<p><strong>ಥಾಣೆ:</strong> ಎಐಐಎಂನ ಭಿವಾಂಡಿ ಘಟಕದ ಮುಖ್ಯಸ್ಥ ಖಲೀದ್ ಗುಡ್ಡು ಮತ್ತು ಅವರ ಸಹೋದರರ ಖಾಸಗಿ ಕಚೇರಿಯಿಂದ ನಕಲಿ ಆಧಾರ್ ಮತ್ತು ಪಡಿತರ ಚೀಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವರಿಬ್ಬರು ಸದ್ಯ ಸುಲಿಗೆ ಮತ್ತು ಇತರ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>364ಎ (ಸುಲಿಗೆಗಾಗಿ ಅಪಹರಣ) ಮತ್ತು 384 (ಸುಲಿಗೆ) ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಗುಡ್ಡು, ಅವರ ಸಹೋದರ ಬಬ್ಲು ಮತ್ತು ಅವರ ಸಹಾಯಕರನ್ನು ಪೊಲೀಸರು ಕಳೆದ ತಿಂಗಳು ಬಂಧಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.</p>.<p>'ಅವರ ವಿರುದ್ಧದ ತನಿಖೆಯ ವೇಳೆ ರಬ್ಬರ್ ಸ್ಟಾಂಪ್ಗಳ ಗುರುತಿನೊಂದಿಗೆ ಖಾಲಿ ರೇಷನ್ ಕಾರ್ಡ್ಗಳನ್ನು ಮತ್ತು 30 ಆಧಾರ್ ಕಾರ್ಡ್ಗಳನ್ನು ಭಿವಾಂಡಿಯಲ್ಲಿರುವ ಅವರ ಖಾಸಗಿ ಕಚೇರಿಯಿಂದ ವಶಪಡಿಸಿಕೊಂಡಿದ್ದಾರೆ' ಎಂದು ಡಿಸಿಪಿ ವಲಯ -2ರ ರಾಜ್ಕುಮಾರ್ ಶಿಂಧೆ ತಿಳಿಸಿದ್ದಾರೆ.</p>.<p>ಪರಿಶೀಲನೆಗಾಗಿ ಖಾಲಿಯಿದ್ದ ಪಡಿತರ ಚೀಟಿಗಳನ್ನು ಅಧಿಕಾರಿಗಳಿಗೆ ಕಳುಹಿಸಿದಾಗ, ಅವುಗಳನ್ನು ಕಚೇರಿಯಿಂದ ನೀಡಲಾಗಿಲ್ಲ ಮತ್ತು ಅವುಗಳ ಮೇಲಿನ ಮುದ್ರೆಯು ಅದಕ್ಕೆ ಸೇರಿದ್ದಲ್ಲ ಎಂದು ತಿಳಿಸಲಾಗಿದೆ.</p>.<p>30 ಆಧಾರ್ ಕಾರ್ಡ್ಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ನಾಲ್ಕು ನಕಲಿ ಎಂದು ತಿಳಿದುಬಂದಿದೆ. ಕಾರ್ಡ್ಗಳಲ್ಲಿ ಹೆಸರುಗಳು ಕಂಡುಬಂದ ಇಬ್ಬರು ವ್ಯಕ್ತಿಗಳನ್ನು ಪ್ರಶ್ನಿಸಿದಾಗ ಹೆಸರುಗಳು, ವಿಳಾಸಗಳು ಮತ್ತು ಫೊಟೋಗಳು ನಕಲಿ ಎಂಬುದು ಬೆಳಕಿಗೆ ಬಂದಿದೆ.</p>.<p>ಈ ಬಗ್ಗೆ ವಿಚಾರಿಸಿದಾಗ, ಈ ಕಾರ್ಡ್ಗಳನ್ನು ಚುನಾವಣಾ ಉದ್ದೇಶಗಳಿಗಾಗಿ ತಯಾರಿಸಲಾಗಿದೆ ಎಂದು ಗುಡ್ಡು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ.</p>.<p>ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 465, 467, 472 ಮತ್ತು 420ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಿಬ್ಬರು ಮತ್ತು ಅವರ ಸಹಚರರ ವಿರುದ್ಧ ಅರ್ಧ ಡಜನ್ ಸುಲಿಗೆ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಥಾಣೆ:</strong> ಎಐಐಎಂನ ಭಿವಾಂಡಿ ಘಟಕದ ಮುಖ್ಯಸ್ಥ ಖಲೀದ್ ಗುಡ್ಡು ಮತ್ತು ಅವರ ಸಹೋದರರ ಖಾಸಗಿ ಕಚೇರಿಯಿಂದ ನಕಲಿ ಆಧಾರ್ ಮತ್ತು ಪಡಿತರ ಚೀಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವರಿಬ್ಬರು ಸದ್ಯ ಸುಲಿಗೆ ಮತ್ತು ಇತರ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>364ಎ (ಸುಲಿಗೆಗಾಗಿ ಅಪಹರಣ) ಮತ್ತು 384 (ಸುಲಿಗೆ) ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಗುಡ್ಡು, ಅವರ ಸಹೋದರ ಬಬ್ಲು ಮತ್ತು ಅವರ ಸಹಾಯಕರನ್ನು ಪೊಲೀಸರು ಕಳೆದ ತಿಂಗಳು ಬಂಧಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.</p>.<p>'ಅವರ ವಿರುದ್ಧದ ತನಿಖೆಯ ವೇಳೆ ರಬ್ಬರ್ ಸ್ಟಾಂಪ್ಗಳ ಗುರುತಿನೊಂದಿಗೆ ಖಾಲಿ ರೇಷನ್ ಕಾರ್ಡ್ಗಳನ್ನು ಮತ್ತು 30 ಆಧಾರ್ ಕಾರ್ಡ್ಗಳನ್ನು ಭಿವಾಂಡಿಯಲ್ಲಿರುವ ಅವರ ಖಾಸಗಿ ಕಚೇರಿಯಿಂದ ವಶಪಡಿಸಿಕೊಂಡಿದ್ದಾರೆ' ಎಂದು ಡಿಸಿಪಿ ವಲಯ -2ರ ರಾಜ್ಕುಮಾರ್ ಶಿಂಧೆ ತಿಳಿಸಿದ್ದಾರೆ.</p>.<p>ಪರಿಶೀಲನೆಗಾಗಿ ಖಾಲಿಯಿದ್ದ ಪಡಿತರ ಚೀಟಿಗಳನ್ನು ಅಧಿಕಾರಿಗಳಿಗೆ ಕಳುಹಿಸಿದಾಗ, ಅವುಗಳನ್ನು ಕಚೇರಿಯಿಂದ ನೀಡಲಾಗಿಲ್ಲ ಮತ್ತು ಅವುಗಳ ಮೇಲಿನ ಮುದ್ರೆಯು ಅದಕ್ಕೆ ಸೇರಿದ್ದಲ್ಲ ಎಂದು ತಿಳಿಸಲಾಗಿದೆ.</p>.<p>30 ಆಧಾರ್ ಕಾರ್ಡ್ಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ನಾಲ್ಕು ನಕಲಿ ಎಂದು ತಿಳಿದುಬಂದಿದೆ. ಕಾರ್ಡ್ಗಳಲ್ಲಿ ಹೆಸರುಗಳು ಕಂಡುಬಂದ ಇಬ್ಬರು ವ್ಯಕ್ತಿಗಳನ್ನು ಪ್ರಶ್ನಿಸಿದಾಗ ಹೆಸರುಗಳು, ವಿಳಾಸಗಳು ಮತ್ತು ಫೊಟೋಗಳು ನಕಲಿ ಎಂಬುದು ಬೆಳಕಿಗೆ ಬಂದಿದೆ.</p>.<p>ಈ ಬಗ್ಗೆ ವಿಚಾರಿಸಿದಾಗ, ಈ ಕಾರ್ಡ್ಗಳನ್ನು ಚುನಾವಣಾ ಉದ್ದೇಶಗಳಿಗಾಗಿ ತಯಾರಿಸಲಾಗಿದೆ ಎಂದು ಗುಡ್ಡು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ.</p>.<p>ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 465, 467, 472 ಮತ್ತು 420ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಿಬ್ಬರು ಮತ್ತು ಅವರ ಸಹಚರರ ವಿರುದ್ಧ ಅರ್ಧ ಡಜನ್ ಸುಲಿಗೆ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>