<p><strong>ನವದೆಹಲಿ:</strong> ಪಕ್ಷದಲ್ಲಿ ನವೋತ್ಸಾಹ ಮೂಡಿಸಿ, ಸಂಘಟನೆಯನ್ನು ಬಲಪಡಿಸಲು, ಚುನಾವಣೆಗಳಲ್ಲಿ ಪಕ್ಷದ ಹೋರಾಟದ ಶೈಲಿಯನ್ನೇ ಬದಲಿಸಲು ‘ಕಠಿಣ ನಿರ್ಧಾರ’ ತೆಗೆದುಕೊಳ್ಳುವುದು ಅಗತ್ಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪ್ರತಿಪಾದಿಸಿದ್ದಾರೆ. </p><p>ಏಕತೆಯ ಕೊರತೆ, ಪರಸ್ಪರರ ವಿರುದ್ಧ ಹೇಳಿಕೆ ನೀಡುವುದು, ನಕಾರಾತ್ಮಕ ಅಥವಾ ನಿರಾಸೆಯಿಂದ ಮಾತನಾಡುವ ಬೆಳವಣಿಗೆಗಳನ್ನು ಉಲ್ಲೇಖಿಸಿದ ಖರ್ಗೆ ಅವರು, ‘ಪಕ್ಷಕ್ಕೆ ತನ್ನದೇ ಸಂಕಥನ ಇಲ್ಲದಿರುವುದು ಸಂಘಟನೆಗೆ ಪೆಟ್ಟು ನೀಡುತ್ತಿದೆ’ ಎಂದು ಹೇಳಿದರು.</p><p>ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಪಕ್ಷವು ಕೈಗೊಂಡ ನಿಲುವು ಮತ್ತು ಹೋರಾಟದ ಶೈಲಿಯನ್ನು ಸಮರ್ಥಿಸಿಕೊಂಡರು. ಕೆಲವರು ಪರಸ್ಪರರ ವಿರುದ್ಧ ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಇದರಿಂದ ಪಕ್ಷದ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ ಎಂದು ಹೇಳಿದರು.</p><p>ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಳಕೆ ಕುರಿತು ಪಕ್ಷದ ಟೀಕೆಗೂ ಆಕ್ಷೇಪಿಸಿದವರನ್ನು ಉದ್ದೇಶಿಸಿ, ‘ಇ.ವಿ.ಎಂಗಳ ಬಳಕೆಯಿಂದಾಗಿ ಚುನಾವಣಾ ಪ್ರಕ್ರಿಯೆಯನ್ನೇ ಶಂಕಿಸುವಂತೆ ಆಗಿದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಉತ್ತಮ ಸಾಧನೆಯ ಬಳಿಕ ಮಹಾರಾಷ್ಟ್ರದ ಫಲಿತಾಂಶದ ಸಮರ್ಥನೆಗೆ ಯಾವುದೇ ಅಂಕಗಣಿತ ಲೆಕ್ಕಾಚಾರದಿಂದ ಅಸಾಧ್ಯ’ ಎಂದರು.</p><p>‘ಲೋಕಸಭೆ ಚುನಾವಣೆಯ ಉತ್ತಮ ಫಲಿತಾಂಶದ ಬಳಿಕ ವಿಧಾನಸಭೆ ಚುನಾವಣೆಗಳಲ್ಲಿ ಹಿನ್ನಡೆ ಆಯಿತು. ಅದೇ ಕಾರಣಕ್ಕೆ ಈಗ ಕಠಿಣ ನಿರ್ಧಾರ ಅಗತ್ಯ. ರಾಜಕೀಯ ಪ್ರತಿಸ್ಪರ್ಧಿಗಳ ನಡೆಗಳನ್ನು ನಿತ್ಯ ಗಮನಿಸಬೇಕು ಸಕಾಲದಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ’ ಎಂದರು.</p><p>‘ಹರಿಯಾಣ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ನಲ್ಲಿ ಪಕ್ಷದ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಚುನಾವಣಾ ಫಲಿತಾಂಶದಿಂದ ಪಾಠ ಕಲಿತು ಲೋಪ, ದೌರ್ಬಲ್ಯಗಳನ್ನು ತಕ್ಷಣ ಸರಿಪಡಿಸಿಕೊಳ್ಳುವುದು ಈಗಿರುವ ಸವಾಲು’ ಎಂದು ಹೇಳಿದರು.</p><p>ಮುಖ್ಯವಾಗಿ ಒಗ್ಗಟ್ಟು ಇರಬೇಕು ಎಂದು ಪದೇ ಪದೇ ಹೇಳಲು ಬಯಸುತ್ತೇನೆ. ಒಗ್ಗಟ್ಟಿನಿಂದ ಎದುರಿಸದಿದ್ದರೆ, ಪರಸ್ಪರ ವಿರುದ್ಧದ ಹೇಳಿಕೆ ನಿಲ್ಲಿಸದಿದ್ದರೆ ರಾಜಕೀಯ ವಿರೋಧಿಗಳನ್ನು ಸೋಲಿಸುವುದಾದರೂ ಹೇಗೆ ಎಂದು ಖರ್ಗೆ ಪ್ರಶ್ನಿಸಿದರು.</p><p>ಪಕ್ಷದಲ್ಲಿ ಶಿಸ್ತಿನ ಅಸ್ತ್ರವಿದೆ. ಆದರೆ, ಅದನ್ನು ಪ್ರಯೋಗಿಸಲು ಬಯಸುವುದಿಲ್ಲ. ಪಕ್ಷದ ಒಟ್ಟು ಶಕ್ತಿಯಲ್ಲಿಯೇ ನಮ್ಮ ಶಕ್ತಿಯೂ ಇದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಖರ್ಗೆ ಅವರು ಪಕ್ಷದ ನಾಯಕರಿಗೆ ಕಟುವಾಗಿ ಹೇಳಿದರು. </p><p>‘ವಿಧಾನಸಭೆ ಚುನಾವಣೆಯಲ್ಲಿ ವಾತಾವರಣ ಪಕ್ಷದ ಪರವಾಗಿತ್ತು. ಆದರೆ, ಅದೊಂದೇ ಗೆಲುವಿನ ಖಾತರಿಯನ್ನು ನೀಡದು. ಸಕಾರಾತ್ಮಕ ವಾತಾವರಣವನ್ನು ಗೆಲುವಾಗಿ ಪರಿವರ್ತಿಸುವ ಕಲೆಯನ್ನು ನಾವು ಸಿದ್ಧಿಸಿಕೊಳ್ಳಬೇಕಾಗಿದೆ. ನಾವು ವಾತಾವರಣದ ಅನುಕೂಲ ಪಡೆಯಲು ಏಕೆ ಆಗುತ್ತಿಲ್ಲ ಎಂದು ಎಲ್ಲರೂ ಪ್ರಶ್ನಿಸಿಕೊಳ್ಳಬೇಕಾಗಿದೆ’ ಎಂದು ಕಿವಿಮಾತು ಹೇಳಿದರು. </p><p>ರಾಷ್ಟ್ರಮಟ್ಟದ ವಿಷಯಗಳು, ರಾಷ್ಟ್ರೀಯ ನಾಯಕರನ್ನೇ ನೆಚ್ಚಿಕೊಂಡು ಎಷ್ಟು ದಿನ ರಾಜ್ಯ ಚುನಾವಣೆಗಳನ್ನು ಎದುರಿಸುತ್ತೀರಿ ಎಂದು ಮುಖಂಡರಿಗೆ ಪ್ರಶ್ನಿಸಿದ ಅವರು, ‘ಯಾವುದೇ ಕಾರಣಕ್ಕೂ ಸ್ಥಳೀಯ ವಿಷಯಗಳನ್ನು ಕಡೆಗಣಿಸಬಾರದು’ ಎಂದು ಸಲಹೆ ಮಾಡಿದರು.</p>.<div><blockquote>ಕಾಂಗ್ರೆಸ್ ಪಕ್ಷ ಚುನಾವಣೆಗಳಲ್ಲಿ ಸೋತಿರಬಹುದು. ಆದರೆ ನಿರುದ್ಯೋಗ ಆರ್ಥಿಕ ಅಸಮಾನತೆ ಹಣದುಬ್ಬರ ‘ಜ್ವಲಂತ ಸಮಸ್ಯೆ’ಗಳು ಎಂದು ಮರೆಯಬಾರದು. ಜಾತಿಗಣತಿ ಕೂಡಾ ಮುಖ್ಯವಾದುದು </blockquote><span class="attribution">-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪಕ್ಷದಲ್ಲಿ ನವೋತ್ಸಾಹ ಮೂಡಿಸಿ, ಸಂಘಟನೆಯನ್ನು ಬಲಪಡಿಸಲು, ಚುನಾವಣೆಗಳಲ್ಲಿ ಪಕ್ಷದ ಹೋರಾಟದ ಶೈಲಿಯನ್ನೇ ಬದಲಿಸಲು ‘ಕಠಿಣ ನಿರ್ಧಾರ’ ತೆಗೆದುಕೊಳ್ಳುವುದು ಅಗತ್ಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪ್ರತಿಪಾದಿಸಿದ್ದಾರೆ. </p><p>ಏಕತೆಯ ಕೊರತೆ, ಪರಸ್ಪರರ ವಿರುದ್ಧ ಹೇಳಿಕೆ ನೀಡುವುದು, ನಕಾರಾತ್ಮಕ ಅಥವಾ ನಿರಾಸೆಯಿಂದ ಮಾತನಾಡುವ ಬೆಳವಣಿಗೆಗಳನ್ನು ಉಲ್ಲೇಖಿಸಿದ ಖರ್ಗೆ ಅವರು, ‘ಪಕ್ಷಕ್ಕೆ ತನ್ನದೇ ಸಂಕಥನ ಇಲ್ಲದಿರುವುದು ಸಂಘಟನೆಗೆ ಪೆಟ್ಟು ನೀಡುತ್ತಿದೆ’ ಎಂದು ಹೇಳಿದರು.</p><p>ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಪಕ್ಷವು ಕೈಗೊಂಡ ನಿಲುವು ಮತ್ತು ಹೋರಾಟದ ಶೈಲಿಯನ್ನು ಸಮರ್ಥಿಸಿಕೊಂಡರು. ಕೆಲವರು ಪರಸ್ಪರರ ವಿರುದ್ಧ ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಇದರಿಂದ ಪಕ್ಷದ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ ಎಂದು ಹೇಳಿದರು.</p><p>ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಳಕೆ ಕುರಿತು ಪಕ್ಷದ ಟೀಕೆಗೂ ಆಕ್ಷೇಪಿಸಿದವರನ್ನು ಉದ್ದೇಶಿಸಿ, ‘ಇ.ವಿ.ಎಂಗಳ ಬಳಕೆಯಿಂದಾಗಿ ಚುನಾವಣಾ ಪ್ರಕ್ರಿಯೆಯನ್ನೇ ಶಂಕಿಸುವಂತೆ ಆಗಿದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಉತ್ತಮ ಸಾಧನೆಯ ಬಳಿಕ ಮಹಾರಾಷ್ಟ್ರದ ಫಲಿತಾಂಶದ ಸಮರ್ಥನೆಗೆ ಯಾವುದೇ ಅಂಕಗಣಿತ ಲೆಕ್ಕಾಚಾರದಿಂದ ಅಸಾಧ್ಯ’ ಎಂದರು.</p><p>‘ಲೋಕಸಭೆ ಚುನಾವಣೆಯ ಉತ್ತಮ ಫಲಿತಾಂಶದ ಬಳಿಕ ವಿಧಾನಸಭೆ ಚುನಾವಣೆಗಳಲ್ಲಿ ಹಿನ್ನಡೆ ಆಯಿತು. ಅದೇ ಕಾರಣಕ್ಕೆ ಈಗ ಕಠಿಣ ನಿರ್ಧಾರ ಅಗತ್ಯ. ರಾಜಕೀಯ ಪ್ರತಿಸ್ಪರ್ಧಿಗಳ ನಡೆಗಳನ್ನು ನಿತ್ಯ ಗಮನಿಸಬೇಕು ಸಕಾಲದಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ’ ಎಂದರು.</p><p>‘ಹರಿಯಾಣ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ನಲ್ಲಿ ಪಕ್ಷದ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಚುನಾವಣಾ ಫಲಿತಾಂಶದಿಂದ ಪಾಠ ಕಲಿತು ಲೋಪ, ದೌರ್ಬಲ್ಯಗಳನ್ನು ತಕ್ಷಣ ಸರಿಪಡಿಸಿಕೊಳ್ಳುವುದು ಈಗಿರುವ ಸವಾಲು’ ಎಂದು ಹೇಳಿದರು.</p><p>ಮುಖ್ಯವಾಗಿ ಒಗ್ಗಟ್ಟು ಇರಬೇಕು ಎಂದು ಪದೇ ಪದೇ ಹೇಳಲು ಬಯಸುತ್ತೇನೆ. ಒಗ್ಗಟ್ಟಿನಿಂದ ಎದುರಿಸದಿದ್ದರೆ, ಪರಸ್ಪರ ವಿರುದ್ಧದ ಹೇಳಿಕೆ ನಿಲ್ಲಿಸದಿದ್ದರೆ ರಾಜಕೀಯ ವಿರೋಧಿಗಳನ್ನು ಸೋಲಿಸುವುದಾದರೂ ಹೇಗೆ ಎಂದು ಖರ್ಗೆ ಪ್ರಶ್ನಿಸಿದರು.</p><p>ಪಕ್ಷದಲ್ಲಿ ಶಿಸ್ತಿನ ಅಸ್ತ್ರವಿದೆ. ಆದರೆ, ಅದನ್ನು ಪ್ರಯೋಗಿಸಲು ಬಯಸುವುದಿಲ್ಲ. ಪಕ್ಷದ ಒಟ್ಟು ಶಕ್ತಿಯಲ್ಲಿಯೇ ನಮ್ಮ ಶಕ್ತಿಯೂ ಇದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಖರ್ಗೆ ಅವರು ಪಕ್ಷದ ನಾಯಕರಿಗೆ ಕಟುವಾಗಿ ಹೇಳಿದರು. </p><p>‘ವಿಧಾನಸಭೆ ಚುನಾವಣೆಯಲ್ಲಿ ವಾತಾವರಣ ಪಕ್ಷದ ಪರವಾಗಿತ್ತು. ಆದರೆ, ಅದೊಂದೇ ಗೆಲುವಿನ ಖಾತರಿಯನ್ನು ನೀಡದು. ಸಕಾರಾತ್ಮಕ ವಾತಾವರಣವನ್ನು ಗೆಲುವಾಗಿ ಪರಿವರ್ತಿಸುವ ಕಲೆಯನ್ನು ನಾವು ಸಿದ್ಧಿಸಿಕೊಳ್ಳಬೇಕಾಗಿದೆ. ನಾವು ವಾತಾವರಣದ ಅನುಕೂಲ ಪಡೆಯಲು ಏಕೆ ಆಗುತ್ತಿಲ್ಲ ಎಂದು ಎಲ್ಲರೂ ಪ್ರಶ್ನಿಸಿಕೊಳ್ಳಬೇಕಾಗಿದೆ’ ಎಂದು ಕಿವಿಮಾತು ಹೇಳಿದರು. </p><p>ರಾಷ್ಟ್ರಮಟ್ಟದ ವಿಷಯಗಳು, ರಾಷ್ಟ್ರೀಯ ನಾಯಕರನ್ನೇ ನೆಚ್ಚಿಕೊಂಡು ಎಷ್ಟು ದಿನ ರಾಜ್ಯ ಚುನಾವಣೆಗಳನ್ನು ಎದುರಿಸುತ್ತೀರಿ ಎಂದು ಮುಖಂಡರಿಗೆ ಪ್ರಶ್ನಿಸಿದ ಅವರು, ‘ಯಾವುದೇ ಕಾರಣಕ್ಕೂ ಸ್ಥಳೀಯ ವಿಷಯಗಳನ್ನು ಕಡೆಗಣಿಸಬಾರದು’ ಎಂದು ಸಲಹೆ ಮಾಡಿದರು.</p>.<div><blockquote>ಕಾಂಗ್ರೆಸ್ ಪಕ್ಷ ಚುನಾವಣೆಗಳಲ್ಲಿ ಸೋತಿರಬಹುದು. ಆದರೆ ನಿರುದ್ಯೋಗ ಆರ್ಥಿಕ ಅಸಮಾನತೆ ಹಣದುಬ್ಬರ ‘ಜ್ವಲಂತ ಸಮಸ್ಯೆ’ಗಳು ಎಂದು ಮರೆಯಬಾರದು. ಜಾತಿಗಣತಿ ಕೂಡಾ ಮುಖ್ಯವಾದುದು </blockquote><span class="attribution">-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>