<p><strong>ನವದೆಹಲಿ:</strong> ರಾಷ್ಟ್ರೀಯ ಮುಕ್ತ ಶೈಕ್ಷಣಿಕ ಸಂಸ್ಥೆ (ಎನ್ಐಒಎಸ್)ಯು ವೇದ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಪ್ರಮಾಣ ಪತ್ರವನ್ನು ನೀಡಲಿದೆ.</p>.<p>ಮಾನವ ಸಂಪನ್ಮೂಲ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಎನ್ಐಒಎಸ್, ಸಂಸ್ಕೃತ ಮಾಧ್ಯಮದಲ್ಲಿ ವೇದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ಪ್ರಮಾಣ ಪತ್ರ ನೀಡಲಿದೆ. ಸರ್ಕಾರಗಳು ಸದ್ಯ ನೀಡುತ್ತಿರುವ ಪ್ರೌಢಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ಪ್ರಮಾಣಪತ್ರಕ್ಕೆ ಇದು ಸಮಾನವಾಗಿರಲಿದೆ.</p>.<p>'ಭಾರತೀಯ ಜ್ಞಾನ ಪರಂಪರೆ ನಿಕಾಯದ ಅಡಿ ಈ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಸದ್ಯ ದೇಶದಾದ್ಯಂತ ಕನಿಷ್ಠ 6 ಸಾವಿರ ವೇದ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ’ ಎಂದುಎನ್ಐಒಎಸ್ ಮುಖ್ಯಸ್ಥ ಚಂದ್ರಭೂಷಣ್ ತಿಳಿಸಿದ್ದಾರೆ.</p>.<p>‘ಕೆಲವು ವೇದ ಶಾಲೆಗಳಲ್ಲಿ ಮುಕ್ತ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಕ್ರಮೇಣ ಉಳಿದ ಶಾಲೆಗಳಲ್ಲಿಯೂ ಇಂತಹ ಕೇಂದ್ರ ತೆರೆಯಲಾಗುವುದು’ ಎಂದು ಅವರು ತಿಳಿಸಿದ್ದಾರೆ.</p>.<p>ಪ್ರಸಕ್ತ ಸಾಲಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ವೇದ ಶಿಕ್ಷಣ ಅಭ್ಯಾಸಕ್ಕೆ ಹೆಸರು ನೋಂದಾಯಿಸಿದ್ದಾರೆ. ಒಂದು ವರ್ಷದ ಕೋರ್ಸ್ ಎಸ್ಸೆಸ್ಸೆಲ್ಸಿ ಮಟ್ಟದ್ದಾಗಿದ್ದರೆ, ಎರಡು ವರ್ಷದ ಕೋರ್ಸ್ ಪಿಯುಸಿ ಮಟ್ಟದ್ದಾಗಿರುತ್ತದೆ.</p>.<p>2014ರಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ವೇದ ಶಿಕ್ಷಣ ಮಂಡಳಿ ಸ್ಥಾಪಿಸಿ, ವೇದ ಶಾಲೆಗಳನ್ನು ಅವುಗಳ ವ್ಯಾಪ್ತಿಗೆ ತಂದು, ಎಲ್ಲ ಪರೀಕ್ಷಾ ಮಂಡಳಿಗಳಂತೆ ಈ ಮಂಡಳಿಗೂ ಅಧಿಕೃತ ಮಾನ್ಯತೆ ನೀಡಬೇಕು ಎಂಬ ಬೇಡಿಕೆ ಇತ್ತು. ಸಿಬಿಎಸ್ಇ ಮಾದರಿಯಲ್ಲಿ ವೇದ ಶಿಕ್ಷಣ ಮಂಡಳಿ ಸ್ಥಾಪಿಸುವಂತೆ 2015ರಲ್ಲಿ ಯೋಗಗುರು ಬಾಬಾ ರಾಮದೇವ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಮಾನವ ಸಂಪನ್ಮೂಲ ಸಚಿವಾಲಯ ಆಗ ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು.</p>.<p><strong>ಐದು ಕೋರ್ಸ್ಗಳು</strong></p>.<p>‘ಭಾರತೀಯ ಜ್ಞಾನ ಪರಂಪರೆ’ ನಿಕಾಯದಡಿ ಐದು ಕೋರ್ಸ್ಗಳನ್ನು ಎನ್ಐಒಎಸ್ ರೂಪಿಸಿದೆ. ವೇದ ಅಧ್ಯಯನ, ಭಾರತೀಯ ತತ್ವಶಾಸ್ತ್ರ, ಸಂಸ್ಕೃತ ವ್ಯಾಕರಣ, ಸಂಸ್ಕೃತ ಸಾಹಿತ್ಯ ಮತ್ತು ಸಂಸ್ಕೃತಕ್ಕೆ ಸಂಬಂಧಿಸಿದ ವಿಷಯಗಳನ್ನು ಈ ಕೋರ್ಸ್ಗಳು ಒಳಗೊಳ್ಳಲಿವೆ.</p>.<p>ಇದರ ಜೊತೆಗೆ ಆಯುರ್ವೇದ ವಿಜ್ಞಾನ, ಅನ್ವಯಿಕ ಸಂಸ್ಕೃತ ವ್ಯಾಕರಣ, ವೇದಪಾಠ, ನ್ಯಾಯಶಾಸ್ತ್ರ, ಜ್ಯೋತಿಷ ಶಾಸ್ತ್ರ ವಿಷಯಗಳನ್ನೊಳಗೊಂಡ ಕೋರ್ಸ್ಗಳನ್ನು ಪ್ರಾರಂಭಿಸುವ ಉದ್ದೇಶವೂ ಇದೆ ಎಂದು ಚಂದ್ರಭೂಷಣ್ ತಿಳಿಸಿದ್ದಾರೆ.</p>.<p>***</p>.<p>ಭಾರತದ ಪ್ರಾಚೀನ ಶೈಕ್ಷಣಿಕ ಪದ್ಧತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಸಚಿವಾಲಯವು ಅಧಿಕೃತ ಪ್ರಮಾಣಪತ್ರಗಳನ್ನು ನೀಡಲಿದೆ.</p>.<p><em><strong>– ಚಂದ್ರಭೂಷಣ್, ಎನ್ಐಒಎಸ್ ಮುಖ್ಯಸ್ಥ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ರಾಷ್ಟ್ರೀಯ ಮುಕ್ತ ಶೈಕ್ಷಣಿಕ ಸಂಸ್ಥೆ (ಎನ್ಐಒಎಸ್)ಯು ವೇದ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಪ್ರಮಾಣ ಪತ್ರವನ್ನು ನೀಡಲಿದೆ.</p>.<p>ಮಾನವ ಸಂಪನ್ಮೂಲ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಎನ್ಐಒಎಸ್, ಸಂಸ್ಕೃತ ಮಾಧ್ಯಮದಲ್ಲಿ ವೇದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ಪ್ರಮಾಣ ಪತ್ರ ನೀಡಲಿದೆ. ಸರ್ಕಾರಗಳು ಸದ್ಯ ನೀಡುತ್ತಿರುವ ಪ್ರೌಢಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ಪ್ರಮಾಣಪತ್ರಕ್ಕೆ ಇದು ಸಮಾನವಾಗಿರಲಿದೆ.</p>.<p>'ಭಾರತೀಯ ಜ್ಞಾನ ಪರಂಪರೆ ನಿಕಾಯದ ಅಡಿ ಈ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಸದ್ಯ ದೇಶದಾದ್ಯಂತ ಕನಿಷ್ಠ 6 ಸಾವಿರ ವೇದ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ’ ಎಂದುಎನ್ಐಒಎಸ್ ಮುಖ್ಯಸ್ಥ ಚಂದ್ರಭೂಷಣ್ ತಿಳಿಸಿದ್ದಾರೆ.</p>.<p>‘ಕೆಲವು ವೇದ ಶಾಲೆಗಳಲ್ಲಿ ಮುಕ್ತ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಕ್ರಮೇಣ ಉಳಿದ ಶಾಲೆಗಳಲ್ಲಿಯೂ ಇಂತಹ ಕೇಂದ್ರ ತೆರೆಯಲಾಗುವುದು’ ಎಂದು ಅವರು ತಿಳಿಸಿದ್ದಾರೆ.</p>.<p>ಪ್ರಸಕ್ತ ಸಾಲಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ವೇದ ಶಿಕ್ಷಣ ಅಭ್ಯಾಸಕ್ಕೆ ಹೆಸರು ನೋಂದಾಯಿಸಿದ್ದಾರೆ. ಒಂದು ವರ್ಷದ ಕೋರ್ಸ್ ಎಸ್ಸೆಸ್ಸೆಲ್ಸಿ ಮಟ್ಟದ್ದಾಗಿದ್ದರೆ, ಎರಡು ವರ್ಷದ ಕೋರ್ಸ್ ಪಿಯುಸಿ ಮಟ್ಟದ್ದಾಗಿರುತ್ತದೆ.</p>.<p>2014ರಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ವೇದ ಶಿಕ್ಷಣ ಮಂಡಳಿ ಸ್ಥಾಪಿಸಿ, ವೇದ ಶಾಲೆಗಳನ್ನು ಅವುಗಳ ವ್ಯಾಪ್ತಿಗೆ ತಂದು, ಎಲ್ಲ ಪರೀಕ್ಷಾ ಮಂಡಳಿಗಳಂತೆ ಈ ಮಂಡಳಿಗೂ ಅಧಿಕೃತ ಮಾನ್ಯತೆ ನೀಡಬೇಕು ಎಂಬ ಬೇಡಿಕೆ ಇತ್ತು. ಸಿಬಿಎಸ್ಇ ಮಾದರಿಯಲ್ಲಿ ವೇದ ಶಿಕ್ಷಣ ಮಂಡಳಿ ಸ್ಥಾಪಿಸುವಂತೆ 2015ರಲ್ಲಿ ಯೋಗಗುರು ಬಾಬಾ ರಾಮದೇವ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಮಾನವ ಸಂಪನ್ಮೂಲ ಸಚಿವಾಲಯ ಆಗ ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು.</p>.<p><strong>ಐದು ಕೋರ್ಸ್ಗಳು</strong></p>.<p>‘ಭಾರತೀಯ ಜ್ಞಾನ ಪರಂಪರೆ’ ನಿಕಾಯದಡಿ ಐದು ಕೋರ್ಸ್ಗಳನ್ನು ಎನ್ಐಒಎಸ್ ರೂಪಿಸಿದೆ. ವೇದ ಅಧ್ಯಯನ, ಭಾರತೀಯ ತತ್ವಶಾಸ್ತ್ರ, ಸಂಸ್ಕೃತ ವ್ಯಾಕರಣ, ಸಂಸ್ಕೃತ ಸಾಹಿತ್ಯ ಮತ್ತು ಸಂಸ್ಕೃತಕ್ಕೆ ಸಂಬಂಧಿಸಿದ ವಿಷಯಗಳನ್ನು ಈ ಕೋರ್ಸ್ಗಳು ಒಳಗೊಳ್ಳಲಿವೆ.</p>.<p>ಇದರ ಜೊತೆಗೆ ಆಯುರ್ವೇದ ವಿಜ್ಞಾನ, ಅನ್ವಯಿಕ ಸಂಸ್ಕೃತ ವ್ಯಾಕರಣ, ವೇದಪಾಠ, ನ್ಯಾಯಶಾಸ್ತ್ರ, ಜ್ಯೋತಿಷ ಶಾಸ್ತ್ರ ವಿಷಯಗಳನ್ನೊಳಗೊಂಡ ಕೋರ್ಸ್ಗಳನ್ನು ಪ್ರಾರಂಭಿಸುವ ಉದ್ದೇಶವೂ ಇದೆ ಎಂದು ಚಂದ್ರಭೂಷಣ್ ತಿಳಿಸಿದ್ದಾರೆ.</p>.<p>***</p>.<p>ಭಾರತದ ಪ್ರಾಚೀನ ಶೈಕ್ಷಣಿಕ ಪದ್ಧತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಸಚಿವಾಲಯವು ಅಧಿಕೃತ ಪ್ರಮಾಣಪತ್ರಗಳನ್ನು ನೀಡಲಿದೆ.</p>.<p><em><strong>– ಚಂದ್ರಭೂಷಣ್, ಎನ್ಐಒಎಸ್ ಮುಖ್ಯಸ್ಥ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>