ಈಮಧ್ಯೆ ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗರಾಲೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಸಾಕಿನಾಕಾ ಅತ್ಯಾಚಾರ ಸಂತ್ರಸ್ತೆಯು ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವೇಳೆ ಟೆಂಪೋದಲ್ಲಿಯೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದ ಕಾನ್ಸ್ಟೇಬಲ್ ರಮೇಶ್ ಕಡುಬಾ ಅಹೇರ್ ಅವರನ್ನು ಶೀಘ್ರದಲ್ಲೇ ಅಭಿನಂದಿಸಲಾಗುವುದು ಎಂದು ತಿಳಿಸಿದ್ದಾರೆ.