<p><strong>ತಿರುವನಂತಪುರಂ</strong>: ಕೇರಳದ ಕೊಲ್ಲಂನಲ್ಲಿ ಹಾವಿನಿಂದ ಕಚ್ಚಿಸಿ ಹೆಂಡತಿಯನ್ನು ಕೊಂದಿದ್ದಕ್ಕಾಗಿ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.</p>.<p>ಪೊಲೀಸರ ಪ್ರಕಾರ, ಮೇ 6 ರಂದು ಪತಿ ಪೂರ್ವಯೋಜಿತ ಉದ್ದೇಶದಿಂದ ತನ್ನೊಂದಿಗೆ ಹಾವನ್ನು ತಂದು ಮಲಗಿದ್ದ ಪತ್ನಿಯ ಮೇಲೆ ಎಸೆದ ಘಟನೆ ನಡೆದಿದೆ.</p>.<p>ನಿದ್ರಾವಸ್ಥೆಯಲ್ಲಿದ್ದ ಪತ್ನಿಗೆ ಹಾವು ಎರಡು ಬಾರಿ ಕಚ್ಚುವುದನ್ನು ಪತಿ ನೋಡುತ್ತ ನಿಂತಿದ್ದನೆಂದು ಗೊತ್ತಾಗಿದೆ.</p>.<p>ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುವ ಸೂರಜ್ ತನ್ನ ಪತ್ನಿ ಉತ್ರಾಳನ್ನು ಕೊಲ್ಲಲು ಹಾವನ್ನು ಖರೀದಿಸಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ.</p>.<p>ಆಕೆಯ ಹಣ ಮತ್ತು ಚಿನ್ನವನ್ನು ತೆಗೆದುಕೊಂಡು ಬೇರೊಬ್ಬರನ್ನು ಮದುವೆಯಾಗುವುದು ಅವನ ಯೋಜನೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮೇ 7 ರಂದು ಕೊಲ್ಲಂನಲ್ಲಿರುವ ತಮ್ಮ ಪತಿಯ ಮನೆಯಲ್ಲಿ ಉತ್ರಾ ಶವವಾಗಿ ಪತ್ತೆಯಾಗಿದ್ದಾರೆ. ಆಕೆಗೆ ಹಾವು ಕಚ್ಚಿ ಮೃತಳಾಗಿದ್ದಾಳೆಂದು ಕುಟುಂಬಸ್ಥರಿಗೆ ತಿಳಿದಾಗ, ಅವರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರಂ</strong>: ಕೇರಳದ ಕೊಲ್ಲಂನಲ್ಲಿ ಹಾವಿನಿಂದ ಕಚ್ಚಿಸಿ ಹೆಂಡತಿಯನ್ನು ಕೊಂದಿದ್ದಕ್ಕಾಗಿ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.</p>.<p>ಪೊಲೀಸರ ಪ್ರಕಾರ, ಮೇ 6 ರಂದು ಪತಿ ಪೂರ್ವಯೋಜಿತ ಉದ್ದೇಶದಿಂದ ತನ್ನೊಂದಿಗೆ ಹಾವನ್ನು ತಂದು ಮಲಗಿದ್ದ ಪತ್ನಿಯ ಮೇಲೆ ಎಸೆದ ಘಟನೆ ನಡೆದಿದೆ.</p>.<p>ನಿದ್ರಾವಸ್ಥೆಯಲ್ಲಿದ್ದ ಪತ್ನಿಗೆ ಹಾವು ಎರಡು ಬಾರಿ ಕಚ್ಚುವುದನ್ನು ಪತಿ ನೋಡುತ್ತ ನಿಂತಿದ್ದನೆಂದು ಗೊತ್ತಾಗಿದೆ.</p>.<p>ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುವ ಸೂರಜ್ ತನ್ನ ಪತ್ನಿ ಉತ್ರಾಳನ್ನು ಕೊಲ್ಲಲು ಹಾವನ್ನು ಖರೀದಿಸಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ.</p>.<p>ಆಕೆಯ ಹಣ ಮತ್ತು ಚಿನ್ನವನ್ನು ತೆಗೆದುಕೊಂಡು ಬೇರೊಬ್ಬರನ್ನು ಮದುವೆಯಾಗುವುದು ಅವನ ಯೋಜನೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮೇ 7 ರಂದು ಕೊಲ್ಲಂನಲ್ಲಿರುವ ತಮ್ಮ ಪತಿಯ ಮನೆಯಲ್ಲಿ ಉತ್ರಾ ಶವವಾಗಿ ಪತ್ತೆಯಾಗಿದ್ದಾರೆ. ಆಕೆಗೆ ಹಾವು ಕಚ್ಚಿ ಮೃತಳಾಗಿದ್ದಾಳೆಂದು ಕುಟುಂಬಸ್ಥರಿಗೆ ತಿಳಿದಾಗ, ಅವರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>