<p><strong>ನವದೆಹಲಿ:</strong> ‘ಟಿಬೆಟ್ನ ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರವು ಭಾರತ ಹಾಗೂ ಚೀನಾ ಸಂಬಂಧಕ್ಕೆ ಮುಳ್ಳಾಗಲಿದೆ’ ಎಂದು ಚೀನಾ ಎಚ್ಚರಿಸಿದೆ.</p>.<p>2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಪಡೆಗಳ ಜೊತೆ ಭಾರತದ ಸೇನೆಯು ಸಂಘರ್ಷ ನಡೆದ ಬಳಿಕ ಇದೇ ಮೊದಲ ಬಾರಿಗೆ ಚೀನಾಕ್ಕೆ ತೆರಳಲಿರುವ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರವಾಸಕ್ಕೂ ಮುನ್ನ ಆಕ್ಷೇಪ ವ್ಯಕ್ತಪಡಿಸಿದೆ.</p>.<p>‘ದಲೈಲಾಮಾ ಉತ್ತರಾಧಿಕಾರಿ ಮೇಲೆ ತನ್ನ ಪಾತ್ರವಿಲ್ಲ, ಆದರೆ, ಆಯ್ಕೆಗೆ ತಮ್ಮ ದೇಶದ ನಾಯಕರ ಒಪ್ಪಿಗೆ ಅಗತ್ಯ’ ಎಂದು ಚೀನಾವು ಪುನಾರವರ್ತಿಸಿದೆ. </p>.<p>ದಲೈಲಾಮಾ ಅವರು ಇತ್ತೀಚಿಗೆ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಭಾರತದ ಸಚಿವರು ಪಾಲ್ಗೊಂಡಿದ್ದರು. ಇದಕ್ಕೂ ಚೀನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.</p>.<p>‘ದಲೈ ಲಾಮಾ ಅವರ ಪುನರ್ಜನ್ಮದ ಕುರಿತು ಭಾರತದಲ್ಲಿರುವ ಶೈಕ್ಷಣಿಕ ಸಮುದಾದಯದವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಭಾರತದ ಚೀನಾ ರಾಯಭಾರ ಕಚೇರಿಯ ವಕ್ತಾರೆ ಯು ಜಿಂಗ್ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.</p>.<p>‘ವಿದೇಶಾಂಗ ನೀತಿಯ ವೃತ್ತಿಪರರಾಗಿ ಕ್ಸಿಜಾಂಗ್ ಸೂಕ್ಷ್ಮತೆಯ ವಿಚಾರದಲ್ಲಿ ಸಂಪೂರ್ಣ ಅರಿವು ಹೊಂದಿರಬೇಕು. ಲಾಮಾ ಅವರ ಪುನರ್ಜನ್ಮ ಹಾಗೂ ಉತ್ತರಾಧಿಕಾರಿ ಆಯ್ಕೆ ವಿಚಾರವು ಅಂತರ್ಗತವಾಗಿ ಚೀನಾದ ಆಂತರಿಕ ವಿಚಾರವಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. </p>.<p>ಟಿಬೆಟ್ ಪ್ರಾಂತ್ಯವನ್ನು ಚೀನಾವು ‘ಕ್ಸಿಜಾಂಗ್’ ಎಂದೇ ಕರೆಯುತ್ತದೆ. ಜಿಂಗ್ ಅವರು ಯಾರನ್ನೂ ಕೂಡ ಬೊಟ್ಟುಮಾಡಿ ಆರೋಪಿಸಿಲ್ಲ. </p>.<p>ಜುಲೈ 15ರಂದು ಉತ್ತರ ಚೀನಾದ ತಿಯಾನ್ಜಿನ್ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ಪ್ರಾದೇಶಿಕ ಭದ್ರತಾ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಭಾಗವಹಿಸಲಿದ್ದಾರೆ. ಈ ವೇಳೆ ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.</p>.ಮುಂದಿನ ದಲೈ ಲಾಮಾ ಚೀನಾದಿಂದಲ್ಲ, ಸ್ವತಂತ್ರ ರಾಷ್ಟ್ರದಿಂದ ಬರುತ್ತಾರೆ:ಅರುಣಾಚಲ CM.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಟಿಬೆಟ್ನ ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರವು ಭಾರತ ಹಾಗೂ ಚೀನಾ ಸಂಬಂಧಕ್ಕೆ ಮುಳ್ಳಾಗಲಿದೆ’ ಎಂದು ಚೀನಾ ಎಚ್ಚರಿಸಿದೆ.</p>.<p>2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಪಡೆಗಳ ಜೊತೆ ಭಾರತದ ಸೇನೆಯು ಸಂಘರ್ಷ ನಡೆದ ಬಳಿಕ ಇದೇ ಮೊದಲ ಬಾರಿಗೆ ಚೀನಾಕ್ಕೆ ತೆರಳಲಿರುವ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರವಾಸಕ್ಕೂ ಮುನ್ನ ಆಕ್ಷೇಪ ವ್ಯಕ್ತಪಡಿಸಿದೆ.</p>.<p>‘ದಲೈಲಾಮಾ ಉತ್ತರಾಧಿಕಾರಿ ಮೇಲೆ ತನ್ನ ಪಾತ್ರವಿಲ್ಲ, ಆದರೆ, ಆಯ್ಕೆಗೆ ತಮ್ಮ ದೇಶದ ನಾಯಕರ ಒಪ್ಪಿಗೆ ಅಗತ್ಯ’ ಎಂದು ಚೀನಾವು ಪುನಾರವರ್ತಿಸಿದೆ. </p>.<p>ದಲೈಲಾಮಾ ಅವರು ಇತ್ತೀಚಿಗೆ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಭಾರತದ ಸಚಿವರು ಪಾಲ್ಗೊಂಡಿದ್ದರು. ಇದಕ್ಕೂ ಚೀನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.</p>.<p>‘ದಲೈ ಲಾಮಾ ಅವರ ಪುನರ್ಜನ್ಮದ ಕುರಿತು ಭಾರತದಲ್ಲಿರುವ ಶೈಕ್ಷಣಿಕ ಸಮುದಾದಯದವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಭಾರತದ ಚೀನಾ ರಾಯಭಾರ ಕಚೇರಿಯ ವಕ್ತಾರೆ ಯು ಜಿಂಗ್ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.</p>.<p>‘ವಿದೇಶಾಂಗ ನೀತಿಯ ವೃತ್ತಿಪರರಾಗಿ ಕ್ಸಿಜಾಂಗ್ ಸೂಕ್ಷ್ಮತೆಯ ವಿಚಾರದಲ್ಲಿ ಸಂಪೂರ್ಣ ಅರಿವು ಹೊಂದಿರಬೇಕು. ಲಾಮಾ ಅವರ ಪುನರ್ಜನ್ಮ ಹಾಗೂ ಉತ್ತರಾಧಿಕಾರಿ ಆಯ್ಕೆ ವಿಚಾರವು ಅಂತರ್ಗತವಾಗಿ ಚೀನಾದ ಆಂತರಿಕ ವಿಚಾರವಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. </p>.<p>ಟಿಬೆಟ್ ಪ್ರಾಂತ್ಯವನ್ನು ಚೀನಾವು ‘ಕ್ಸಿಜಾಂಗ್’ ಎಂದೇ ಕರೆಯುತ್ತದೆ. ಜಿಂಗ್ ಅವರು ಯಾರನ್ನೂ ಕೂಡ ಬೊಟ್ಟುಮಾಡಿ ಆರೋಪಿಸಿಲ್ಲ. </p>.<p>ಜುಲೈ 15ರಂದು ಉತ್ತರ ಚೀನಾದ ತಿಯಾನ್ಜಿನ್ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ಪ್ರಾದೇಶಿಕ ಭದ್ರತಾ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಭಾಗವಹಿಸಲಿದ್ದಾರೆ. ಈ ವೇಳೆ ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.</p>.ಮುಂದಿನ ದಲೈ ಲಾಮಾ ಚೀನಾದಿಂದಲ್ಲ, ಸ್ವತಂತ್ರ ರಾಷ್ಟ್ರದಿಂದ ಬರುತ್ತಾರೆ:ಅರುಣಾಚಲ CM.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>