ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜೈಶಂಕರ್ ಮಾತನಾಡಿದರು. ವಿದೇಶಗಳೊಂದಿಗಿನ ಪರಮಾಣು ಒಪ್ಪಂದಗಳನ್ನು ನಿರೀಕ್ಷೆಯಂತೆ ಅನುಷ್ಠಾನಗೊಳಿಸದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ‘ಪರಮಾಣು ಹಾನಿಯ ಕುರಿತು ನಾಗರಿಕ ಹೊಣೆಗಾರಿಕಾ ಕಾಯ್ದೆ 2010 ಅನ್ನು ರೂಪಿಸಿದ ರೀತಿಯಲ್ಲಿ ವಿದೇಶಿ ಪೂರೈಕೆದಾರರ ಕಳವಳವನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ನೋಡಲು ಅವರೊಂದಿಗೆ ಸಾಕಷ್ಟು ಸಂವಾದದ ಅಗತ್ಯವಿದೆ’ ಎಂದರು.