<p><strong>ಶಿಮ್ಲಾ</strong>: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು.</p><p>‘ಇದು ಇಲ್ಲಿಂದ ನಾಮಪತ್ರ ಸಲ್ಲಿಸಲು ನನಗೆ ಲಭಿಸಿದ ಮೊದಲ ಮತ್ತು ಕೊನೆಯ ಅವಕಾಶ ಅಲ್ಲ ಎಂದು ಭಾವಿಸುತ್ತೇನೆ. ಭವಿಷ್ಯದಲ್ಲಿ ಮಂಡಿ ಕ್ಷೇತ್ರದಿಂದ ಇನ್ನಷ್ಟು ಸಲ ನಾಮಪತ್ರ ಸಲ್ಲಿಸುವ ಅವಕಾಶಗಳು ಸಿಗಲಿವೆ’ ಎಂದು ಕಂಗನಾ ವಿಶ್ವಾಸ ವ್ಯಕ್ತಪಡಿಸಿದರು. </p>.ವಾರಾಣಸಿ ಲೋಕಸಭೆ | ಮೋದಿ ನಾಮಪತ್ರ; ಎನ್ಡಿಎ ಬಲ ಪ್ರದರ್ಶನ.ಪಂಜಾಬ್: ಲೋಕಸಭಾ ಚುನಾವಣೆ– ಪಂಚ ನದಿಗಳ ನಾಡಲ್ಲಿ ಚತುಷ್ಕೋನ ಸ್ಪರ್ಧೆ .ಮತದಾನ ಮಾಡಿಸುವ ಸಲುವಾಗಿ ತಾಯಿ ಹೊತ್ತು 3 ಕಿ.ಮೀ ನಡೆದ ಮಗ. <p>ಹಿಮಾಚಲ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಬಿಂದಲ್ ಅವರು ಕಂಗನಾಗೆ ಸಾಥ್ ನೀಡಿದರು.</p><p>‘ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿಯಿಂದ (ವಾರಾಣಸಿ) ಮೂರನೇ ಬಾರಿಗೆ ನಾಮಪತ್ರ ಸಲ್ಲಿಸಿದ ದಿನದಂದೇ ಚೋಟಿ ಕಾಶಿಯಿಂದ (ಮಂಡಿ) ನಾಮಪತ್ರ ಸಲ್ಲಿಸುವ ಅವಕಾಶ ನನಗೆ ಲಭಿಸಿದ್ದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.</p>.ಮುಂಬೈನಲ್ಲಿ ಅನಧಿಕೃತ ಬೃಹತ್ ಜಾಹೀರಾತು ಫಲಕ ಕುಸಿತ: ಮೃತರ ಸಂಖ್ಯೆ 14ಕ್ಕೆ ಏರಿಕೆ.<p>ಕಾಂಗ್ರೆಸ್ ಪಕ್ಷದ ಚಂಡೀಗಢ ಕ್ಷೇತ್ರದ ಅಭ್ಯರ್ಥಿ ಮನೀಷ್ ತಿವಾರಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಪಕ್ಷದ ಚಂಡೀಗಢ ಘಟಕದ ಅಧ್ಯಕ್ಷ ಎಚ್.ಎಸ್.ಲಕ್ಕಿ ಹಾಗೂ ಇತರ ಮುಖಂಡರು ಜತೆಗಿದ್ದರು. ತಿವಾರಿ ಅವರು ಬಿಜೆಪಿಯ ಸಂಜಯ್ ಟಂಡನ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. </p> .ತ್ವರಿತವಾಗಿ ಮತದಾನ ಪ್ರಮಾಣ ಪ್ರಕಟಣೆಗೆ ಮನವಿ 17ಕ್ಕೆ ಅರ್ಜಿಯ ವಿಚಾರಣೆ .ಲೋಕಸಭಾ ಚುನಾವಣೆ | 4ನೇ ಹಂತದ ಮತದಾನದ ವೇಳೆ ಹಲವೆಡೆ ಹಿಂಸಾಚಾರ. <p>‘ಚಂಡೀಗಢ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ನಡೆಸಲು ನಿಮ್ಮ ಆಶೀರ್ವಾದ ಬೇಕಿದೆ’ ಎಂದು ತಿವಾರಿ ‘ಎಕ್ಸ್’ನಲ್ಲಿ ಬರೆದಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಮ್ಲಾ</strong>: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು.</p><p>‘ಇದು ಇಲ್ಲಿಂದ ನಾಮಪತ್ರ ಸಲ್ಲಿಸಲು ನನಗೆ ಲಭಿಸಿದ ಮೊದಲ ಮತ್ತು ಕೊನೆಯ ಅವಕಾಶ ಅಲ್ಲ ಎಂದು ಭಾವಿಸುತ್ತೇನೆ. ಭವಿಷ್ಯದಲ್ಲಿ ಮಂಡಿ ಕ್ಷೇತ್ರದಿಂದ ಇನ್ನಷ್ಟು ಸಲ ನಾಮಪತ್ರ ಸಲ್ಲಿಸುವ ಅವಕಾಶಗಳು ಸಿಗಲಿವೆ’ ಎಂದು ಕಂಗನಾ ವಿಶ್ವಾಸ ವ್ಯಕ್ತಪಡಿಸಿದರು. </p>.ವಾರಾಣಸಿ ಲೋಕಸಭೆ | ಮೋದಿ ನಾಮಪತ್ರ; ಎನ್ಡಿಎ ಬಲ ಪ್ರದರ್ಶನ.ಪಂಜಾಬ್: ಲೋಕಸಭಾ ಚುನಾವಣೆ– ಪಂಚ ನದಿಗಳ ನಾಡಲ್ಲಿ ಚತುಷ್ಕೋನ ಸ್ಪರ್ಧೆ .ಮತದಾನ ಮಾಡಿಸುವ ಸಲುವಾಗಿ ತಾಯಿ ಹೊತ್ತು 3 ಕಿ.ಮೀ ನಡೆದ ಮಗ. <p>ಹಿಮಾಚಲ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಬಿಂದಲ್ ಅವರು ಕಂಗನಾಗೆ ಸಾಥ್ ನೀಡಿದರು.</p><p>‘ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿಯಿಂದ (ವಾರಾಣಸಿ) ಮೂರನೇ ಬಾರಿಗೆ ನಾಮಪತ್ರ ಸಲ್ಲಿಸಿದ ದಿನದಂದೇ ಚೋಟಿ ಕಾಶಿಯಿಂದ (ಮಂಡಿ) ನಾಮಪತ್ರ ಸಲ್ಲಿಸುವ ಅವಕಾಶ ನನಗೆ ಲಭಿಸಿದ್ದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.</p>.ಮುಂಬೈನಲ್ಲಿ ಅನಧಿಕೃತ ಬೃಹತ್ ಜಾಹೀರಾತು ಫಲಕ ಕುಸಿತ: ಮೃತರ ಸಂಖ್ಯೆ 14ಕ್ಕೆ ಏರಿಕೆ.<p>ಕಾಂಗ್ರೆಸ್ ಪಕ್ಷದ ಚಂಡೀಗಢ ಕ್ಷೇತ್ರದ ಅಭ್ಯರ್ಥಿ ಮನೀಷ್ ತಿವಾರಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಪಕ್ಷದ ಚಂಡೀಗಢ ಘಟಕದ ಅಧ್ಯಕ್ಷ ಎಚ್.ಎಸ್.ಲಕ್ಕಿ ಹಾಗೂ ಇತರ ಮುಖಂಡರು ಜತೆಗಿದ್ದರು. ತಿವಾರಿ ಅವರು ಬಿಜೆಪಿಯ ಸಂಜಯ್ ಟಂಡನ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. </p> .ತ್ವರಿತವಾಗಿ ಮತದಾನ ಪ್ರಮಾಣ ಪ್ರಕಟಣೆಗೆ ಮನವಿ 17ಕ್ಕೆ ಅರ್ಜಿಯ ವಿಚಾರಣೆ .ಲೋಕಸಭಾ ಚುನಾವಣೆ | 4ನೇ ಹಂತದ ಮತದಾನದ ವೇಳೆ ಹಲವೆಡೆ ಹಿಂಸಾಚಾರ. <p>‘ಚಂಡೀಗಢ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ನಡೆಸಲು ನಿಮ್ಮ ಆಶೀರ್ವಾದ ಬೇಕಿದೆ’ ಎಂದು ತಿವಾರಿ ‘ಎಕ್ಸ್’ನಲ್ಲಿ ಬರೆದಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>