<p><strong>ಕೋಲ್ಕತ್ತ:</strong> ಪಶ್ಚಿಮ ಬಂಗಾಳದ ಸಚಿವ ಸುಜಿತ್ ಬೋಸ್ಗೆ ಸಂಬಂಧಿಸಿದ ಆಸ್ತಿಗಳು ಸೇರಿದಂತೆ ಕೋಲ್ಕತ್ತದ ಏಳು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿದರು.</p>.<p>ಪುರಸಭೆಗಳ ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಈ ಶೋಧ ನಡೆದಿದ್ದು, ಸಚಿವರ ಕಚೇರಿಯಿಂದ ಒಎಂಆರ್ ಶೀಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಸಾಲ್ಟ್ ಲೇಕ್ನಲ್ಲಿರುವ ಸಚಿವರ ನಿವಾಸ– ಗೃಹ ಕಚೇರಿ, ನಾಗೇರ್ ಬಜಾರ್ ಪ್ರದೇಶದ ಕೌನ್ಸಿಲರ್ ಮನೆ, ದಕ್ಷಿಣ ಡುಮ್ ಡುಮ್ ಪುರಸಭೆಯ ಮಾಜಿ ಅಧಿಕಾರಿಗಳ ಮನೆಯಲ್ಲೂ ಇ.ಡಿ ತಂಡಗಳು ಶೋಧ ನಡೆಸಿವೆ ಎಂದು ಅವರು ಹೇಳಿದರು.</p>.<p>ಕೇಂದ್ರ ಕೋಲ್ಕತ್ತದ ಥಂತಾನಿಯಾ ಕಾಲಿಬಾರಿ ಪ್ರದೇಶದ ಮನೆಯೊಂದರ ಮೇಲೆ ಮತ್ತು ದಕ್ಷಿಣ ಭಾಗದ ನ್ಯೂ ಅಲಿಪೋರ್ನಲ್ಲಿರುವ ವಕೀಲರ ನಿವಾಸದ ಮೇಲೂ ದಾಳಿ ನಡೆದಿದೆ ಎಂದಿದ್ದಾರೆ.</p>.<p>‘ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುವ ಗುರಿಯೊಂದಿಗೆ ಈ ದಾಳಿ ನಡೆದಿದೆ. ಸಚಿವರ ಕಚೇರಿಯು ದಾಳಿ ನಡೆಸಬೇಕಾದ ಸ್ಥಳಗಳ ಪಟ್ಟಿಯಲ್ಲಿ ಇರಲಿಲ್ಲ’ ಎಂದು ಇ.ಡಿ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<p>ಸಚಿವರ ಒಡೆತನದ ಸಾಲ್ಟ್ ಲೇಕ್ ಪ್ರದೇಶದಲ್ಲಿನ ರೆಸ್ಟೊರೆಂಟ್ನ ವ್ಯವಸ್ಥಾಪಕರನ್ನು ಪ್ರಶ್ನಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಪಶ್ಚಿಮ ಬಂಗಾಳದ ಸಚಿವ ಸುಜಿತ್ ಬೋಸ್ಗೆ ಸಂಬಂಧಿಸಿದ ಆಸ್ತಿಗಳು ಸೇರಿದಂತೆ ಕೋಲ್ಕತ್ತದ ಏಳು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿದರು.</p>.<p>ಪುರಸಭೆಗಳ ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಈ ಶೋಧ ನಡೆದಿದ್ದು, ಸಚಿವರ ಕಚೇರಿಯಿಂದ ಒಎಂಆರ್ ಶೀಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಸಾಲ್ಟ್ ಲೇಕ್ನಲ್ಲಿರುವ ಸಚಿವರ ನಿವಾಸ– ಗೃಹ ಕಚೇರಿ, ನಾಗೇರ್ ಬಜಾರ್ ಪ್ರದೇಶದ ಕೌನ್ಸಿಲರ್ ಮನೆ, ದಕ್ಷಿಣ ಡುಮ್ ಡುಮ್ ಪುರಸಭೆಯ ಮಾಜಿ ಅಧಿಕಾರಿಗಳ ಮನೆಯಲ್ಲೂ ಇ.ಡಿ ತಂಡಗಳು ಶೋಧ ನಡೆಸಿವೆ ಎಂದು ಅವರು ಹೇಳಿದರು.</p>.<p>ಕೇಂದ್ರ ಕೋಲ್ಕತ್ತದ ಥಂತಾನಿಯಾ ಕಾಲಿಬಾರಿ ಪ್ರದೇಶದ ಮನೆಯೊಂದರ ಮೇಲೆ ಮತ್ತು ದಕ್ಷಿಣ ಭಾಗದ ನ್ಯೂ ಅಲಿಪೋರ್ನಲ್ಲಿರುವ ವಕೀಲರ ನಿವಾಸದ ಮೇಲೂ ದಾಳಿ ನಡೆದಿದೆ ಎಂದಿದ್ದಾರೆ.</p>.<p>‘ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುವ ಗುರಿಯೊಂದಿಗೆ ಈ ದಾಳಿ ನಡೆದಿದೆ. ಸಚಿವರ ಕಚೇರಿಯು ದಾಳಿ ನಡೆಸಬೇಕಾದ ಸ್ಥಳಗಳ ಪಟ್ಟಿಯಲ್ಲಿ ಇರಲಿಲ್ಲ’ ಎಂದು ಇ.ಡಿ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<p>ಸಚಿವರ ಒಡೆತನದ ಸಾಲ್ಟ್ ಲೇಕ್ ಪ್ರದೇಶದಲ್ಲಿನ ರೆಸ್ಟೊರೆಂಟ್ನ ವ್ಯವಸ್ಥಾಪಕರನ್ನು ಪ್ರಶ್ನಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>