<p><strong>ಗುವಾಹಟಿ:</strong> ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಕುಕಿ ಸಮುದಾಯ ಅಧಿಕವಿರುವ ಕಾಂಗ್ಪೋಪ್ಕಿ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ಹಾಗೂ ಕುಕಿ ಶಸಸ್ತ್ರಧಾರಿ ವ್ಯಕ್ತಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ.</p><p>ಬಂಧಿತರು ಗ್ರಾಮದ ಸ್ವಯಂ ಸೇವಕರಾಗಿದ್ದು, ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ಪೋಪ್ಕಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.</p>.ಮಣಿಪುರ ಹಿಂಸಾಚಾರ: ಮೌನ ಮುರಿದ ಪ್ರಧಾನಿ ಮೋದಿ .<p>ಮೂವರನ್ನು ಕೈತೆಲೆಂಬಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್. ಹೆಂಗ್ಜೊಲ್ ಗ್ರಾಮದಲ್ಲಿ ಬಂಧಿಸಲಾಗಿತ್ತು.</p><p>ರಾಷ್ಟ್ರೀಯ ತನಿಖಾ ದಳ ನೀಡಿದ್ದ ಗುಪ್ತಚರ ಮಾಹಿತಿಯನ್ನು ಆಧರಿಸಿ ಮಣಿಪುರ ಪೊಲೀಸರು ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದರು. ಬಂಧಿತರು ಭೂಗತ ಸಂಸ್ಥೆಯೊಂದಕ್ಕೆ ಸೇರಿದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p><p>ಬಂಧಿತರು ಈ ಹಿಂದೆ ನಡೆದ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಅವರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕಾನೂನು ಕ್ರಮಕ್ಕೆ ಅವರನ್ನು ಎನ್ಐಎ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಮಣಿಪುರ: ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ. <p>ಶಸ್ತ್ರಸಜ್ಜಿತ ಉಗ್ರರು ಗುಂಡು ಹಾರಿಸಿದಾಗ ಮತ್ತು ಕಾರ್ಯಾಚರಣೆಗೆ ನಾಗರಿಕರು ಅಡ್ಡಿಪಡಿಸಿದಾಗ ಭದ್ರತಾ ಪಡೆಗಳು ಗರಿಷ್ಠ ಸಂಯಮ ಪ್ರದರ್ಶಿಸಿದವು. ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಬೇಕಾಯಿತು ಎಂದು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.</p><p>ಒಂದು ಎಂಕೆ–3 ರೈಫಲ್, ಒಂದು ಸಿಂಗಲ್ ಬ್ಯಾರೆಲ್ ಬ್ರೀಚ್ ಲೋಡರ್ ಬಂದೂಕು ಹಾಗೂ 1,382 ಸುತ್ತುಗಳ ಮದ್ದುಗುಂಡುಗಳನ್ನು ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p>.ಮಣಿಪುರ– ಅಸ್ಸಾಂ ಗಡಿಯಲ್ಲಿ ಭದ್ರತಾ ಸಮಸ್ಯೆ; ಮುಖ್ಯಮಂತ್ರಿಗಳ ಭೇಟಿ. <p>ಮೈತೇಯಿ ಸಮುದಾಯದವರ ದಾಳಿಯಿಂದ ಕುಕಿಗಳನ್ನು ರಕ್ಷಣೆ ಮಾಡಲು ಇದ್ದ ಗ್ರಾಮದ ಸ್ವಯಂಸೇವಕರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಹೇಳಿದಂತೆ ದಂಗೆಕೋರ ಗುಂಪಿಗೆ ಸೇರಿದವರಲ್ಲ ಎಂದು ಕುಕಿ ಸಂಘಟನೆಗಳಾದ ‘ಕುಕಿ ಇನ್ಪಿ’ ಹಾಗೂ ‘ಬುಡಕಟ್ಟು ಒಗ್ಗಟ್ಟು ಸಮಿತಿ’ ಹೇಳಿದೆ. ಅಲ್ಲದೆ ಪೊಲೀಸರ ಈ ಕೃತ್ಯ ಖಂಡಿಸಿ ಈ ಎರಡು ಸಂಘಟನೆಗಳು ಮಂಗಳವಾರ 12 ಗಂಟೆಗಳ ಬಂದ್ ಘೋಷಿಸಿದ್ದವು.</p> .ಮಣಿಪುರ ಸಂಘರ್ಷ | ಗ್ರಾಮಸ್ಥರ ರಕ್ಷಣೆಗಿಳಿದ ತರುಣ ‘ಸ್ವಯಂ ಸೇವಕರು’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ:</strong> ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಕುಕಿ ಸಮುದಾಯ ಅಧಿಕವಿರುವ ಕಾಂಗ್ಪೋಪ್ಕಿ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ಹಾಗೂ ಕುಕಿ ಶಸಸ್ತ್ರಧಾರಿ ವ್ಯಕ್ತಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ.</p><p>ಬಂಧಿತರು ಗ್ರಾಮದ ಸ್ವಯಂ ಸೇವಕರಾಗಿದ್ದು, ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ಪೋಪ್ಕಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.</p>.ಮಣಿಪುರ ಹಿಂಸಾಚಾರ: ಮೌನ ಮುರಿದ ಪ್ರಧಾನಿ ಮೋದಿ .<p>ಮೂವರನ್ನು ಕೈತೆಲೆಂಬಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್. ಹೆಂಗ್ಜೊಲ್ ಗ್ರಾಮದಲ್ಲಿ ಬಂಧಿಸಲಾಗಿತ್ತು.</p><p>ರಾಷ್ಟ್ರೀಯ ತನಿಖಾ ದಳ ನೀಡಿದ್ದ ಗುಪ್ತಚರ ಮಾಹಿತಿಯನ್ನು ಆಧರಿಸಿ ಮಣಿಪುರ ಪೊಲೀಸರು ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದರು. ಬಂಧಿತರು ಭೂಗತ ಸಂಸ್ಥೆಯೊಂದಕ್ಕೆ ಸೇರಿದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p><p>ಬಂಧಿತರು ಈ ಹಿಂದೆ ನಡೆದ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಅವರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕಾನೂನು ಕ್ರಮಕ್ಕೆ ಅವರನ್ನು ಎನ್ಐಎ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಮಣಿಪುರ: ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ. <p>ಶಸ್ತ್ರಸಜ್ಜಿತ ಉಗ್ರರು ಗುಂಡು ಹಾರಿಸಿದಾಗ ಮತ್ತು ಕಾರ್ಯಾಚರಣೆಗೆ ನಾಗರಿಕರು ಅಡ್ಡಿಪಡಿಸಿದಾಗ ಭದ್ರತಾ ಪಡೆಗಳು ಗರಿಷ್ಠ ಸಂಯಮ ಪ್ರದರ್ಶಿಸಿದವು. ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಬೇಕಾಯಿತು ಎಂದು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.</p><p>ಒಂದು ಎಂಕೆ–3 ರೈಫಲ್, ಒಂದು ಸಿಂಗಲ್ ಬ್ಯಾರೆಲ್ ಬ್ರೀಚ್ ಲೋಡರ್ ಬಂದೂಕು ಹಾಗೂ 1,382 ಸುತ್ತುಗಳ ಮದ್ದುಗುಂಡುಗಳನ್ನು ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p>.ಮಣಿಪುರ– ಅಸ್ಸಾಂ ಗಡಿಯಲ್ಲಿ ಭದ್ರತಾ ಸಮಸ್ಯೆ; ಮುಖ್ಯಮಂತ್ರಿಗಳ ಭೇಟಿ. <p>ಮೈತೇಯಿ ಸಮುದಾಯದವರ ದಾಳಿಯಿಂದ ಕುಕಿಗಳನ್ನು ರಕ್ಷಣೆ ಮಾಡಲು ಇದ್ದ ಗ್ರಾಮದ ಸ್ವಯಂಸೇವಕರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಹೇಳಿದಂತೆ ದಂಗೆಕೋರ ಗುಂಪಿಗೆ ಸೇರಿದವರಲ್ಲ ಎಂದು ಕುಕಿ ಸಂಘಟನೆಗಳಾದ ‘ಕುಕಿ ಇನ್ಪಿ’ ಹಾಗೂ ‘ಬುಡಕಟ್ಟು ಒಗ್ಗಟ್ಟು ಸಮಿತಿ’ ಹೇಳಿದೆ. ಅಲ್ಲದೆ ಪೊಲೀಸರ ಈ ಕೃತ್ಯ ಖಂಡಿಸಿ ಈ ಎರಡು ಸಂಘಟನೆಗಳು ಮಂಗಳವಾರ 12 ಗಂಟೆಗಳ ಬಂದ್ ಘೋಷಿಸಿದ್ದವು.</p> .ಮಣಿಪುರ ಸಂಘರ್ಷ | ಗ್ರಾಮಸ್ಥರ ರಕ್ಷಣೆಗಿಳಿದ ತರುಣ ‘ಸ್ವಯಂ ಸೇವಕರು’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>