<p><strong>ನವದೆಹಲಿ:</strong>ಚೀನಾದ ಸೈನಿಕರು ಭಾರತದ ಭೂ ಪ್ರದೇಶದೊಳಕ್ಕೆ ಬಂದಿದ್ದಾರೆ ಎಂಬುದನ್ನು ಚಾರಿತ್ರಿಕ ದಾಖಲೆಗಳು ಮತ್ತು ಉಪಗ್ರಹ ಚಿತ್ರಗಳು ತೋರಿಸುತ್ತಿವೆ. ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್ಎಸಿ) ದಾಟಿ ಬಂದಿರುವ ಚೀನಾದ ಸೈನಿಕರು ಭಾರತದ ಭೂಪ್ರದೇಶದಲ್ಲಿ ನೆಲೆಯಾಗಿದ್ದಾರೆ ಎಂದು ಈ ದಾಖಲೆಗಳು ಹೇಳುತ್ತಿವೆ. ಎಲ್ಎಸಿಯ ಸಮೀಪದಲ್ಲಿ ಮೂಲಸೌಕರ್ಯಗಳನ್ನು ಚೀನಾ ಸೃಷ್ಟಿಸಿಕೊಂಡಿದೆ.</p>.<p>ಎಲ್ಲಿಯವರೆಗೆ ತನ್ನ ಭೂಭಾಗ ಇದೆ ಎಂದು ಚೀನಾ ಪ್ರತಿಪಾದಿಸುತ್ತಿದೆ ಎಂಬ ದಾಖಲೆಯನ್ನು ವಿದೇಶಾಂಗ ಸಚಿವಾಲಯವು 1960–61ರಲ್ಲಿ ಪ್ರಕಟಿಸಿತ್ತು. ಗಾಲ್ವನ್ ನದಿ ಪ್ರದೇಶದಲ್ಲಿ ಚೀನಾದ ಗಡಿ ರೇಖೆಯ ಪ್ರತಿಪಾದನೆ ಏನು ಎಂಬ ವಿವರಗಳು ಈ ದಾಖಲೆಯಲ್ಲಿ ಇವೆ. ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ಈ ದಾಖಲೆಯನ್ನು ಟ್ವೀಟ್ ಮಾಡಿದ್ದಾರೆ.</p>.<p>ಈ ದಾಖಲೆಗಳ ಪ್ರಕಾರ, ಚೀನಾದ ಪ್ರತಿಪಾದನೆಯ ಗಡಿ ರೇಖೆಯು ಎರಡು ಶಿಖರಗಳ ಮೂಲಕ ಸಾಗಿ, ದಕ್ಷಿಣದಲ್ಲಿ ಸಣ್ಣ ಕಣಿವೆಯ ಮೂಲಕ ಗಾಲ್ವನ್ ನದಿಯನ್ನು ಹಾದು ಹೋಗುತ್ತದೆ (ರೇಖಾಂಶ 78 ಡಿಗ್ರಿ 13 ನಿಮಿಷ ಪೂರ್ವ, ಅಕ್ಷಾಂಶ 34 ಡಿಗ್ರಿ 46 ನಿಮಿಷ ಉತ್ತರ).</p>.<p>ಈ ಮಾಹಿತಿಯನ್ನು ಗೂಗಲ್ ಅರ್ಥ್ ಪ್ರೊದಲ್ಲಿ ಹಾಕಿ ಪರಿಶೀಲಿಸಿದರೆ, ಚೀನಾದ ಪ್ರತಿಪಾದನೆಯ ರೇಖೆ ಎಲ್ಲಿ ಎಂಬುದು ತಿಳಿಯುತ್ತದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಉಪಗ್ರಹ ಚಿತ್ರಗಳ ಜತೆಗೆ ಇದನ್ನು ಹೋಲಿಸಿದಾಗ, ಚೀನಾ ಸೈನಿಕರು ಆ ದೇಶವೇ ಪ್ರತಿಪಾದಿಸುತ್ತಿದ್ದ ರೇಖೆಯನ್ನು ದಾಟಿ ಮುಂದೆ ಬಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.</p>.<p>‘ಭಾರತ ಸರ್ಕಾರ ಮತ್ತು ಚೀನಾ ಸರ್ಕಾರದ ಅಧಿಕಾರಿಗಳು ಗಡಿಗೆ ಸಂಬಂಧಿಸಿ ಸಿದ್ಧಪಡಿಸಿದ ವರದಿ’ಯಲ್ಲಿ ಚೀನಾದ ಪ್ರತಿಪಾದನೆಯ ಅಕ್ಷಾಂಶ ಮತ್ತು ರೇಖಾಂಶದ ನಿಖರ ಮಾಹಿತಿ ಇದೆ ಎಂದು ರಾವ್ ಅವರು ಟ್ವೀಟ್ನಲ್ಲಿ ಹೇಳಿದ್ದಾರೆ. ಈ ದಾಖಲೆಯ ಎರಡು ಪುಟಗಳನ್ನು ಅವರು ಟ್ವೀಟ್ ಮಾಡಿದ್ದಾರೆ.</p>.<p><strong>ಕಮಾಂಡರ್ಗಳ ಸಭೆ ನಾಳೆ</strong><br />ಪೂರ್ವ ಲಡಾಖ್ನ ಎಲ್ಎಸಿ ಬಿಕ್ಕಟ್ಟು ಶಮನಕ್ಕಾಗಿ ಭಾರತ ಮತ್ತು ಚೀನಾ ಸೇನೆಯ ಹಿರಿಯ ಕಮಾಂಡರ್ಗಳ ಸಭೆಯು ಮಂಗಳವಾರ ನಡೆಯಲಿದೆ.</p>.<p>‘ಬೆಳಗ್ಗೆ 10.30ಕ್ಕೆ ಆರಂಭವಾಗಲಿರುವ ಸಭೆಯು ಈ ಬಾರಿ ಭಾರತದ ಭಾಗವಾದ ಚುಸುಲ್ನಲ್ಲಿ ನಡೆಯಲಿದೆ’ ಎಂದು ಮೂಲಗಳು ತಿಳಿಸಿವೆ.</p>.<p>ಈ ಹಿಂದೆ ಎರಡು ಸಭೆಗಳು ನಡೆದಿದ್ದವು. 14 ಕೋರ್ನ ಮುಖ್ಯಸ್ಥ ಲೆ.ಜ. ಹರಿಂದರ್ ಸಿಂಗ್ ಮತ್ತು ಚೀನಾದ ಮೇ.ಜ. ಲಿಯು ಲಿನ್ ನಡುವೆ ಜೂನ್ 6 ಮತ್ತು ಜೂನ್ 22ರಂದು ಸಭೆಗಳು ನಡೆದಿದ್ದವು. ಈ ಎರಡೂ ಸಭೆಗಳು ಚೀನಾದ ಮೊಲ್ಡೊದಲ್ಲಿ ಜರುಗಿದ್ದವು.</p>.<p>ಎರಡನೇ ಸಭೆಯು ಸುಮಾರು 11 ತಾಸು ನಡೆದಿದ್ದರೂ ಫಲಪ್ರದ ಆಗಿರಲಿಲ್ಲ.</p>.<p>ಭಾರತ ಮತ್ತು ಚೀನಾ ನಡುವೆ ಗಡಿ ತಕರಾರು ಏಪ್ರಿಲ್ನಿಂದಲೇ ಆರಂಭವಾಗಿತ್ತು. ಪಾಂಗಾಂಗ್ ಸರೋವರದ ಉತ್ತರ ದಂಡೆ, ಗಾಲ್ವನ್ ಕಣಿವೆ, ದೌಲತ್ ಬೇಗ್ ಓಲ್ಡಿ ಸಮೀಪದ ದೆಪ್ಸಾಂಗ್ಗಳಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ.</p>.<p>ಜೂನ್ 6ರ ಸಭೆಯಲ್ಲಿ ಸಂಧಾನ ಸೂತ್ರವೊಂದನ್ನು ಒಪ್ಪಿಕೊಳ್ಳಲಾಗಿತ್ತು. ಆದರೆ, ಅದರ ಅನುಷ್ಠಾನ ಸಂದರ್ಭದಲ್ಲಿ ಜೂನ್ 15ರಂದು ಗಸ್ತು ಪಾಯಿಂಟ್ 14ರಲ್ಲಿ ಎರಡೂ ಕಡೆಯ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟು ಸಾವು ನೋವು ಉಂಟಾಗಿತ್ತು. ಪರಿಸ್ಥಿತಿ ಇನ್ನಷ್ಟು ವಿಷಮಗೊಂಡಿತ್ತು.</p>.<p>ಗಾಲ್ವನ್ ಕಣಿವೆಯಲ್ಲಿ ಅತಿಕ್ರಮಣ, ಪಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿ ಚೀನಾ ಸೈನಿಕರ ಉಪಸ್ಥಿತಿಯು ಕಮಾಂಡರ್ಗಳ ಸಭೆಯಲ್ಲಿಪ್ರಸ್ತಾಪ ಆಗಲಿದೆ. ಎಲ್ಎಸಿಯ ಭಾರತೀಯ ಕಡೆಯಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಮತ್ತು ಯಥಾಸ್ಥಿತಿ ಸ್ಥಾಪನೆ ಕೂಡ ಚರ್ಚೆಗೆ ಬರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong>ಚೀನಾದ ಸೈನಿಕರು ಭಾರತದ ಭೂ ಪ್ರದೇಶದೊಳಕ್ಕೆ ಬಂದಿದ್ದಾರೆ ಎಂಬುದನ್ನು ಚಾರಿತ್ರಿಕ ದಾಖಲೆಗಳು ಮತ್ತು ಉಪಗ್ರಹ ಚಿತ್ರಗಳು ತೋರಿಸುತ್ತಿವೆ. ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್ಎಸಿ) ದಾಟಿ ಬಂದಿರುವ ಚೀನಾದ ಸೈನಿಕರು ಭಾರತದ ಭೂಪ್ರದೇಶದಲ್ಲಿ ನೆಲೆಯಾಗಿದ್ದಾರೆ ಎಂದು ಈ ದಾಖಲೆಗಳು ಹೇಳುತ್ತಿವೆ. ಎಲ್ಎಸಿಯ ಸಮೀಪದಲ್ಲಿ ಮೂಲಸೌಕರ್ಯಗಳನ್ನು ಚೀನಾ ಸೃಷ್ಟಿಸಿಕೊಂಡಿದೆ.</p>.<p>ಎಲ್ಲಿಯವರೆಗೆ ತನ್ನ ಭೂಭಾಗ ಇದೆ ಎಂದು ಚೀನಾ ಪ್ರತಿಪಾದಿಸುತ್ತಿದೆ ಎಂಬ ದಾಖಲೆಯನ್ನು ವಿದೇಶಾಂಗ ಸಚಿವಾಲಯವು 1960–61ರಲ್ಲಿ ಪ್ರಕಟಿಸಿತ್ತು. ಗಾಲ್ವನ್ ನದಿ ಪ್ರದೇಶದಲ್ಲಿ ಚೀನಾದ ಗಡಿ ರೇಖೆಯ ಪ್ರತಿಪಾದನೆ ಏನು ಎಂಬ ವಿವರಗಳು ಈ ದಾಖಲೆಯಲ್ಲಿ ಇವೆ. ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ಈ ದಾಖಲೆಯನ್ನು ಟ್ವೀಟ್ ಮಾಡಿದ್ದಾರೆ.</p>.<p>ಈ ದಾಖಲೆಗಳ ಪ್ರಕಾರ, ಚೀನಾದ ಪ್ರತಿಪಾದನೆಯ ಗಡಿ ರೇಖೆಯು ಎರಡು ಶಿಖರಗಳ ಮೂಲಕ ಸಾಗಿ, ದಕ್ಷಿಣದಲ್ಲಿ ಸಣ್ಣ ಕಣಿವೆಯ ಮೂಲಕ ಗಾಲ್ವನ್ ನದಿಯನ್ನು ಹಾದು ಹೋಗುತ್ತದೆ (ರೇಖಾಂಶ 78 ಡಿಗ್ರಿ 13 ನಿಮಿಷ ಪೂರ್ವ, ಅಕ್ಷಾಂಶ 34 ಡಿಗ್ರಿ 46 ನಿಮಿಷ ಉತ್ತರ).</p>.<p>ಈ ಮಾಹಿತಿಯನ್ನು ಗೂಗಲ್ ಅರ್ಥ್ ಪ್ರೊದಲ್ಲಿ ಹಾಕಿ ಪರಿಶೀಲಿಸಿದರೆ, ಚೀನಾದ ಪ್ರತಿಪಾದನೆಯ ರೇಖೆ ಎಲ್ಲಿ ಎಂಬುದು ತಿಳಿಯುತ್ತದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಉಪಗ್ರಹ ಚಿತ್ರಗಳ ಜತೆಗೆ ಇದನ್ನು ಹೋಲಿಸಿದಾಗ, ಚೀನಾ ಸೈನಿಕರು ಆ ದೇಶವೇ ಪ್ರತಿಪಾದಿಸುತ್ತಿದ್ದ ರೇಖೆಯನ್ನು ದಾಟಿ ಮುಂದೆ ಬಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.</p>.<p>‘ಭಾರತ ಸರ್ಕಾರ ಮತ್ತು ಚೀನಾ ಸರ್ಕಾರದ ಅಧಿಕಾರಿಗಳು ಗಡಿಗೆ ಸಂಬಂಧಿಸಿ ಸಿದ್ಧಪಡಿಸಿದ ವರದಿ’ಯಲ್ಲಿ ಚೀನಾದ ಪ್ರತಿಪಾದನೆಯ ಅಕ್ಷಾಂಶ ಮತ್ತು ರೇಖಾಂಶದ ನಿಖರ ಮಾಹಿತಿ ಇದೆ ಎಂದು ರಾವ್ ಅವರು ಟ್ವೀಟ್ನಲ್ಲಿ ಹೇಳಿದ್ದಾರೆ. ಈ ದಾಖಲೆಯ ಎರಡು ಪುಟಗಳನ್ನು ಅವರು ಟ್ವೀಟ್ ಮಾಡಿದ್ದಾರೆ.</p>.<p><strong>ಕಮಾಂಡರ್ಗಳ ಸಭೆ ನಾಳೆ</strong><br />ಪೂರ್ವ ಲಡಾಖ್ನ ಎಲ್ಎಸಿ ಬಿಕ್ಕಟ್ಟು ಶಮನಕ್ಕಾಗಿ ಭಾರತ ಮತ್ತು ಚೀನಾ ಸೇನೆಯ ಹಿರಿಯ ಕಮಾಂಡರ್ಗಳ ಸಭೆಯು ಮಂಗಳವಾರ ನಡೆಯಲಿದೆ.</p>.<p>‘ಬೆಳಗ್ಗೆ 10.30ಕ್ಕೆ ಆರಂಭವಾಗಲಿರುವ ಸಭೆಯು ಈ ಬಾರಿ ಭಾರತದ ಭಾಗವಾದ ಚುಸುಲ್ನಲ್ಲಿ ನಡೆಯಲಿದೆ’ ಎಂದು ಮೂಲಗಳು ತಿಳಿಸಿವೆ.</p>.<p>ಈ ಹಿಂದೆ ಎರಡು ಸಭೆಗಳು ನಡೆದಿದ್ದವು. 14 ಕೋರ್ನ ಮುಖ್ಯಸ್ಥ ಲೆ.ಜ. ಹರಿಂದರ್ ಸಿಂಗ್ ಮತ್ತು ಚೀನಾದ ಮೇ.ಜ. ಲಿಯು ಲಿನ್ ನಡುವೆ ಜೂನ್ 6 ಮತ್ತು ಜೂನ್ 22ರಂದು ಸಭೆಗಳು ನಡೆದಿದ್ದವು. ಈ ಎರಡೂ ಸಭೆಗಳು ಚೀನಾದ ಮೊಲ್ಡೊದಲ್ಲಿ ಜರುಗಿದ್ದವು.</p>.<p>ಎರಡನೇ ಸಭೆಯು ಸುಮಾರು 11 ತಾಸು ನಡೆದಿದ್ದರೂ ಫಲಪ್ರದ ಆಗಿರಲಿಲ್ಲ.</p>.<p>ಭಾರತ ಮತ್ತು ಚೀನಾ ನಡುವೆ ಗಡಿ ತಕರಾರು ಏಪ್ರಿಲ್ನಿಂದಲೇ ಆರಂಭವಾಗಿತ್ತು. ಪಾಂಗಾಂಗ್ ಸರೋವರದ ಉತ್ತರ ದಂಡೆ, ಗಾಲ್ವನ್ ಕಣಿವೆ, ದೌಲತ್ ಬೇಗ್ ಓಲ್ಡಿ ಸಮೀಪದ ದೆಪ್ಸಾಂಗ್ಗಳಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ.</p>.<p>ಜೂನ್ 6ರ ಸಭೆಯಲ್ಲಿ ಸಂಧಾನ ಸೂತ್ರವೊಂದನ್ನು ಒಪ್ಪಿಕೊಳ್ಳಲಾಗಿತ್ತು. ಆದರೆ, ಅದರ ಅನುಷ್ಠಾನ ಸಂದರ್ಭದಲ್ಲಿ ಜೂನ್ 15ರಂದು ಗಸ್ತು ಪಾಯಿಂಟ್ 14ರಲ್ಲಿ ಎರಡೂ ಕಡೆಯ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟು ಸಾವು ನೋವು ಉಂಟಾಗಿತ್ತು. ಪರಿಸ್ಥಿತಿ ಇನ್ನಷ್ಟು ವಿಷಮಗೊಂಡಿತ್ತು.</p>.<p>ಗಾಲ್ವನ್ ಕಣಿವೆಯಲ್ಲಿ ಅತಿಕ್ರಮಣ, ಪಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿ ಚೀನಾ ಸೈನಿಕರ ಉಪಸ್ಥಿತಿಯು ಕಮಾಂಡರ್ಗಳ ಸಭೆಯಲ್ಲಿಪ್ರಸ್ತಾಪ ಆಗಲಿದೆ. ಎಲ್ಎಸಿಯ ಭಾರತೀಯ ಕಡೆಯಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಮತ್ತು ಯಥಾಸ್ಥಿತಿ ಸ್ಥಾಪನೆ ಕೂಡ ಚರ್ಚೆಗೆ ಬರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>