<p><strong>ಕಥುವಾ:</strong> ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹದಲ್ಲಿ ಮನೆ ಕಳೆದುಕೊಂಡು ಕುಟುಂಬವೊಂದಕ್ಕೆ ಆಸರೆ ನೀಡುವ ಮೂಲಕ ಧಾರ್ಮಿಕ ಸಾಮರಸ್ಯ ಮೆರೆಯಲಾಗಿದೆ.</p><p>ಕಥುವಾ ಜಿಲ್ಲೆಯ ಬಾನಿ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ಜಾವೇದ್ ಅಹಮ್ಮದ್ ಎಂಬುವರು ಮನೆ ಕಳೆದುಕೊಂಡಿದ್ದರು. ಈ ವೇಳೆ ಅವರ ಕಟುಂಬಕ್ಕೆ ಸುಭಾಶ್ ಎಂಬುವವರು ಆಸರೆ ನೀಡಿ ಧಾರ್ಮಿಕ ಸಾಮರಸ್ಯ ಮೆರೆದಿದ್ದಾರೆ.</p>.ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ: ಸಾವಿನ ಸಂಖ್ಯೆ 60ಕ್ಕೆ ಏರಿಕೆ.ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಫೋಟದ ಶಬ್ದ: ಮೊಳಗಿದ ಸೈರನ್, ವಿದ್ಯುತ್ ಸ್ಥಗಿತ.<p>ಪ್ರವಾಹದಲ್ಲಿ ನಮ್ಮ ಮನೆ ಹಾಳಾಗಿದೆ. ಎಲ್ಲಿಯೂ ನಮಗೆ ಸಹಾಯ ಸಿಗಲಿಲ್ಲ, ಈ ವೇಳೆ ಸುಭಾಶ್ ನಮಗೆ ಆಶ್ರಯ ನೀಡಿದರು. ಈಗ ನಾವು ಅವರ ಮನೆಯಲ್ಲಿ ಆಶ್ರಯ ಪಡೆದಿದ್ದೇವೆ. ಅವರು ನಮಗೆ ಮೊದಲ ಮಹಡಿಯಲ್ಲಿರುವ ಎರಡು ಕೊಠಡಿಗಳನ್ನು ನೀಡಿದ್ದಾರೆ. ಅವರು ಎರಡನೇ ಮಹಡಿಯಲ್ಲಿದ್ದಾರೆ. ನಾವು ನಮ್ಮದೇ ಮನೆಯಲ್ಲಿರುವಂತೆ ಭಾಸವಾಗುತ್ತಿದೆ ಎಂದು ಜಾವೇದ್ ಅಹಮ್ಮದ್ ಹೇಳಿದ್ದಾರೆ.</p><p>ಅವರು ನಮಗೆ ದಿನಸಿ ಸಾಮಗ್ರಿ, ಅಗತ್ಯ ವಸ್ತುಗಳನ್ನು ನೀಡಿದ್ದಾರೆ ಎಂದು ಸುಬಾಶ್ ಅವರ ಮಾನವೀಯ ನೆರವನ್ನು ಜಾವೇದ್ ಮೆಚ್ಚಿಕೊಂಡಿದ್ದಾರೆ. ನಾನು ಮನೆ ಕಳೆದುಕೊಂಡಿರುವುದರಿಂದ ಸರ್ಕಾರ ಪರಿಹಾರ ನೀಡಬೇಕೆಂದು ಜಾವೇದ್ ಮನವಿ ಮಾಡಿದರು.</p><p>ಜಾವೇದ್ ಅಹಮ್ಮದ್ ಹಾಗೂ ಅವರ ತಂದೆ-ತಾಯಿ, ಇಬ್ಬರು ದೃಷ್ಟಿಹೀನ ಮಕ್ಕಳು ಸೇರಿ ಎಂಟು ಮಂದಿ ಸುಭಾಶ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. </p><p>ಸ್ಥಳೀಯ ಶಾಸಕರಾದ ರಾಮೇಶ್ವರ್ ಸಿಂಗ್ ಈ ಕುಟುಂಬಗಳನ್ನು ಭೇಟಿ ಮಾಡಿ, ಇದು ಜಮ್ಮು-ಕಾಶ್ಮೀರದ ನಿಜವಾದ ಸೌಂದರ್ಯ, ಸಂಕಷ್ಟದ ಸಮಯದಲ್ಲಿ ಏಕತೆ, ಮಾನವೀಯತೆ ಎಲ್ಲಕ್ಕಿಂತ ಮುಖ್ಯ. ಇಂತಹ ಮಾನವೀಯ ಘಟನೆಗಳು ಸ್ಥಳೀಯ ಸಮುದಾಯಗಳ ಏಕತೆ, ಧೈರ್ಯ ಹಾಗೂ ಸಾಮರಸ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದ್ದಾರೆ. </p><p>ಅಧಿಕಾರಿಗಳು ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಪರಿಹಾರ ಹಾಗೂ ಪುನರ್ವಸತಿ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಅವರ ಹೇಳಿದ್ದಾರೆ.</p>.ಜಮ್ಮು ಮತ್ತು ಕಾಶ್ಮೀರ: ಭಾರಿ ಮಳೆ, 950 ಮಂದಿ ಸ್ಥಳಾಂತರ.ಜಮ್ಮು ಮತ್ತು ಕಾಶ್ಮೀರ: ಮತ್ತೆ ಮೂವರು ಉಗ್ರರ ಮನೆಗಳು ಧ್ವಂಸ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಥುವಾ:</strong> ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹದಲ್ಲಿ ಮನೆ ಕಳೆದುಕೊಂಡು ಕುಟುಂಬವೊಂದಕ್ಕೆ ಆಸರೆ ನೀಡುವ ಮೂಲಕ ಧಾರ್ಮಿಕ ಸಾಮರಸ್ಯ ಮೆರೆಯಲಾಗಿದೆ.</p><p>ಕಥುವಾ ಜಿಲ್ಲೆಯ ಬಾನಿ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ಜಾವೇದ್ ಅಹಮ್ಮದ್ ಎಂಬುವರು ಮನೆ ಕಳೆದುಕೊಂಡಿದ್ದರು. ಈ ವೇಳೆ ಅವರ ಕಟುಂಬಕ್ಕೆ ಸುಭಾಶ್ ಎಂಬುವವರು ಆಸರೆ ನೀಡಿ ಧಾರ್ಮಿಕ ಸಾಮರಸ್ಯ ಮೆರೆದಿದ್ದಾರೆ.</p>.ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ: ಸಾವಿನ ಸಂಖ್ಯೆ 60ಕ್ಕೆ ಏರಿಕೆ.ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಫೋಟದ ಶಬ್ದ: ಮೊಳಗಿದ ಸೈರನ್, ವಿದ್ಯುತ್ ಸ್ಥಗಿತ.<p>ಪ್ರವಾಹದಲ್ಲಿ ನಮ್ಮ ಮನೆ ಹಾಳಾಗಿದೆ. ಎಲ್ಲಿಯೂ ನಮಗೆ ಸಹಾಯ ಸಿಗಲಿಲ್ಲ, ಈ ವೇಳೆ ಸುಭಾಶ್ ನಮಗೆ ಆಶ್ರಯ ನೀಡಿದರು. ಈಗ ನಾವು ಅವರ ಮನೆಯಲ್ಲಿ ಆಶ್ರಯ ಪಡೆದಿದ್ದೇವೆ. ಅವರು ನಮಗೆ ಮೊದಲ ಮಹಡಿಯಲ್ಲಿರುವ ಎರಡು ಕೊಠಡಿಗಳನ್ನು ನೀಡಿದ್ದಾರೆ. ಅವರು ಎರಡನೇ ಮಹಡಿಯಲ್ಲಿದ್ದಾರೆ. ನಾವು ನಮ್ಮದೇ ಮನೆಯಲ್ಲಿರುವಂತೆ ಭಾಸವಾಗುತ್ತಿದೆ ಎಂದು ಜಾವೇದ್ ಅಹಮ್ಮದ್ ಹೇಳಿದ್ದಾರೆ.</p><p>ಅವರು ನಮಗೆ ದಿನಸಿ ಸಾಮಗ್ರಿ, ಅಗತ್ಯ ವಸ್ತುಗಳನ್ನು ನೀಡಿದ್ದಾರೆ ಎಂದು ಸುಬಾಶ್ ಅವರ ಮಾನವೀಯ ನೆರವನ್ನು ಜಾವೇದ್ ಮೆಚ್ಚಿಕೊಂಡಿದ್ದಾರೆ. ನಾನು ಮನೆ ಕಳೆದುಕೊಂಡಿರುವುದರಿಂದ ಸರ್ಕಾರ ಪರಿಹಾರ ನೀಡಬೇಕೆಂದು ಜಾವೇದ್ ಮನವಿ ಮಾಡಿದರು.</p><p>ಜಾವೇದ್ ಅಹಮ್ಮದ್ ಹಾಗೂ ಅವರ ತಂದೆ-ತಾಯಿ, ಇಬ್ಬರು ದೃಷ್ಟಿಹೀನ ಮಕ್ಕಳು ಸೇರಿ ಎಂಟು ಮಂದಿ ಸುಭಾಶ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. </p><p>ಸ್ಥಳೀಯ ಶಾಸಕರಾದ ರಾಮೇಶ್ವರ್ ಸಿಂಗ್ ಈ ಕುಟುಂಬಗಳನ್ನು ಭೇಟಿ ಮಾಡಿ, ಇದು ಜಮ್ಮು-ಕಾಶ್ಮೀರದ ನಿಜವಾದ ಸೌಂದರ್ಯ, ಸಂಕಷ್ಟದ ಸಮಯದಲ್ಲಿ ಏಕತೆ, ಮಾನವೀಯತೆ ಎಲ್ಲಕ್ಕಿಂತ ಮುಖ್ಯ. ಇಂತಹ ಮಾನವೀಯ ಘಟನೆಗಳು ಸ್ಥಳೀಯ ಸಮುದಾಯಗಳ ಏಕತೆ, ಧೈರ್ಯ ಹಾಗೂ ಸಾಮರಸ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದ್ದಾರೆ. </p><p>ಅಧಿಕಾರಿಗಳು ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಪರಿಹಾರ ಹಾಗೂ ಪುನರ್ವಸತಿ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಅವರ ಹೇಳಿದ್ದಾರೆ.</p>.ಜಮ್ಮು ಮತ್ತು ಕಾಶ್ಮೀರ: ಭಾರಿ ಮಳೆ, 950 ಮಂದಿ ಸ್ಥಳಾಂತರ.ಜಮ್ಮು ಮತ್ತು ಕಾಶ್ಮೀರ: ಮತ್ತೆ ಮೂವರು ಉಗ್ರರ ಮನೆಗಳು ಧ್ವಂಸ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>