ತ್ರಿಂಬಕೇಶ್ವರದಲ್ಲಿರುವ ಎಂವಿಪಿ ಕಾಲೇಜು ಮತಗಟ್ಟೆಗೆ 25–30 ಬೆಂಬಲಿಗರೊಂದಿಗೆ ಬಂದ ಮಹಾರಾಜ್ ಅವರು, ತನ್ನ ಕತ್ತಲ್ಲಿದ್ದ ಮಾಲೆಯೊಂದನ್ನು ತೆಗೆದು ಇವಿಎಂ ಯಂತ್ರಕ್ಕೆ ಹಾಕಿದ್ದಾರೆ. ಬಳಿಕ ಮತ ಚಲಾಯಿಸಿದ್ದಾರೆ ಎಂದು ಪೊಲೀಂಗ್ ಅಧಿಕಾರಿ ದೂರಿನಲ್ಲಿ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ ಹಾಗೂ ಜನಪ್ರತಿನಿಧಿಗಳ ಕಾಯ್ದೆಯಡಿ ತ್ರಿಂಬಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.