<p><strong>ಮುಂಬೈ</strong>: ರತ್ನಗಿರಿ ಜಿಲ್ಲೆಯ ಗುಹಾಗರ್ ತಾಲ್ಲೂಕಿನಿಂದ ಮರಾಠವಾಡದ ಹಿಂಗೋಲಿ ಜಿಲ್ಲೆಯಲ್ಲಿರುವ ತಮ್ಮ ಊರಿಗೆ ಹೋಗುತ್ತಿದ್ದ ಕುಟುಂಬವೊಂದು ಮೂರು ದಿನಗಳಿಂದ ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ.</p><p>ನಾಪತ್ತೆಯಾಗಿರುವ ಕುಟುಂಬಸ್ಥರು ಹಿಂಗೋಲಿಯ ಖಿಲ್ಲಾರ್ ಗ್ರಾಮದವರು. ಅವರನ್ನು ದ್ಯಾನೇಶ್ವರ್ ಚವಾಣ್, ಅವರ ಪತ್ನಿ ಸ್ಮಿತಾ, ಪುತ್ರರಾದ ಪಿಯೂಷ್, ಶೌರ್ಯ ಎಂದು ಗುರುತಿಸಲಾಗಿದೆ. ಅವರೆಲ್ಲ, ತಮ್ಮ ಊರಿನಲ್ಲಿ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುಹಾಗರ್ನಿಂದ ಮಂಗಳವಾರ (ಆಗಸ್ಟ್ 26ರಂದು) ಕಾರಿನಲ್ಲಿ ಹೊರಟಿದ್ದರು.</p><p>ಕುಟುಂಬವು ಕೊನೆಯ ಬಾರಿಗೆ ಸಂಪರ್ಕಕ್ಕೆ ಬಂದಿದ್ದು, ಮಂಗಳವಾರ ಸಂಜೆ 5ರ ಹೊತ್ತಿಗೆ. ಆಗ ರತ್ನಗಿರಿ ಜಿಲ್ಲೆಯ ಚಿಪ್ಲುನ್ ಪ್ರದೇಶದಲ್ಲಿತ್ತು. ಅದಾದ ಬಳಿಕ ಅವರ ಫೋನ್ಗಳೂ ಸಂಪರ್ಕಕ್ಕೆ ಸಿಕ್ಕಿಲ್ಲ.</p><p>ಈ ಸಂಬಂಧ ಎರಡೂ ಜಿಲ್ಲೆಗಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.</p><p>ಚವಾಣ್ ದಂಪತಿ ಗುಹಾಗರ್ನ ಪೊಮೆಂಡಿಯಲ್ಲಿ ಜಿಲ್ಲಾ ಪರಿಷದ್ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.</p><p>ಕರಾವಳಿಯ ಕೊಂಕಣ ಪ್ರದೇಶದ ರತ್ನಗಿರಿಯಿಂದ ಹಿಂಗೋಲಿ ಜಿಲ್ಲೆ ಸುಮಾರು 750 ಕಿ.ಮೀ. ದೂದರಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ರತ್ನಗಿರಿ ಜಿಲ್ಲೆಯ ಗುಹಾಗರ್ ತಾಲ್ಲೂಕಿನಿಂದ ಮರಾಠವಾಡದ ಹಿಂಗೋಲಿ ಜಿಲ್ಲೆಯಲ್ಲಿರುವ ತಮ್ಮ ಊರಿಗೆ ಹೋಗುತ್ತಿದ್ದ ಕುಟುಂಬವೊಂದು ಮೂರು ದಿನಗಳಿಂದ ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ.</p><p>ನಾಪತ್ತೆಯಾಗಿರುವ ಕುಟುಂಬಸ್ಥರು ಹಿಂಗೋಲಿಯ ಖಿಲ್ಲಾರ್ ಗ್ರಾಮದವರು. ಅವರನ್ನು ದ್ಯಾನೇಶ್ವರ್ ಚವಾಣ್, ಅವರ ಪತ್ನಿ ಸ್ಮಿತಾ, ಪುತ್ರರಾದ ಪಿಯೂಷ್, ಶೌರ್ಯ ಎಂದು ಗುರುತಿಸಲಾಗಿದೆ. ಅವರೆಲ್ಲ, ತಮ್ಮ ಊರಿನಲ್ಲಿ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುಹಾಗರ್ನಿಂದ ಮಂಗಳವಾರ (ಆಗಸ್ಟ್ 26ರಂದು) ಕಾರಿನಲ್ಲಿ ಹೊರಟಿದ್ದರು.</p><p>ಕುಟುಂಬವು ಕೊನೆಯ ಬಾರಿಗೆ ಸಂಪರ್ಕಕ್ಕೆ ಬಂದಿದ್ದು, ಮಂಗಳವಾರ ಸಂಜೆ 5ರ ಹೊತ್ತಿಗೆ. ಆಗ ರತ್ನಗಿರಿ ಜಿಲ್ಲೆಯ ಚಿಪ್ಲುನ್ ಪ್ರದೇಶದಲ್ಲಿತ್ತು. ಅದಾದ ಬಳಿಕ ಅವರ ಫೋನ್ಗಳೂ ಸಂಪರ್ಕಕ್ಕೆ ಸಿಕ್ಕಿಲ್ಲ.</p><p>ಈ ಸಂಬಂಧ ಎರಡೂ ಜಿಲ್ಲೆಗಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.</p><p>ಚವಾಣ್ ದಂಪತಿ ಗುಹಾಗರ್ನ ಪೊಮೆಂಡಿಯಲ್ಲಿ ಜಿಲ್ಲಾ ಪರಿಷದ್ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.</p><p>ಕರಾವಳಿಯ ಕೊಂಕಣ ಪ್ರದೇಶದ ರತ್ನಗಿರಿಯಿಂದ ಹಿಂಗೋಲಿ ಜಿಲ್ಲೆ ಸುಮಾರು 750 ಕಿ.ಮೀ. ದೂದರಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>