<p><strong>ನವದೆಹಲಿ</strong>: ಹಾಟ್ಸ್ಪಾಟ್ ಎಂದು ಗುರುತಿಸಿರುವ ರಾಜ್ಯಗಳ ಪೈಕಿ ಕರ್ನಾಟಕ ಹೊರತುಪಡಿಸಿ, ಇತರೆಡೆ ಕೋವಿಡ್ನಿಂದಾಗುವ ಸಾವಿನ ಪ್ರಮಾಣದಲ್ಲಿ ಇನ್ನು ಎರಡರಿಂದ ಎರಡೂವರೆ ತಿಂಗಳಲ್ಲಿ ಇಳಿಕೆ ಕಂಡು ಬರಲಿದೆ ಎಂದು ಐಐಟಿಯ (ಬಾಂಬೆ) ವಿಜ್ಞಾನಿಯೊಬ್ಬರು ಪ್ರತಿಪಾದಿಸಿದ್ದಾರೆ.</p>.<p>ಈಗಾಗಲೇ ಸಾವಿನ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡು ಬಂದಿರುವ ಕರ್ನಾಟಕದಲ್ಲಿ ಇಂತಹ ವಿದ್ಯಮಾನ ಕಂಡು ಬರುವುದು ಕಷ್ಟ ಎಂಬ ಆತಂಕವನ್ನೂ ಅವರು ವ್ಯಕ್ತಪಡಿದ್ದಾರೆ.</p>.<p>ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಮೈಕಲ್ ಲೆವಿಟ್ ಅವರು ರೂಪಿಸಿರುವ ಗಣಿತ ಮಾದರಿಯನ್ನು ಆಧಾರವಾಗಿಟ್ಟುಕೊಂಡು, ಐಐಟಿ (ಬಾಂಬೆ)ಯ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಭಾಸ್ಕರನ್ ರಾಮನ್ ಅವರು ಇಂತಹ ಮುನ್ಸೂಚನೆ ನೀಡಿದ್ದಾರೆ.</p>.<p>ಆದರೆ, ವಿಜ್ಞಾನಿಗಳ ಮತ್ತೊಂದು ಸಮೂಹ ಲೆವಿಟ್ ಮಂಡಿಸಿರುವ ಗಣಿತ ಮಾದರಿ ಹಾಗೂ ಇದನ್ನೇ ಆಧಾರವಾಗಿಟ್ಟುಕೊಂಡು ಸಿದ್ಧಪಡಿಸಿದ ಮುನ್ಸೂಚನೆಯನ್ನು ಒಪ್ಪುವುದಿಲ್ಲ.</p>.<p>‘ಮುಂಬೈನಲ್ಲಿ ಸಾವಿನ ಪ್ರಮಾಣ ಇನ್ನೆರಡು ವಾರಗಳಲ್ಲಿ ಗರಿಷ್ಠ ಮಟ್ಟ ತಲುಪುವುದು. ದೆಹಲಿಯಲ್ಲಿ ಇನ್ನೂ ಎರಡೂವರೆ ತಿಂಗಳ ಕಾಲ ಈ ಪಿಡುಗಿಗೆ ಜನರು ಸಾವನ್ನಪ್ಪುವ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಕಂಡು ಬರುತ್ತದೆ. ಚೆನ್ನೈನಲ್ಲಿ ತಿಂಗಳ ನಂತರ ಕೋವಿಡ್ನ ಹಾವಳಿ ಇನ್ನೂ ಹೆಚ್ಚಾಗಲಿದೆ’ ಎಂದು ಭಾಸ್ಕರನ್ ಅವರ ಮಾದರಿ ವಿವರಿಸುತ್ತದೆ.</p>.<p>ಈ ಮಾದರಿ ಪ್ರಕಾರ, ಗುಜರಾತ್ ಈಗಾಗಲೇ ಇಂತಹ ದುರ್ದಿನಗಳನ್ನು ಅನುಭವಿಸುತ್ತಿದೆ. ಕರ್ನಾಟಕದಲ್ಲಿ ಈಗಷ್ಟೇ ಆರಂಭವಾಗಿದೆ. ಆದರೆ, ಕೇರಳಕ್ಕೆ ಸಂಬಂಧಿಸಿದ ದತ್ತಾಂಶ ಅಲ್ಪಪ್ರಮಾಣದಲ್ಲಿ ಲಭ್ಯ ಇರುವ ಕಾರಣ, ಈ ಮಾದರಿ ಆಧಾರದಲ್ಲಿ ಮುನ್ಸೂಚನೆ ಕಷ್ಟ ಎಂದು ವಿವರಿಸುತ್ತದೆ.</p>.<p>‘ಲೆವಿಟ್ ಅವರು ಪ್ರತಿಪಾದಿಸಿರುವ ಗಣಿತ ಮಾದರಿ ಮೇಲ್ನೋಟಕ್ಕೆ ಬಾಲಿಶ ಎನಿಸಿದರೂ, ಅದ್ಭುತವಾಗಿದೆ. ಚೀನಾದ ಹುಬೇ ಪ್ರಾಂತ್ಯದಲ್ಲಿನ ದತ್ತಾಂಶವನ್ನು ವಿಶ್ಲೇಷಿಸಿ ಅವರು ಕೊರೊನಾ ಸೋಂಕಿನ ಪ್ರಸರಣದ ತೀವ್ರತೆ ಕುರಿತು ಮಾರ್ಚ್–ಏಪ್ರಿಲ್ನಲ್ಲಿಯೇ ಮುನ್ಸೂಚನೆ ನೀಡಿದ್ದರು’ ಎಂದೂ ಭಾಸ್ಕರನ್ ಹೇಳಿದರು.</p>.<p><strong>‘ಲೆವಿಟ್ ಮಾದರಿ ಭಾರತಕ್ಕೆ ಅನ್ವಯಿಸದು’</strong></p>.<p>ವಿಜ್ಞಾನಿ ಮೈಕಲ್ ಲೆವಿಟ್ ಮಾದರಿ ಭಾರತದಲ್ಲಿನ ಕೋವಿಡ್–19 ವಿದ್ಯಮಾನಕ್ಕೆ ಅನ್ವಯ ಆಗುವುದಿಲ್ಲ’ ಎಂದು ಜರ್ಮನಿಯ ಹೆಲ್ಮ್ಹಾಟ್ಜ್ ಸೆಂಟರ್ ಫಾರ್ ಇನ್ಫೆಕ್ಷನ್ ರಿಸರ್ಚ್ನ ವಿಜ್ಞಾನಿ ತನ್ಮಯ್ ಮಿತ್ರಾ ಅಭಿಪ್ರಾಯಪಡುತ್ತಾರೆ.</p>.<p>‘ರೋಗ ಪ್ರಸರಣದ ತೀವ್ರತೆ, ಸೋಂಕು ಸ್ಫೋಟಗೊಳ್ಳುವ ಬಗೆ ವಿವರಿಸುವ ಜೈವಿಕ ಗುಣಲಕ್ಷಣಗಳ ಆಧಾರದಲ್ಲಿ ಈ ಮಾದರಿಯನ್ನು ರೂಪಿಸಿಲ್ಲ’ ಎಂದೂ ಹೇಳುತ್ತಾರೆ.</p>.<p>ಚೆನ್ನೈನ ಇನ್ಸ್ಟಿಟ್ಯೂಟ್ ಆಫ್ ಮ್ಯಾಥೆಮ್ಯಾಟಿಕಲ್ ಸೈನ್ಸಸ್ನ ನಿವೃತ್ತ ಪ್ತಾಧ್ಯಾಪಕ ರಾಮಚಂದ್ರನ್ ಶಂಕರ್ ಅವರೂ ಮಿತ್ರಾ ಅವರ ಮಾತಿಗೆ ದನಿಗೂಡಿಸುತ್ತಾರೆ.</p>.<p>‘ರೋಗ ಪ್ರಸರಣಗೊಳ್ಳುವ ರೀತಿಯ ಆಧಾರವಾಗಿಟ್ಟುಕೊಂಡು ಈ ಮಾದರಿಯನ್ನು ರೂಪಿಸಿಲ್ಲ. ಒಂದು ಅವಧಿಯಲ್ಲಿ ಕೋವಿಡ್ನಿಂದಾದ ಸಾವಿನ ಪ್ರಮಾಣವನ್ನು ಮಾತ್ರ ಪರಿಗಣಿಸಲಾಗಿದೆ’ ಎಂದು ರಾಮಚಂದ್ರನ್ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಹಾಟ್ಸ್ಪಾಟ್ ಎಂದು ಗುರುತಿಸಿರುವ ರಾಜ್ಯಗಳ ಪೈಕಿ ಕರ್ನಾಟಕ ಹೊರತುಪಡಿಸಿ, ಇತರೆಡೆ ಕೋವಿಡ್ನಿಂದಾಗುವ ಸಾವಿನ ಪ್ರಮಾಣದಲ್ಲಿ ಇನ್ನು ಎರಡರಿಂದ ಎರಡೂವರೆ ತಿಂಗಳಲ್ಲಿ ಇಳಿಕೆ ಕಂಡು ಬರಲಿದೆ ಎಂದು ಐಐಟಿಯ (ಬಾಂಬೆ) ವಿಜ್ಞಾನಿಯೊಬ್ಬರು ಪ್ರತಿಪಾದಿಸಿದ್ದಾರೆ.</p>.<p>ಈಗಾಗಲೇ ಸಾವಿನ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡು ಬಂದಿರುವ ಕರ್ನಾಟಕದಲ್ಲಿ ಇಂತಹ ವಿದ್ಯಮಾನ ಕಂಡು ಬರುವುದು ಕಷ್ಟ ಎಂಬ ಆತಂಕವನ್ನೂ ಅವರು ವ್ಯಕ್ತಪಡಿದ್ದಾರೆ.</p>.<p>ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಮೈಕಲ್ ಲೆವಿಟ್ ಅವರು ರೂಪಿಸಿರುವ ಗಣಿತ ಮಾದರಿಯನ್ನು ಆಧಾರವಾಗಿಟ್ಟುಕೊಂಡು, ಐಐಟಿ (ಬಾಂಬೆ)ಯ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಭಾಸ್ಕರನ್ ರಾಮನ್ ಅವರು ಇಂತಹ ಮುನ್ಸೂಚನೆ ನೀಡಿದ್ದಾರೆ.</p>.<p>ಆದರೆ, ವಿಜ್ಞಾನಿಗಳ ಮತ್ತೊಂದು ಸಮೂಹ ಲೆವಿಟ್ ಮಂಡಿಸಿರುವ ಗಣಿತ ಮಾದರಿ ಹಾಗೂ ಇದನ್ನೇ ಆಧಾರವಾಗಿಟ್ಟುಕೊಂಡು ಸಿದ್ಧಪಡಿಸಿದ ಮುನ್ಸೂಚನೆಯನ್ನು ಒಪ್ಪುವುದಿಲ್ಲ.</p>.<p>‘ಮುಂಬೈನಲ್ಲಿ ಸಾವಿನ ಪ್ರಮಾಣ ಇನ್ನೆರಡು ವಾರಗಳಲ್ಲಿ ಗರಿಷ್ಠ ಮಟ್ಟ ತಲುಪುವುದು. ದೆಹಲಿಯಲ್ಲಿ ಇನ್ನೂ ಎರಡೂವರೆ ತಿಂಗಳ ಕಾಲ ಈ ಪಿಡುಗಿಗೆ ಜನರು ಸಾವನ್ನಪ್ಪುವ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಕಂಡು ಬರುತ್ತದೆ. ಚೆನ್ನೈನಲ್ಲಿ ತಿಂಗಳ ನಂತರ ಕೋವಿಡ್ನ ಹಾವಳಿ ಇನ್ನೂ ಹೆಚ್ಚಾಗಲಿದೆ’ ಎಂದು ಭಾಸ್ಕರನ್ ಅವರ ಮಾದರಿ ವಿವರಿಸುತ್ತದೆ.</p>.<p>ಈ ಮಾದರಿ ಪ್ರಕಾರ, ಗುಜರಾತ್ ಈಗಾಗಲೇ ಇಂತಹ ದುರ್ದಿನಗಳನ್ನು ಅನುಭವಿಸುತ್ತಿದೆ. ಕರ್ನಾಟಕದಲ್ಲಿ ಈಗಷ್ಟೇ ಆರಂಭವಾಗಿದೆ. ಆದರೆ, ಕೇರಳಕ್ಕೆ ಸಂಬಂಧಿಸಿದ ದತ್ತಾಂಶ ಅಲ್ಪಪ್ರಮಾಣದಲ್ಲಿ ಲಭ್ಯ ಇರುವ ಕಾರಣ, ಈ ಮಾದರಿ ಆಧಾರದಲ್ಲಿ ಮುನ್ಸೂಚನೆ ಕಷ್ಟ ಎಂದು ವಿವರಿಸುತ್ತದೆ.</p>.<p>‘ಲೆವಿಟ್ ಅವರು ಪ್ರತಿಪಾದಿಸಿರುವ ಗಣಿತ ಮಾದರಿ ಮೇಲ್ನೋಟಕ್ಕೆ ಬಾಲಿಶ ಎನಿಸಿದರೂ, ಅದ್ಭುತವಾಗಿದೆ. ಚೀನಾದ ಹುಬೇ ಪ್ರಾಂತ್ಯದಲ್ಲಿನ ದತ್ತಾಂಶವನ್ನು ವಿಶ್ಲೇಷಿಸಿ ಅವರು ಕೊರೊನಾ ಸೋಂಕಿನ ಪ್ರಸರಣದ ತೀವ್ರತೆ ಕುರಿತು ಮಾರ್ಚ್–ಏಪ್ರಿಲ್ನಲ್ಲಿಯೇ ಮುನ್ಸೂಚನೆ ನೀಡಿದ್ದರು’ ಎಂದೂ ಭಾಸ್ಕರನ್ ಹೇಳಿದರು.</p>.<p><strong>‘ಲೆವಿಟ್ ಮಾದರಿ ಭಾರತಕ್ಕೆ ಅನ್ವಯಿಸದು’</strong></p>.<p>ವಿಜ್ಞಾನಿ ಮೈಕಲ್ ಲೆವಿಟ್ ಮಾದರಿ ಭಾರತದಲ್ಲಿನ ಕೋವಿಡ್–19 ವಿದ್ಯಮಾನಕ್ಕೆ ಅನ್ವಯ ಆಗುವುದಿಲ್ಲ’ ಎಂದು ಜರ್ಮನಿಯ ಹೆಲ್ಮ್ಹಾಟ್ಜ್ ಸೆಂಟರ್ ಫಾರ್ ಇನ್ಫೆಕ್ಷನ್ ರಿಸರ್ಚ್ನ ವಿಜ್ಞಾನಿ ತನ್ಮಯ್ ಮಿತ್ರಾ ಅಭಿಪ್ರಾಯಪಡುತ್ತಾರೆ.</p>.<p>‘ರೋಗ ಪ್ರಸರಣದ ತೀವ್ರತೆ, ಸೋಂಕು ಸ್ಫೋಟಗೊಳ್ಳುವ ಬಗೆ ವಿವರಿಸುವ ಜೈವಿಕ ಗುಣಲಕ್ಷಣಗಳ ಆಧಾರದಲ್ಲಿ ಈ ಮಾದರಿಯನ್ನು ರೂಪಿಸಿಲ್ಲ’ ಎಂದೂ ಹೇಳುತ್ತಾರೆ.</p>.<p>ಚೆನ್ನೈನ ಇನ್ಸ್ಟಿಟ್ಯೂಟ್ ಆಫ್ ಮ್ಯಾಥೆಮ್ಯಾಟಿಕಲ್ ಸೈನ್ಸಸ್ನ ನಿವೃತ್ತ ಪ್ತಾಧ್ಯಾಪಕ ರಾಮಚಂದ್ರನ್ ಶಂಕರ್ ಅವರೂ ಮಿತ್ರಾ ಅವರ ಮಾತಿಗೆ ದನಿಗೂಡಿಸುತ್ತಾರೆ.</p>.<p>‘ರೋಗ ಪ್ರಸರಣಗೊಳ್ಳುವ ರೀತಿಯ ಆಧಾರವಾಗಿಟ್ಟುಕೊಂಡು ಈ ಮಾದರಿಯನ್ನು ರೂಪಿಸಿಲ್ಲ. ಒಂದು ಅವಧಿಯಲ್ಲಿ ಕೋವಿಡ್ನಿಂದಾದ ಸಾವಿನ ಪ್ರಮಾಣವನ್ನು ಮಾತ್ರ ಪರಿಗಣಿಸಲಾಗಿದೆ’ ಎಂದು ರಾಮಚಂದ್ರನ್ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>