ್ನೂ ಓದಿ:</strong><a href="www.prajavani.net/stories/national/tn-youth-dies-from-wounds-inflicted-during-custody-cops-booked-740418.html" target="_blank">ತಮಿಳುನಾಡಿನಲ್ಲಿ ಪೊಲೀಸ್ ಕ್ರೌರ್ಯಕ್ಕೆ ಮತ್ತೊಂದು ಬಲಿ: ಕಸ್ಟಡಿಯಲ್ಲೇ ಯುವಕ ಸಾವು</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong>ತಮಿಳುನಾಡಿನತೂತ್ತುಕುಡಿ ಜಿಲ್ಲೆಯ ಸತ್ತಾನ್ಕುಲಂನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅಪ್ಪ-ಮಗ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ಮದ್ರಾಸ್ ಹೈಕೋರ್ಟ್ನ ಮದುರೈ ನ್ಯಾಯಪೀಠದ ಮುಂದೆ ಮಂಗಳವಾರ ಹಾಜರಾಗಬೇಕಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗುವ ಕೆಲವೇ ಗಂಟೆಗಳಮುನ್ನ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವೈಟಿಂಗ್ ಲಿಸ್ಟ್ನಲ್ಲಿಯೂ ಕಾನ್ಸ್ಟೆಬಲ್ನ್ನು ಅಮಾನತುಮಾಡಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.</p>.<p>ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಿ. ಕುಮಾರನ್ ಮತ್ತು ಡಿಎಸ್ಪಿ ಸಿ.ಪ್ರತಾಪನ್ ಅವರನ್ನು ಸರ್ಕಾರ ವೈಟಿಂಗ್ ಲಿಸ್ಟಿನಲ್ಲಿರಿಸಿದ್ದು ಕಾನ್ಸ್ಟೆಬಲ್ ಮಹಾರಾಜನ್ ಅವರನ್ನು ಅಮಾನತುಗೊಳಿಸಿದೆ.</p>.<p><strong>ಇದನ್ನೂ ಓದಿ:</strong><a href="www.prajavani.net/stories/national/cctv-footage-demolishes-tn-polices-%E2%80%9Clies%E2%80%9D-on-father-son-case-740778.html" target="_blank">ತಮಿಳುನಾಡು: ಕಸ್ಟಡಿ ಸಾವಿಗೆ ತಿರುವು</a></p>.<p>ಪಿ.ಎನ್. ಪ್ರಕಾಶ್ ಮತ್ತು ಬಿ.ಪುಗಲೆಂದಿ ಅವರ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾಗಲು ಕೆಲವೇ ಗಂಟೆಗಳು ಬಾಕಿ ಇದ್ದಾಗ ಸರ್ಕಾರ ಈ ಆದೇಶ ಹೊರಡಿಸಿದೆ.</p>.<p>ಮಂಗಳವಾರ 10.30ಕ್ಕೆ ಕೋವಿಲ್ಪಟ್ಟಿ ಮೆಜಿಸ್ಟ್ರೇಟ್ ಮುಂದೆ ಹಾಜರಾಗಬೇಕು ಎಂದು ವಿಭಾಗೀಯ ಪೀಠ ಆದೇಶಿಸಿತ್ತು.<br />ತಾನು ವಿಚಾರಣೆಗೆ ಹೋದಾಗ ಕಸ್ಟಡಿಯಲ್ಲಿದ್ದ ಜಯರಾಜನ್ ಮತ್ತು ಅವರ ಮಗ ಬೆನಿಕ್ಸ್ಗೆ ಭಾನುವಾರ ಸಂಜೆ ಸತ್ತಾನ್ಕುಲಂ ಪೊಲೀಸ್ ಠಾಣೆಯಲ್ಲಿ ಕಿರುಕುಳ ನೀಡಲಾಗಿತ್ತು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿದೆ ಎಂದುಕೋವಿಲ್ಪಟ್ಟಿ ಜ್ಯುಡಿಷಿಯಲ್ ಮೆಜಿಸ್ಟ್ರೇಟ್ ಎಂ.ಎಸ್.ಭಾರತೀದಾಸನ್ ಹೇಳಿದ್ದಾರೆ.</p>.<p><strong>ಇದನ್ನೂ ಓದಿ</strong>:<a href="https://www.prajavani.net/op-ed/editorial/custodial-death-in-tamil-nadu-740846.html" target="_blank">ತಮಿಳುನಾಡಿನಲ್ಲಿ ಕಸ್ಟಡಿ ಸಾವು; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಅಗತ್ಯ</a></p>.<p>ಪೊಲೀಸ್ ಕಾನ್ಸ್ಟೆಬಲ್ ಮಹಾರಾಜನ್ ಅವರು ಡಿ.ಕುಮಾರ್ (ಎಎಸ್ಪಿ) ಮತ್ತು ಡಿಎಸ್ಪಿ ಸಿ.ಪ್ರತಾಪನ್ ಅವರ ಸಮ್ಮುಖದಲ್ಲೇ ನನ್ನ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ. ವಿಚಾರಣೆಯ ಭಾಗವಾಗಿ ಪೊಲೀಸರು ಇದನ್ನೆಲ್ಲ ರೆಕಾರ್ಡ್ ಮಾಡಿದ್ದಾರೆ ಎಂದಿದ್ದಾರೆ ಜ್ಯುಡಿಷಿಯಲ್ ಮೆಜಿಸ್ಟ್ರೇಟ್.</p>.<p>ನಿನ್ನಿಂದ ಏನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಜ್ಯುಡಿಷಿಯಲ್ ಮೆಜಿಸ್ಟ್ರೇಟ್ಗೆ ಕಾನ್ಸ್ಟೆಬಲ್ ಹೇಳಿರುವುದಾಗಿ ಸ್ವಯಂಪ್ರೇರಿತ ಅರ್ಜಿಯಲ್ಲಿದೆ. ಈ ಅರ್ಜಿಯ ಪ್ರತಿ ಡೆಕ್ಕನ್ ಹೆರಾಲ್ಡ್ಗೆ ಸಿಕ್ಕಿದೆ.</p>.<p><strong>ಇದನ್ನೂ ಓದಿ</strong>:<a href="www.prajavani.net/stories/national/tamilnadu-father-and-son-death-case-probe-cbi-740443.html" target="_blank">ತಮಿಳುನಾಡು | ಕಸ್ಟಡಿಯಲ್ಲಿದ್ದ ತಂದೆ, ಮಗ ಸಾವು ಪ್ರಕರಣ: ತನಿಖೆ ಸಿಬಿಐಗೆ</a></p>.<p>ಸುಮಾರು ಗಂಟೆಗಳ ಕಾಲ ವಿಚಾರಣೆ ನಡೆದ ಬಳಿಕ ಸೋಮವಾರ ತಮಿಳುನಾಡು ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಮುಕ್ತ ಹಾಗೂ ನಿಷ್ಪಕ್ಷವಾದತನಿಖೆಗಾಗಿಪ್ರಕರಣವನ್ನು ಕೋವಿಲ್ಪಟ್ಟಿ ಪೊಲೀಸ್ ಠಾಣೆಯಿಂದ ಸಿಬಿಐಗೆ ವರ್ಗಾಯಿಸಬೇಕು ಎಂದು ಡಿಜಿಪಿ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ತಮಿಳುನಾಡು ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಎಸ್.ಕೆ ಪ್ರಭಾಕರ್ ಸಹಿ ಮಾಡಿದ ಆದೇಶದಲ್ಲಿದೆ.</p>.<p>ಮದ್ರಾಸ್ ಹೈಕೋರ್ಟ್ನಲ್ಲಿ ಮದುರೈ ನ್ಯಾಯಪೀಠ ಗಮನಿಸಿದ ಅಂಶಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು ಈ ಪ್ರಕರಣದ ಬಗ್ಗೆ ಸ್ವಯಂ ಪ್ರೇರಿತವಾಗಿ ಮುತುವರ್ಜಿ ವಹಿಸಿದ ಕಾರಣ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.</p>.<p><strong>ಇದನ್ನೂ ಓದಿ:</strong><a href="www.prajavani.net/stories/national/tn-youth-dies-from-wounds-inflicted-during-custody-cops-booked-740418.html" target="_blank">ತಮಿಳುನಾಡಿನಲ್ಲಿ ಪೊಲೀಸ್ ಕ್ರೌರ್ಯಕ್ಕೆ ಮತ್ತೊಂದು ಬಲಿ: ಕಸ್ಟಡಿಯಲ್ಲೇ ಯುವಕ ಸಾವು</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>