ಸರ್ಕಾರ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿದೆಯೇ ಎನ್ನುವ ಕೋರ್ಟ್ನ ಪ್ರಶ್ನೆಗೆ ಸರ್ಕಾರ ಇಲ್ಲ ಎಂದಿದೆ.
ಕೆಟಿಡಿಎಫ್ಸಿ ಹಾಗೂ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ತಮ್ಮ ಹಣಕಾಸಿನ ತೊಂದರೆಯನ್ನು ಪರಿಹರಿಸಿಕೊಳ್ಳಲು ಆಸ್ತಿಯನ್ನು ಮಾರಬಹುದು ಅಥವಾ ಅಡ ಇಡಬಹುದು. ದುರದೃಷ್ಟವಶಾತ್ ಈ ಎರಡೂ ಸಂಸ್ಥೆಗಳಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಎರಡೂ ಸಂಸ್ಥೆಗಳು ಜಂಟಿಯಾಗಿ ₹ 1,000 ಕೋಟಿಯ ಆಸ್ತಿ ಹೊಂದಿದೆ ಎಂದು ಸರ್ಕಾರ ಅಫಿಡವಿಟ್ನಲ್ಲಿ ಹೇಳಿದೆ.
ಸರ್ಕಾರ ಭಾರಿ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದೆಯಾದರೂ, ಕೆಎಸ್ಆರ್ಟಿಸಿಯ ವಿವಿಧ ಖರ್ಚುಗಳಿಗೆ 2018–19ರ ಅಕ್ಟೋಬರ್ನಿಂದ 2023ರ ಅಕ್ಟೋಬರ್ 15ರ ವರೆಗೆ ₹ 8,440.02 ಕೋಟಿ ಖರ್ಚು ಮಾಡಿದೆ ಎಂದು ಇದೇ ವೇಳೆ ತಿಳಿಸಿದೆ.