<p><strong>ಪಟ್ನಾ:</strong> ‘ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂಯುಕ್ತ ಜನತಾದಳದಲ್ಲಿ (ಜೆಡಿಯು) ತಾವು ಹೊಂದಿರುವ ಪ್ರಾಬಲ್ಯವನ್ನು ಬಿಟ್ಟುಕೊಡಬೇಕು’ ಎಂದು ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಸಲಹೆ ನೀಡಿದ್ದಾರೆ.</p>.<p>ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಪೋಸ್ಟ್ ರಾಜಕೀಯ ವಲಯದಲ್ಲಿ ಕಂಪನ ಸೃಷ್ಟಿಸಿದ ಬೆನ್ನಿಗೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಇದು ನನ್ನ ಅಭಿಪ್ರಾಯವಲ್ಲ. ಇಂದಿಗೂ ನನ್ನೊಂದಿಗೆ ಸಂಪರ್ಕದಲ್ಲಿರುವ ಜೆಡಿಯುನ ಸಹಸ್ರಾರು ಕಾರ್ಯಕರ್ತರ ಭಾವನೆಗೆ ಧ್ವನಿಯಾಗಿದ್ದೇನೆ ಅಷ್ಟೇ’ ಎಂದು ಸ್ಪಷ್ಟಪಡಿಸಿದರು.</p>.<p>‘ನಿತೀಶ್ ಕುಮಾರ್ ಅವರು ದೇಶದ ಅಗ್ರ ಐವರು ರಾಜಕಾರಣಿಗಳಲ್ಲಿ ಅಪ್ರತಿಮ ನಾಯಕ’ ಎಂದ ರಾಷ್ಟ್ರೀಯ ಲೋಕ ಮೋರ್ಚಾದ ಅಧ್ಯಕ್ಷರೂ ಆದ ಕುಶ್ವಾಹ, ‘ಪಕ್ಷದಲ್ಲಿನ ಪ್ರಾಬಲ್ಯ ಬಿಟ್ಟುಕೊಟ್ಟು, ರಾಜ್ಯದ ಆಡಳಿತದತ್ತ ಗಮನಹರಿಸುವುದು ಒಳ್ಳೆಯದು’ ಎಂದರು. </p>.ಬಿಹಾರದ ಜನ ಲಾಲು–ನಿತೀಶ್–ಮೋದಿಯಿಂದ ಮುಕ್ತರಾಗಲು ಬಯಸುತ್ತಾರೆ: ಪ್ರಶಾಂತ್ ಕಿಶೋರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ:</strong> ‘ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂಯುಕ್ತ ಜನತಾದಳದಲ್ಲಿ (ಜೆಡಿಯು) ತಾವು ಹೊಂದಿರುವ ಪ್ರಾಬಲ್ಯವನ್ನು ಬಿಟ್ಟುಕೊಡಬೇಕು’ ಎಂದು ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಸಲಹೆ ನೀಡಿದ್ದಾರೆ.</p>.<p>ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಪೋಸ್ಟ್ ರಾಜಕೀಯ ವಲಯದಲ್ಲಿ ಕಂಪನ ಸೃಷ್ಟಿಸಿದ ಬೆನ್ನಿಗೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಇದು ನನ್ನ ಅಭಿಪ್ರಾಯವಲ್ಲ. ಇಂದಿಗೂ ನನ್ನೊಂದಿಗೆ ಸಂಪರ್ಕದಲ್ಲಿರುವ ಜೆಡಿಯುನ ಸಹಸ್ರಾರು ಕಾರ್ಯಕರ್ತರ ಭಾವನೆಗೆ ಧ್ವನಿಯಾಗಿದ್ದೇನೆ ಅಷ್ಟೇ’ ಎಂದು ಸ್ಪಷ್ಟಪಡಿಸಿದರು.</p>.<p>‘ನಿತೀಶ್ ಕುಮಾರ್ ಅವರು ದೇಶದ ಅಗ್ರ ಐವರು ರಾಜಕಾರಣಿಗಳಲ್ಲಿ ಅಪ್ರತಿಮ ನಾಯಕ’ ಎಂದ ರಾಷ್ಟ್ರೀಯ ಲೋಕ ಮೋರ್ಚಾದ ಅಧ್ಯಕ್ಷರೂ ಆದ ಕುಶ್ವಾಹ, ‘ಪಕ್ಷದಲ್ಲಿನ ಪ್ರಾಬಲ್ಯ ಬಿಟ್ಟುಕೊಟ್ಟು, ರಾಜ್ಯದ ಆಡಳಿತದತ್ತ ಗಮನಹರಿಸುವುದು ಒಳ್ಳೆಯದು’ ಎಂದರು. </p>.ಬಿಹಾರದ ಜನ ಲಾಲು–ನಿತೀಶ್–ಮೋದಿಯಿಂದ ಮುಕ್ತರಾಗಲು ಬಯಸುತ್ತಾರೆ: ಪ್ರಶಾಂತ್ ಕಿಶೋರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>