<p><strong>ನವದೆಹಲಿ:</strong> ಕುಲಾಂತರಿ ತಳಿಗಳನ್ನು ಅನುಮೋದಿಸುವ ಹಾಗೂ ನಿಯಂತ್ರಿಸುವ ಹೊಣೆ ಹೊತ್ತ ‘ಕುಲಾಂತರಿತಳಿ ಎಂಜಿನಿಯರಿಂಗ್ ಪರಿಶೀಲನಾ ಸಮಿತಿ’ಯ (ಜಿಇಎಸಿ) ಕಾರ್ಯವೈಖರಿಯಲ್ಲಿ ಮತ್ತಷ್ಟು ಪಾರದರ್ಶಕತೆ ತರುವುದಕ್ಕಾಗಿ, ನಿಯಮಗಳಿಗೆ ತಿದ್ದುಪಡಿಗಳನ್ನು ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.</p>.<p>ಈ ಕುರಿತು ಕೇಂದ್ರ ಸರ್ಕಾರ ಡಿ.31ರಂದು ಅಧಿಸೂಚನೆ ಪ್ರಕಟಿಸಿದೆ.</p>.<p>ಜಿಇಎಸಿ ಸದಸ್ಯರ ವೈಯಕ್ತಿಕ ಅಥವಾ ವೃತ್ತಿಪರತೆಯ ಹಿತಾಸಕ್ತಿಗಳು ಅವರು ಕೈಗೊಳ್ಳುವ ನಿರ್ಧಾರದ ಮೇಲೆ ಪರಿಣಾಮ ಬೀರುವಂತಿದ್ದಲ್ಲಿ, ಅವುಗಳನ್ನು ಸದಸ್ಯರು ಬಹಿರಂಗಪಡಿಸಬೇಕು ಎಂಬುದು ಸೇರಿದಂತೆ ಹಲವು ಅಂಶಗಳನ್ನು ಪ್ರಸ್ತಾವಿತ ತಿದ್ದುಪಡಿ ಒಳಗೊಂಡಿದೆ. </p>.<p>ಪ್ರಸ್ತಾವಿತ ತಿದ್ದುಪಡಿಗಳ ಕುರಿತು ಸಾರ್ವಜನಿಕರು 60 ದಿನಗಳ ಒಳಗಾಗಿ ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಬಹುದು.</p>.<h2>ಅಧಿಸೂಚನೆಯಲ್ಲಿನ ಪ್ರಮುಖ ಅಂಶಗಳು</h2>.<p>* ಸಮಿತಿಯ ಪರಿಗಣನೆಯಲ್ಲಿರುವ ಯಾವುದೇ ವಿಚಾರವು ನೇರವಾಗಿ ಇಲ್ಲವೇ ಪರೋಕ್ಷವಾಗಿ ಸದಸ್ಯರೊಂದಿಗೆ ನಂಟು ಹೊಂದಿದ್ದಲ್ಲಿ, ಆ ವಿಚಾರ ಕುರಿತ ಚರ್ಚೆಗಳಿಂದ ಸದಸ್ಯರು ದೂರ ಉಳಿಯಬೇಕು</p>.<p>* ಸಮಿತಿಗೆ ನೇಮಕಗೊಂಡ ಸಂದರ್ಭದಲ್ಲಿ, ತಜ್ಞರು ‘ಹಿತಾಸಕ್ತಿ ಸಂಘರ್ಷ’ ಕುರಿತಂತೆ ಲಿಖಿತವಾಗಿ ಘೋಷಣೆಗಳನ್ನು ಸಲ್ಲಿಸಬೇಕು</p>.<p>* ಹೊಸದಾಗಿ ಯಾವುದೇ ವಿಚಾರ ಪ್ರಸ್ತಾಪಗೊಂಡ ಸಂದರ್ಭದಲ್ಲಿ/ಸನ್ನಿವೇಶ ಸೃಷ್ಟಿಯಾದ ವೇಳೆ, ಈ ಘೋಷಣೆಗಳನ್ನು ಸದಸ್ಯರು ಅಪ್ಡೇಟ್ ಮಾಡಬೇಕು</p>.<p>* ಯಾವುದೇ ಸದಸ್ಯರಿಗೆ ಸಂಬಂಧಿಸಿ ‘ಹಿತಾಸಕ್ತಿ ಸಂಘರ್ಷ’ವಿರುವ ಬಗ್ಗೆ ಖಚಿತತೆ ಕಂಡುಬರದಿದ್ದ ಸಂದರ್ಭದಲ್ಲಿ, ಸಮಿತಿಯ ಮುಖ್ಯಸ್ಥರು ಅಂತಿಮ ತೀರ್ಮಾನ ತೆಗೆದುಕೊಳ್ಳುವರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕುಲಾಂತರಿ ತಳಿಗಳನ್ನು ಅನುಮೋದಿಸುವ ಹಾಗೂ ನಿಯಂತ್ರಿಸುವ ಹೊಣೆ ಹೊತ್ತ ‘ಕುಲಾಂತರಿತಳಿ ಎಂಜಿನಿಯರಿಂಗ್ ಪರಿಶೀಲನಾ ಸಮಿತಿ’ಯ (ಜಿಇಎಸಿ) ಕಾರ್ಯವೈಖರಿಯಲ್ಲಿ ಮತ್ತಷ್ಟು ಪಾರದರ್ಶಕತೆ ತರುವುದಕ್ಕಾಗಿ, ನಿಯಮಗಳಿಗೆ ತಿದ್ದುಪಡಿಗಳನ್ನು ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.</p>.<p>ಈ ಕುರಿತು ಕೇಂದ್ರ ಸರ್ಕಾರ ಡಿ.31ರಂದು ಅಧಿಸೂಚನೆ ಪ್ರಕಟಿಸಿದೆ.</p>.<p>ಜಿಇಎಸಿ ಸದಸ್ಯರ ವೈಯಕ್ತಿಕ ಅಥವಾ ವೃತ್ತಿಪರತೆಯ ಹಿತಾಸಕ್ತಿಗಳು ಅವರು ಕೈಗೊಳ್ಳುವ ನಿರ್ಧಾರದ ಮೇಲೆ ಪರಿಣಾಮ ಬೀರುವಂತಿದ್ದಲ್ಲಿ, ಅವುಗಳನ್ನು ಸದಸ್ಯರು ಬಹಿರಂಗಪಡಿಸಬೇಕು ಎಂಬುದು ಸೇರಿದಂತೆ ಹಲವು ಅಂಶಗಳನ್ನು ಪ್ರಸ್ತಾವಿತ ತಿದ್ದುಪಡಿ ಒಳಗೊಂಡಿದೆ. </p>.<p>ಪ್ರಸ್ತಾವಿತ ತಿದ್ದುಪಡಿಗಳ ಕುರಿತು ಸಾರ್ವಜನಿಕರು 60 ದಿನಗಳ ಒಳಗಾಗಿ ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಬಹುದು.</p>.<h2>ಅಧಿಸೂಚನೆಯಲ್ಲಿನ ಪ್ರಮುಖ ಅಂಶಗಳು</h2>.<p>* ಸಮಿತಿಯ ಪರಿಗಣನೆಯಲ್ಲಿರುವ ಯಾವುದೇ ವಿಚಾರವು ನೇರವಾಗಿ ಇಲ್ಲವೇ ಪರೋಕ್ಷವಾಗಿ ಸದಸ್ಯರೊಂದಿಗೆ ನಂಟು ಹೊಂದಿದ್ದಲ್ಲಿ, ಆ ವಿಚಾರ ಕುರಿತ ಚರ್ಚೆಗಳಿಂದ ಸದಸ್ಯರು ದೂರ ಉಳಿಯಬೇಕು</p>.<p>* ಸಮಿತಿಗೆ ನೇಮಕಗೊಂಡ ಸಂದರ್ಭದಲ್ಲಿ, ತಜ್ಞರು ‘ಹಿತಾಸಕ್ತಿ ಸಂಘರ್ಷ’ ಕುರಿತಂತೆ ಲಿಖಿತವಾಗಿ ಘೋಷಣೆಗಳನ್ನು ಸಲ್ಲಿಸಬೇಕು</p>.<p>* ಹೊಸದಾಗಿ ಯಾವುದೇ ವಿಚಾರ ಪ್ರಸ್ತಾಪಗೊಂಡ ಸಂದರ್ಭದಲ್ಲಿ/ಸನ್ನಿವೇಶ ಸೃಷ್ಟಿಯಾದ ವೇಳೆ, ಈ ಘೋಷಣೆಗಳನ್ನು ಸದಸ್ಯರು ಅಪ್ಡೇಟ್ ಮಾಡಬೇಕು</p>.<p>* ಯಾವುದೇ ಸದಸ್ಯರಿಗೆ ಸಂಬಂಧಿಸಿ ‘ಹಿತಾಸಕ್ತಿ ಸಂಘರ್ಷ’ವಿರುವ ಬಗ್ಗೆ ಖಚಿತತೆ ಕಂಡುಬರದಿದ್ದ ಸಂದರ್ಭದಲ್ಲಿ, ಸಮಿತಿಯ ಮುಖ್ಯಸ್ಥರು ಅಂತಿಮ ತೀರ್ಮಾನ ತೆಗೆದುಕೊಳ್ಳುವರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>