<p><strong>ಸಂಭಲ್(ಉತ್ತರ ಪ್ರದೇಶ):</strong> ಸಂಭಲ್ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪುರಾತನ (ಮೃತ್ಯು ಕೂಪ) ಹೆಸರಿನ ಬಾವಿಯ ಉತ್ಖನನವನ್ನು ಜಿಲ್ಲಾಡಳಿತ ಆರಂಭಿಸಿದೆ.</p><p>ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆ ಹೊಂದಿರುವ ಬಾವಿಗಳನ್ನು ಗುರುತಿಸಿ, ಪುನಶ್ಚೇತನಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ಈ ಉತ್ಖನನ ನಡೆಯುತ್ತಿದೆ.</p><p>ಸ್ಥಳೀಯರ ಪ್ರಕಾರ, ಹಲವು ವರ್ಷಗಳಿಂದ ಈ ಬಾವಿಯನ್ನು ಕಡೆಗಣಿಸಲಾಗಿದ್ದು, ಕಸ ಕಡ್ಡಿ ತುಂಬಿಕೊಂಡಿದೆ.</p><p>ಈ ಬಾವಿಯು ಐತಿಹಾಸಿಕ ಹೆಗ್ಗುರುತು ಮಾತ್ರವಲ್ಲದೆ ಪವಿತ್ರ ಸ್ಥಳ ಎಂದು ನಂಬಲಾಗಿದೆ. ಇಲ್ಲಿ ಸ್ನಾನ ಮಾಡುವುದರಿಂದ ಮೋಕ್ಷವನ್ನು ಪಡೆಯಬಹುದು ಎಂದು ಭಕ್ತರು ನಂಬುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.</p><p>ಬಾವಿಯು ಈ ಪ್ರದೇಶದ ಆಧ್ಯಾತ್ಮಿಕ ರಚನೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಪೌರಾಣಿಕ ಪ್ರಾಮುಖ್ಯತೆಯಿಂದಾಗಿ ಇದನ್ನು ಸ್ಥಳೀಯರು ಹೆಚ್ಚು ನಂಬುತ್ತಾರೆ.</p><p>ಅತ್ಯಂತ ಪುರಾತನ ಮತ್ತು ಪೂಜ್ಯ ತಾಣವಾಗಿರುವ ಮೃತ್ಯು ಕೂಪದ ಉತ್ಖನನಕ್ಕೆ ಗುರುವಾರ ಚಾಲನೆ ನೀಡಲಾಗಿದೆ. ನಗರ ಪಾಲಿಕೆಯ ಸಹಕಾರದೊಂದಿಗೆ ಉತ್ಖನನ ನಡೆಸಲಾಗುತ್ತಿದೆ. ಬಾವಿ ಅತ್ಯಂತ ಜನಪ್ರಿಯವಾಗಿದೆ ಮತ್ತು ಅದರ ನವೀಕರಣವು ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ಹೆಗ್ಗುರುತನ್ನು ಅಭಿವೃದ್ಧಿಪಡಿಸುವಲ್ಲಿ ಜಿಲ್ಲಾಡಳಿತವು ಹೆಚ್ಚು ಸಹಕಾರ ನೀಡಿದೆ" ಎಂದು ಸ್ಥಳೀಯ ಕೌನ್ಸಿಲರ್ ಗಗನ್ ವರ್ಷ್ನಿ ಹೇಳಿದ್ದಾರೆ.</p><p>ಸಂಭಲ್ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ವಂದನಾ ಮಿಶ್ರಾ ಅವರು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್ಐ) ತಂಡದೊಂದಿಗೆ ಹೌಜ್ ಭದ್ದೆ ಸರಾಯಿಯಲ್ಲಿರುವ ಭದ್ರಿಕಾ ಆಶ್ರಮ ತೀರ್ಥ ಮತ್ತು ಚತುರ್ಮುಖ ಕೂಪಕ್ಕೆ ಭೇಟಿ ನೀಡಿದರು.</p><p>ಹೆಚ್ಚಿನ ಅಧ್ಯಯನದ ನಂತರ, ತಂಡವು ಬಾವಿಯ ಇತಿಹಾಸವನ್ನು ಪತ್ತೆ ಮಾಡಿ, ಸಂರಕ್ಷಣೆಗಾಗಿ ಶಿಫಾರಸುಗಳನ್ನು ನೀಡುತ್ತದೆ ಎಂದು ಎಸ್ಡಿಎಂ ಹೇಳಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಭಲ್(ಉತ್ತರ ಪ್ರದೇಶ):</strong> ಸಂಭಲ್ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪುರಾತನ (ಮೃತ್ಯು ಕೂಪ) ಹೆಸರಿನ ಬಾವಿಯ ಉತ್ಖನನವನ್ನು ಜಿಲ್ಲಾಡಳಿತ ಆರಂಭಿಸಿದೆ.</p><p>ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆ ಹೊಂದಿರುವ ಬಾವಿಗಳನ್ನು ಗುರುತಿಸಿ, ಪುನಶ್ಚೇತನಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ಈ ಉತ್ಖನನ ನಡೆಯುತ್ತಿದೆ.</p><p>ಸ್ಥಳೀಯರ ಪ್ರಕಾರ, ಹಲವು ವರ್ಷಗಳಿಂದ ಈ ಬಾವಿಯನ್ನು ಕಡೆಗಣಿಸಲಾಗಿದ್ದು, ಕಸ ಕಡ್ಡಿ ತುಂಬಿಕೊಂಡಿದೆ.</p><p>ಈ ಬಾವಿಯು ಐತಿಹಾಸಿಕ ಹೆಗ್ಗುರುತು ಮಾತ್ರವಲ್ಲದೆ ಪವಿತ್ರ ಸ್ಥಳ ಎಂದು ನಂಬಲಾಗಿದೆ. ಇಲ್ಲಿ ಸ್ನಾನ ಮಾಡುವುದರಿಂದ ಮೋಕ್ಷವನ್ನು ಪಡೆಯಬಹುದು ಎಂದು ಭಕ್ತರು ನಂಬುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.</p><p>ಬಾವಿಯು ಈ ಪ್ರದೇಶದ ಆಧ್ಯಾತ್ಮಿಕ ರಚನೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಪೌರಾಣಿಕ ಪ್ರಾಮುಖ್ಯತೆಯಿಂದಾಗಿ ಇದನ್ನು ಸ್ಥಳೀಯರು ಹೆಚ್ಚು ನಂಬುತ್ತಾರೆ.</p><p>ಅತ್ಯಂತ ಪುರಾತನ ಮತ್ತು ಪೂಜ್ಯ ತಾಣವಾಗಿರುವ ಮೃತ್ಯು ಕೂಪದ ಉತ್ಖನನಕ್ಕೆ ಗುರುವಾರ ಚಾಲನೆ ನೀಡಲಾಗಿದೆ. ನಗರ ಪಾಲಿಕೆಯ ಸಹಕಾರದೊಂದಿಗೆ ಉತ್ಖನನ ನಡೆಸಲಾಗುತ್ತಿದೆ. ಬಾವಿ ಅತ್ಯಂತ ಜನಪ್ರಿಯವಾಗಿದೆ ಮತ್ತು ಅದರ ನವೀಕರಣವು ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ಹೆಗ್ಗುರುತನ್ನು ಅಭಿವೃದ್ಧಿಪಡಿಸುವಲ್ಲಿ ಜಿಲ್ಲಾಡಳಿತವು ಹೆಚ್ಚು ಸಹಕಾರ ನೀಡಿದೆ" ಎಂದು ಸ್ಥಳೀಯ ಕೌನ್ಸಿಲರ್ ಗಗನ್ ವರ್ಷ್ನಿ ಹೇಳಿದ್ದಾರೆ.</p><p>ಸಂಭಲ್ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ವಂದನಾ ಮಿಶ್ರಾ ಅವರು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್ಐ) ತಂಡದೊಂದಿಗೆ ಹೌಜ್ ಭದ್ದೆ ಸರಾಯಿಯಲ್ಲಿರುವ ಭದ್ರಿಕಾ ಆಶ್ರಮ ತೀರ್ಥ ಮತ್ತು ಚತುರ್ಮುಖ ಕೂಪಕ್ಕೆ ಭೇಟಿ ನೀಡಿದರು.</p><p>ಹೆಚ್ಚಿನ ಅಧ್ಯಯನದ ನಂತರ, ತಂಡವು ಬಾವಿಯ ಇತಿಹಾಸವನ್ನು ಪತ್ತೆ ಮಾಡಿ, ಸಂರಕ್ಷಣೆಗಾಗಿ ಶಿಫಾರಸುಗಳನ್ನು ನೀಡುತ್ತದೆ ಎಂದು ಎಸ್ಡಿಎಂ ಹೇಳಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>