<p><strong>ನವದೆಹಲಿ:</strong> ಈ ವರ್ಷದ ಮಾರ್ಚ್ 1ರಿಂದ ಜೂನ್ 24 ವರೆಗೆ ದೇಶದಾದ್ಯಂತ ಸುಮಾರು 7,192 ಶಂಕಿತ ಶಾಖಾಘಾತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 14 ಸಾವುಗಳಷ್ಟೇ ದೃಢಪಟ್ಟಿವೆ ಎಂದು ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆ ಅಡಿ ಪಡೆದ ಮಾಹಿತಿಯಿಂದ ತಿಳಿದುಬಂದಿದೆ.</p><p>ಬೇಸಿಗೆ ತೀವ್ರಗೊಳ್ಳುವ ಮೇ ತಿಂಗಳಲ್ಲಿ ಹೆಚ್ಚಿನ (2,962) ಪ್ರಕರಣಗಳು ವರದಿಯಾಗಿವೆ. ಮೂವರು ಮೃತಪಟ್ಟಿದ್ದಾರೆ ಎಂಬುದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ಸಿಡಿಸಿ) ಹಂಚಿಕೊಂಡಿರುವ ಮಾಹಿತಿಯಿಂದ ಗೊತ್ತಾಗಿದೆ.</p><p>ಮಾರ್ಚ್ನಲ್ಲಿ 705, ಏಪ್ರಿಲ್ನಲ್ಲಿ 2,140 ಶಂಕಿತ ಪ್ರಕರಣಗಳು ವರದಿಯಾಗಿದ್ದವು. ಈ ತಿಂಗಳುಗಳಲ್ಲಿ ಕ್ರಮವಾಗಿ 6 ಹಾಗೂ 2 ಸಾವು ಸಂಭವಿಸಿವೆ. ಅದೇ ರೀತಿ ಜೂನ್ ತಿಂಗಳಲ್ಲಿ (24ರ ವರೆಗೆ) 1,385 ಪ್ರಕರಣಗಳು ಬೆಳಕಿಗೆ ಬಂದಿದ್ದು, ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.</p><p><strong>ಆಂಧ್ರ ಪ್ರದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣ<br></strong>ಒಟ್ಟು ಪ್ರಕರಣಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಆಂಧ್ರ ಪ್ರದೇಶದಲ್ಲಿ (4,055) ವರದಿಯಾಗಿವೆ. ರಾಜಸ್ಥಾನ (373), ಒಡಿಶಾ (350), ತೆಲಂಗಾಣ (348), ಮಧ್ಯಪ್ರದೇಶ (297) ನಂತರದ ಸ್ಥಾನಗಳಲ್ಲಿವೆ.</p><p>ಮಹಾರಾಷ್ಟ್ರ, ಉತ್ತರಾಖಂಡ ರಾಜ್ಯಗಳಲ್ಲಿ ತಲಾ ಮೂರು ಸಾವು ಸಂಭವಿಸಿವೆ. ತೆಲಂಗಾಣ, ಒಡಿಶಾ, ಜಾರ್ಖಂಡ್, ತಮಿಳುನಾಡು, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಒಬ್ಬೊಬ್ಬರು ಮೃತಪಟ್ಟಿದ್ದಾರೆ.</p><p>2024ರಲ್ಲಿ ಸುಮಾರು 48,000 ಶಾಖಾಘಾತ ಪ್ರಕರಣಗಳು ವರದಿಯಾಗಿದ್ದವು. ಇದರಿಂದಾಗಿ, 159 ಸಾವುಗಳು ಸಂಭವಿಸಿದ್ದವು. ಆ ವರ್ಷವನ್ನು 1901ರ ನಂತರದ ಅತ್ಯಂತ ತಾಪಮಾನದಿಂದ ಕೂಡಿದ್ದ ವರ್ಷ ಎನ್ನಲಾಗಿದೆ.</p>.ಶಾಖಾಘಾತ: ಲಕ್ಷಣಗಳು, ಪ್ರಥಮ ಚಿಕಿತ್ಸೆ, ಮುಂಜಾಗ್ರತೆ... ಇಲ್ಲಿದೆ ಮಾಹಿತಿ.ಶಾಖಾಘಾತ: ರಾಜ್ಯಕ್ಕೆ ನಿರ್ದಿಷ್ಟ ವಿಪತ್ತು; ಘೋಷಿಸಿದ ತೆಲಂಗಾಣ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಈ ವರ್ಷದ ಮಾರ್ಚ್ 1ರಿಂದ ಜೂನ್ 24 ವರೆಗೆ ದೇಶದಾದ್ಯಂತ ಸುಮಾರು 7,192 ಶಂಕಿತ ಶಾಖಾಘಾತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 14 ಸಾವುಗಳಷ್ಟೇ ದೃಢಪಟ್ಟಿವೆ ಎಂದು ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆ ಅಡಿ ಪಡೆದ ಮಾಹಿತಿಯಿಂದ ತಿಳಿದುಬಂದಿದೆ.</p><p>ಬೇಸಿಗೆ ತೀವ್ರಗೊಳ್ಳುವ ಮೇ ತಿಂಗಳಲ್ಲಿ ಹೆಚ್ಚಿನ (2,962) ಪ್ರಕರಣಗಳು ವರದಿಯಾಗಿವೆ. ಮೂವರು ಮೃತಪಟ್ಟಿದ್ದಾರೆ ಎಂಬುದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ಸಿಡಿಸಿ) ಹಂಚಿಕೊಂಡಿರುವ ಮಾಹಿತಿಯಿಂದ ಗೊತ್ತಾಗಿದೆ.</p><p>ಮಾರ್ಚ್ನಲ್ಲಿ 705, ಏಪ್ರಿಲ್ನಲ್ಲಿ 2,140 ಶಂಕಿತ ಪ್ರಕರಣಗಳು ವರದಿಯಾಗಿದ್ದವು. ಈ ತಿಂಗಳುಗಳಲ್ಲಿ ಕ್ರಮವಾಗಿ 6 ಹಾಗೂ 2 ಸಾವು ಸಂಭವಿಸಿವೆ. ಅದೇ ರೀತಿ ಜೂನ್ ತಿಂಗಳಲ್ಲಿ (24ರ ವರೆಗೆ) 1,385 ಪ್ರಕರಣಗಳು ಬೆಳಕಿಗೆ ಬಂದಿದ್ದು, ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.</p><p><strong>ಆಂಧ್ರ ಪ್ರದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣ<br></strong>ಒಟ್ಟು ಪ್ರಕರಣಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಆಂಧ್ರ ಪ್ರದೇಶದಲ್ಲಿ (4,055) ವರದಿಯಾಗಿವೆ. ರಾಜಸ್ಥಾನ (373), ಒಡಿಶಾ (350), ತೆಲಂಗಾಣ (348), ಮಧ್ಯಪ್ರದೇಶ (297) ನಂತರದ ಸ್ಥಾನಗಳಲ್ಲಿವೆ.</p><p>ಮಹಾರಾಷ್ಟ್ರ, ಉತ್ತರಾಖಂಡ ರಾಜ್ಯಗಳಲ್ಲಿ ತಲಾ ಮೂರು ಸಾವು ಸಂಭವಿಸಿವೆ. ತೆಲಂಗಾಣ, ಒಡಿಶಾ, ಜಾರ್ಖಂಡ್, ತಮಿಳುನಾಡು, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಒಬ್ಬೊಬ್ಬರು ಮೃತಪಟ್ಟಿದ್ದಾರೆ.</p><p>2024ರಲ್ಲಿ ಸುಮಾರು 48,000 ಶಾಖಾಘಾತ ಪ್ರಕರಣಗಳು ವರದಿಯಾಗಿದ್ದವು. ಇದರಿಂದಾಗಿ, 159 ಸಾವುಗಳು ಸಂಭವಿಸಿದ್ದವು. ಆ ವರ್ಷವನ್ನು 1901ರ ನಂತರದ ಅತ್ಯಂತ ತಾಪಮಾನದಿಂದ ಕೂಡಿದ್ದ ವರ್ಷ ಎನ್ನಲಾಗಿದೆ.</p>.ಶಾಖಾಘಾತ: ಲಕ್ಷಣಗಳು, ಪ್ರಥಮ ಚಿಕಿತ್ಸೆ, ಮುಂಜಾಗ್ರತೆ... ಇಲ್ಲಿದೆ ಮಾಹಿತಿ.ಶಾಖಾಘಾತ: ರಾಜ್ಯಕ್ಕೆ ನಿರ್ದಿಷ್ಟ ವಿಪತ್ತು; ಘೋಷಿಸಿದ ತೆಲಂಗಾಣ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>