<p><strong>ನವದೆಹಲಿ:</strong> ‘ಇಸ್ರೇಲ್ ಜನಾಂಗೀಯ ಹತ್ಯೆಯಲ್ಲಿ ತೊಡಗಿದೆ’ ಎಂದು ಮಂಗಳವಾರ ಆರೋಪಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ‘ಪ್ಯಾಲೆಸ್ಟೀನಿಯರನ್ನು ಇಸ್ರೇಲ್ ನಾಶಗೊಳಿಸುತ್ತಿರುವಾಗ ಭಾರತ ಸರ್ಕಾರ ಮೌನಕ್ಕೆ ಜಾರಿದೆ’ ಎಂದು ಟೀಕೆ ಮಾಡಿದ್ದಾರೆ.</p><p>ಇಸ್ರೇಲ್ ಸುಮಾರು 60,000 ಜನರನ್ನು ಕೊಂದಿದೆ. ಅವರಲ್ಲಿ 18,430 ಮಕ್ಕಳಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.</p><p>‘ಈಗಾಗಲೇ ಮಕ್ಕಳು ಸೇರಿದಂತೆ ನೂರಾರು ಜನರನ್ನು ಹಸಿವಿನಿಂದ ಕೊಂದಿರುವ ಆ ದೇಶ, ಲಕ್ಷಾಂತರ ಜನರನ್ನು ಹಸಿವಿನಿಂದ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. </p><p>‘ಇಷ್ಟೆಲ್ಲ ಕೃತ್ಯಗಳು ನಡೆಯುತ್ತಿರುವಾಗ ಮೌನ ಮತ್ತು ನಿಷ್ಕ್ರಿಯವಾಗಿ ಇರುವುದು ಅಪರಾಧಗಳನ್ನು ಬೆಂಬಲಿಸಿದಂತೆ. ಅದೂ ಸಹ ದೊಡ್ಡ ಅಪರಾಧ ಮತ್ತು ನಾಚಿಕೆಗೇಡಿನ ಸಂಗತಿ’ ಎಂದು ಅವರು ಭಾರತ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. </p><p>‘ಪ್ಯಾಲೆಸ್ಟೀನಿನ ಮಣ್ಣಿನಲ್ಲಿ ಅಲ್ ಜಜೀರಾ ಸುದ್ದಿ ವಾಹಿನಿಯ ಐವರು ಪತ್ರಕರ್ತರನ್ನು ಹತ್ಯೆ ಮಾಡಿರುವುದು ಖಂಡನೀಯ’ ಎಂದು ಅವರು ಹೇಳಿದ್ದಾರೆ.</p>.ಗಾಜಾದಲ್ಲಿ ಇಸ್ರೇಲ್ 'ನರಮೇಧ'; ಪ್ರಧಾನಿ ಮೌನ ಪ್ರಶ್ನಿಸಿದ ಸೋನಿಯಾ ಗಾಂಧಿ.ಗಾಜಾ| ಇಸ್ರೇಲ್ನಿಂದ ಗುಂಡಿನ ದಾಳಿ: ನೆರವಿನ ನಿರೀಕ್ಷೆಯಲ್ಲಿದ್ದ 26 ಮಂದಿ ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಇಸ್ರೇಲ್ ಜನಾಂಗೀಯ ಹತ್ಯೆಯಲ್ಲಿ ತೊಡಗಿದೆ’ ಎಂದು ಮಂಗಳವಾರ ಆರೋಪಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ‘ಪ್ಯಾಲೆಸ್ಟೀನಿಯರನ್ನು ಇಸ್ರೇಲ್ ನಾಶಗೊಳಿಸುತ್ತಿರುವಾಗ ಭಾರತ ಸರ್ಕಾರ ಮೌನಕ್ಕೆ ಜಾರಿದೆ’ ಎಂದು ಟೀಕೆ ಮಾಡಿದ್ದಾರೆ.</p><p>ಇಸ್ರೇಲ್ ಸುಮಾರು 60,000 ಜನರನ್ನು ಕೊಂದಿದೆ. ಅವರಲ್ಲಿ 18,430 ಮಕ್ಕಳಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.</p><p>‘ಈಗಾಗಲೇ ಮಕ್ಕಳು ಸೇರಿದಂತೆ ನೂರಾರು ಜನರನ್ನು ಹಸಿವಿನಿಂದ ಕೊಂದಿರುವ ಆ ದೇಶ, ಲಕ್ಷಾಂತರ ಜನರನ್ನು ಹಸಿವಿನಿಂದ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. </p><p>‘ಇಷ್ಟೆಲ್ಲ ಕೃತ್ಯಗಳು ನಡೆಯುತ್ತಿರುವಾಗ ಮೌನ ಮತ್ತು ನಿಷ್ಕ್ರಿಯವಾಗಿ ಇರುವುದು ಅಪರಾಧಗಳನ್ನು ಬೆಂಬಲಿಸಿದಂತೆ. ಅದೂ ಸಹ ದೊಡ್ಡ ಅಪರಾಧ ಮತ್ತು ನಾಚಿಕೆಗೇಡಿನ ಸಂಗತಿ’ ಎಂದು ಅವರು ಭಾರತ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. </p><p>‘ಪ್ಯಾಲೆಸ್ಟೀನಿನ ಮಣ್ಣಿನಲ್ಲಿ ಅಲ್ ಜಜೀರಾ ಸುದ್ದಿ ವಾಹಿನಿಯ ಐವರು ಪತ್ರಕರ್ತರನ್ನು ಹತ್ಯೆ ಮಾಡಿರುವುದು ಖಂಡನೀಯ’ ಎಂದು ಅವರು ಹೇಳಿದ್ದಾರೆ.</p>.ಗಾಜಾದಲ್ಲಿ ಇಸ್ರೇಲ್ 'ನರಮೇಧ'; ಪ್ರಧಾನಿ ಮೌನ ಪ್ರಶ್ನಿಸಿದ ಸೋನಿಯಾ ಗಾಂಧಿ.ಗಾಜಾ| ಇಸ್ರೇಲ್ನಿಂದ ಗುಂಡಿನ ದಾಳಿ: ನೆರವಿನ ನಿರೀಕ್ಷೆಯಲ್ಲಿದ್ದ 26 ಮಂದಿ ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>