ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಉಲ್ಲೇಖಿಸಿ, ‘ಅವರ ಬಳಿ ಎಲ್ಲಾ ಅಧಿಕಾರ ಇದೆ. ಸಿಬಿಐ, ಇ.ಡಿ, ಗುಪ್ತಚರ ಇಲಾಖೆ ಎಲ್ಲವೂ ಇದೆ. ಆದರೆ, ನಮ್ಮ ಬಳಿ ಧರ್ಮವಿದೆ. ಇದು ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟ. ನೀವು ಧರ್ಮದ ಜೊತೆ ನಿಲ್ಲುತ್ತೀರೋ ಅಥವಾ ಅಧರ್ಮದ ಜೊತೆ ನಿಲ್ಲುತ್ತೀರೋ ಎಂಬುದನ್ನು ನೀವೇ ನಿರ್ಧರಿಸಿ’ ಎಂದು ಮತದಾರರಿಗೆ ಕರೆ ನೀಡಿದರು.