<p><strong>ಮುಂಬೈ:</strong> ಎನ್ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ಸೇರಿಕೊಂಡು ರಾಜ್ಯದಲ್ಲಿ ಅಲ್ವಾವಧಿಯ 80 ಗಂಟೆಗಳ ಸರ್ಕಾರವನ್ನು ರಚಿಸಿದ್ದು ತಪ್ಪು. ಆದರೆ ಅದಕ್ಕಾಗಿ ವಿಷಾದವಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ತಿಳಿಸಿದ್ದಾರೆ.</p>.<p>'ನಾನು ವಿಷಾದಿಸುವುದಿಲ್ಲ ಆದರೆ ನಾವು ಅಂತಹ ಸರ್ಕಾರವನ್ನು ರಚಿಸಬಾರದಿತ್ತು. ಇದು ತಪ್ಪು' ಎಂದು ಮರಾಠಿ ದಿನಪತ್ರಿಕೆ ಲೋಕಸತ್ತ ಸಂಪಾದಕರೊಂದಿಗಿನ ಆನ್ಲೈನ್ ಸಂವಾದದ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹೇಳಿದ್ದಾರೆ.</p>.<p>ನವೆಂಬರ್ 23, 2019 ರಂದು ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ಬಿಜೆಪಿ ಅಲ್ಲದ ಸರ್ಕಾರವನ್ನು ರಚಿಸಲು ಕಸರತ್ತು ನಡೆಸುತ್ತಿರುವ ಮಧ್ಯೆಯೇ, ಫಡಣವಿಸ್ ಮತ್ತು ಪವಾರ್ ಅವರು ಮುಂಜಾನೆಯೇ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.</p>.<p>ಮತದಾನ ಪೂರ್ವದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ನಂತರ 'ನಿರಾಕರಿಸಿದ್ದನ್ನು' ಉಲ್ಲೇಖಿಸಿದ ಅವರು, 'ಇದು (ಅಜಿತ್ ಪವಾರ್ ಅವರೊಂದಿಗೆ ಸರ್ಕಾರ ರಚಿಸಿದ್ದು) ತಪ್ಪಾಗಿದ್ದರೂ, ನೀವು ಬೆನ್ನಿಗೆ ಇರಿದಾಗ, ನಾವು ರಾಜಕೀಯದಲ್ಲಿ ಜೀವಂತವಾಗಿರಲೇಬೇಕಾಗುತ್ತದೆ' ಎಂದು ತಿಳಿಸಿದ್ದಾರೆ.</p>.<p>'ರಾಜಕೀಯದಲ್ಲಿ ಜೀವಂತವಾಗಿರಲು ನೀವು ಮಾಡಬೇಕಾದುದನ್ನು ಮಾಡಬೇಕು. ಆಗ ನಿಮ್ಮ ಬೆನ್ನಿಗೆ ಚೂರಿ ಇರಿದಾಗ, ನೀವು ಅವರಿಗೆ ಸೂಕ್ತ ಪ್ರತಿಕ್ರಿಯೆಯನ್ನು ನೀಡಬೇಕಾಗುತ್ತದೆ'. ಪವಾರ್ ಅವರೊಂದಿಗೆ ಸರ್ಕಾರ ರಚಿಸುವ ನಿರ್ಧಾರವು ಕೋಪವನ್ನು ಒಳಗೊಂಡ 'ಮಿಶ್ರ ಭಾವನೆಗಳ' ಪರಿಣಾಮವಾಗಿತ್ತು' ಎಂದು ಅವರು ಹೇಳಿದರು.</p>.<p>'ಆದ್ದರಿಂದ ಒಂದು ಅವಕಾಶ ಬಂದಾಗ, ನಾವು ಅದನ್ನು ಬಳಸಿಕೊಂಡಿದ್ದೇವೆ. ಆಗ ನಾವು ಮಾಡಿದ್ದು ನಮ್ಮ ಬೆಂಬಲಿಗರು ಮತ್ತು ಬಿಜೆಪಿ ಬೆಂಬಲಿಗರಿಗೂ ಇಷ್ಟವಾಗಿರಲಿಲ್ಲ ಎಂದು ಈಗ ನಾನು ಹೇಳಬಲ್ಲೆ' ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಫಡಣವಿಸ್ ಹೇಳಿದ್ದಾರೆ.</p>.<p>'ನಮ್ಮ ಬೆಂಬಲಿಗರ ದೃಷ್ಟಿಯಲ್ಲಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ನಾವು ಏನು ಮಾಡಿದೆವೋ ಅದನ್ನು ನಾವು ಪ್ರಯತ್ನಿಸದಿದ್ದಲ್ಲಿ ಉತ್ತಮವಾಗಿರುತ್ತಿತ್ತು. ಆದರೆ ಆ ಸಮಯದಲ್ಲಿ ಅದು ಸರಿಯಾದ ನಿರ್ಧಾರ ಎಂದು ನಾನು ಭಾವಿಸಿದೆ' ಎಂದು ತಿಳಿಸಿದ್ದಾರೆ.</p>.<p>ತರಾತುರಿಯಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅಜಿತ್ ಪವಾರ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಮೂರು ದಿನಗಳ ನಂತರ 2019 ರ ನವೆಂಬರ್ನಲ್ಲಿ ಫಡಣವಿಸ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಎನ್ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ಸೇರಿಕೊಂಡು ರಾಜ್ಯದಲ್ಲಿ ಅಲ್ವಾವಧಿಯ 80 ಗಂಟೆಗಳ ಸರ್ಕಾರವನ್ನು ರಚಿಸಿದ್ದು ತಪ್ಪು. ಆದರೆ ಅದಕ್ಕಾಗಿ ವಿಷಾದವಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ತಿಳಿಸಿದ್ದಾರೆ.</p>.<p>'ನಾನು ವಿಷಾದಿಸುವುದಿಲ್ಲ ಆದರೆ ನಾವು ಅಂತಹ ಸರ್ಕಾರವನ್ನು ರಚಿಸಬಾರದಿತ್ತು. ಇದು ತಪ್ಪು' ಎಂದು ಮರಾಠಿ ದಿನಪತ್ರಿಕೆ ಲೋಕಸತ್ತ ಸಂಪಾದಕರೊಂದಿಗಿನ ಆನ್ಲೈನ್ ಸಂವಾದದ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹೇಳಿದ್ದಾರೆ.</p>.<p>ನವೆಂಬರ್ 23, 2019 ರಂದು ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ಬಿಜೆಪಿ ಅಲ್ಲದ ಸರ್ಕಾರವನ್ನು ರಚಿಸಲು ಕಸರತ್ತು ನಡೆಸುತ್ತಿರುವ ಮಧ್ಯೆಯೇ, ಫಡಣವಿಸ್ ಮತ್ತು ಪವಾರ್ ಅವರು ಮುಂಜಾನೆಯೇ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.</p>.<p>ಮತದಾನ ಪೂರ್ವದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ನಂತರ 'ನಿರಾಕರಿಸಿದ್ದನ್ನು' ಉಲ್ಲೇಖಿಸಿದ ಅವರು, 'ಇದು (ಅಜಿತ್ ಪವಾರ್ ಅವರೊಂದಿಗೆ ಸರ್ಕಾರ ರಚಿಸಿದ್ದು) ತಪ್ಪಾಗಿದ್ದರೂ, ನೀವು ಬೆನ್ನಿಗೆ ಇರಿದಾಗ, ನಾವು ರಾಜಕೀಯದಲ್ಲಿ ಜೀವಂತವಾಗಿರಲೇಬೇಕಾಗುತ್ತದೆ' ಎಂದು ತಿಳಿಸಿದ್ದಾರೆ.</p>.<p>'ರಾಜಕೀಯದಲ್ಲಿ ಜೀವಂತವಾಗಿರಲು ನೀವು ಮಾಡಬೇಕಾದುದನ್ನು ಮಾಡಬೇಕು. ಆಗ ನಿಮ್ಮ ಬೆನ್ನಿಗೆ ಚೂರಿ ಇರಿದಾಗ, ನೀವು ಅವರಿಗೆ ಸೂಕ್ತ ಪ್ರತಿಕ್ರಿಯೆಯನ್ನು ನೀಡಬೇಕಾಗುತ್ತದೆ'. ಪವಾರ್ ಅವರೊಂದಿಗೆ ಸರ್ಕಾರ ರಚಿಸುವ ನಿರ್ಧಾರವು ಕೋಪವನ್ನು ಒಳಗೊಂಡ 'ಮಿಶ್ರ ಭಾವನೆಗಳ' ಪರಿಣಾಮವಾಗಿತ್ತು' ಎಂದು ಅವರು ಹೇಳಿದರು.</p>.<p>'ಆದ್ದರಿಂದ ಒಂದು ಅವಕಾಶ ಬಂದಾಗ, ನಾವು ಅದನ್ನು ಬಳಸಿಕೊಂಡಿದ್ದೇವೆ. ಆಗ ನಾವು ಮಾಡಿದ್ದು ನಮ್ಮ ಬೆಂಬಲಿಗರು ಮತ್ತು ಬಿಜೆಪಿ ಬೆಂಬಲಿಗರಿಗೂ ಇಷ್ಟವಾಗಿರಲಿಲ್ಲ ಎಂದು ಈಗ ನಾನು ಹೇಳಬಲ್ಲೆ' ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಫಡಣವಿಸ್ ಹೇಳಿದ್ದಾರೆ.</p>.<p>'ನಮ್ಮ ಬೆಂಬಲಿಗರ ದೃಷ್ಟಿಯಲ್ಲಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ನಾವು ಏನು ಮಾಡಿದೆವೋ ಅದನ್ನು ನಾವು ಪ್ರಯತ್ನಿಸದಿದ್ದಲ್ಲಿ ಉತ್ತಮವಾಗಿರುತ್ತಿತ್ತು. ಆದರೆ ಆ ಸಮಯದಲ್ಲಿ ಅದು ಸರಿಯಾದ ನಿರ್ಧಾರ ಎಂದು ನಾನು ಭಾವಿಸಿದೆ' ಎಂದು ತಿಳಿಸಿದ್ದಾರೆ.</p>.<p>ತರಾತುರಿಯಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅಜಿತ್ ಪವಾರ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಮೂರು ದಿನಗಳ ನಂತರ 2019 ರ ನವೆಂಬರ್ನಲ್ಲಿ ಫಡಣವಿಸ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>