<p><strong>ಲಖನೌ</strong>: ಚುನಾವಣಾ ಆಯೋಗವು ‘ಎಸ್ಐಆರ್’ ಮೂಲಕ ದೇಶದ ಜನರ ವಿರುದ್ಧ ದೊಡ್ಡ ಪಿತೂರಿ ನಡೆಸುತ್ತಿದೆ. ಇದು ವಸಾಹತುಶಾಹಿ ಯುಗಕ್ಕಿಂತ ಕೆಟ್ಟದಾದ ವ್ಯವಸ್ಥೆಗೆ ಜನರನ್ನು ನೂಕಲಿದೆ’ ಎಂದು ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. </p><p>ತಮ್ಮ ‘ಎಕ್ಸ್’ ಖಾತೆಯಲ್ಲಿ 20 ಸೆಕೆಂಡ್ಗಳ ವಿಡಿಯೊ ತುಣುಕೊಂದನ್ನು ಪೋಸ್ಟ್ ಮಾಡಿರುವ ಅವರು, ‘ವಿರೋಧ ಪಕ್ಷಗಳ ಜತೆಗೆ ಆಡಳಿತಾರೂಢ ಎನ್ಡಿಎನ ಮಿತ್ರಪಕ್ಷಗಳು ಒಟ್ಟಿಗೆ ಸೇರಿ ಬಿಜೆಪಿ ನಡೆಸುತ್ತಿರುವ ಈ ಮಹಾ ಪಿತೂರಿಯನ್ನು ಬಯಲು ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. </p><p>‘ಎಸ್ಐಆರ್’ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಮಹಾ ವಂಚನೆ. ಜನರು ಇದರ ವಿರುದ್ಧ ಜಾಗೃತರಾಗಿರಬೇಕು. ಸದ್ಯ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗುತ್ತದೆ. ಮುಂದಿನ ದಿನಗಳಲ್ಲಿ ಭೂ ದಾಖಲೆ, ಪಡಿತರ ಚೀಟಿ, ಜಾತಿ–ಆದಾಯ ಪ್ರಮಾಣಪತ್ರ, ಬ್ಯಾಂಕ್ ಖಾತೆಗಳಿಂದಲೂ ಮಧ್ಯಮವರ್ಗದ ಹೆಸರನ್ನು ತೆಗೆದುಹಾಕಲಾಗುತ್ತದೆ‘ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಚುನಾವಣಾ ಆಯೋಗವು ‘ಎಸ್ಐಆರ್’ ಮೂಲಕ ದೇಶದ ಜನರ ವಿರುದ್ಧ ದೊಡ್ಡ ಪಿತೂರಿ ನಡೆಸುತ್ತಿದೆ. ಇದು ವಸಾಹತುಶಾಹಿ ಯುಗಕ್ಕಿಂತ ಕೆಟ್ಟದಾದ ವ್ಯವಸ್ಥೆಗೆ ಜನರನ್ನು ನೂಕಲಿದೆ’ ಎಂದು ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. </p><p>ತಮ್ಮ ‘ಎಕ್ಸ್’ ಖಾತೆಯಲ್ಲಿ 20 ಸೆಕೆಂಡ್ಗಳ ವಿಡಿಯೊ ತುಣುಕೊಂದನ್ನು ಪೋಸ್ಟ್ ಮಾಡಿರುವ ಅವರು, ‘ವಿರೋಧ ಪಕ್ಷಗಳ ಜತೆಗೆ ಆಡಳಿತಾರೂಢ ಎನ್ಡಿಎನ ಮಿತ್ರಪಕ್ಷಗಳು ಒಟ್ಟಿಗೆ ಸೇರಿ ಬಿಜೆಪಿ ನಡೆಸುತ್ತಿರುವ ಈ ಮಹಾ ಪಿತೂರಿಯನ್ನು ಬಯಲು ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. </p><p>‘ಎಸ್ಐಆರ್’ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಮಹಾ ವಂಚನೆ. ಜನರು ಇದರ ವಿರುದ್ಧ ಜಾಗೃತರಾಗಿರಬೇಕು. ಸದ್ಯ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗುತ್ತದೆ. ಮುಂದಿನ ದಿನಗಳಲ್ಲಿ ಭೂ ದಾಖಲೆ, ಪಡಿತರ ಚೀಟಿ, ಜಾತಿ–ಆದಾಯ ಪ್ರಮಾಣಪತ್ರ, ಬ್ಯಾಂಕ್ ಖಾತೆಗಳಿಂದಲೂ ಮಧ್ಯಮವರ್ಗದ ಹೆಸರನ್ನು ತೆಗೆದುಹಾಕಲಾಗುತ್ತದೆ‘ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>