<figcaption>""</figcaption>.<p><strong>ನವದೆಹಲಿ</strong>: ಲಾಕ್ಡೌನ್ನಿಂದಾಗಿ ಕೆಲಸ ಬಿಟ್ಟು ಊರಿಗೆ ಮರಳಿದ ವಲಸೆ ಕಾರ್ಮಿಕರು ಈಗಲೂ ಸಂಕಷ್ಟದಲ್ಲಿದ್ದಾರೆ. ಇಂಥವರಲ್ಲಿ ಮೂರನೇ ಒಂದರಷ್ಟು ಮಂದಿ ಆಹಾರಧಾನ್ಯದ ಕೊರತೆ ಎದುರಿಸುತ್ತಿದ್ದರೆ, ಶೇ 63ರಷ್ಟು ಮಂದಿ ‘ನಮ್ಮ ಜೇಬಿನಲ್ಲಿ ₹100 ಕೂಡ ಉಳಿದಿಲ್ಲ’ ಎಂದು ಹೇಳಿದ್ದಾರೆ.</p>.<p>ಸ್ವಾನ್ (ಸ್ಟ್ರಾಂಡೆಡ್ ವರ್ಕರ್ಸ್ ಆ್ಯಕ್ಷನ್ ನೆಟ್ವರ್ಕ್) ಸಂಸ್ಥೆಯವರು ನಡೆಸಿದ ಮೂರನೇ ಸುತ್ತಿನ ಸಮೀಕ್ಷೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.</p>.<p>ತಮ್ಮ ಯಾತನೆಯನ್ನು ವಿವರಿಸಿ ವಲಸೆ ಕಾರ್ಮಿಕರಿಂದ ಬಂದಿರುವ 5,911 ಕರೆಗಳಲ್ಲಿ 821ನ್ನು ವಿಶ್ಲೇಷಣೆಗೆ ಒಳಪಡಿಸಿ ಮತ್ತು ಮೇ 15ರಿಂದ ಜೂನ್ 1ರೊಳಗಿನ ಅವಧಿಯಲ್ಲಿ 1,963 ಕಾರ್ಮಿಕರ ಜತೆ ಸಂವಾದ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ.</p>.<p>* ಬಹಳಷ್ಟು ವಲಸೆ ಕಾರ್ಮಿಕರು ಬಸ್ ಮತ್ತು ಶ್ರಮಿಕ ರೈಲುಗಳ ಮೂಲಕ ಊರಿಗೆ ಮರಳಿದ್ದಾರೆ. ಶೇ 11ರಷ್ಟು ಮಂದಿ ಟ್ರಕ್ ಅಥವಾ ಇತರ ವಾಹನಗಳ ಮೂಲಕ ಮತ್ತು ಶೇ 6ರಷ್ಟು ಮಂದಿ ಕಾಲ್ನಡಿಗೆಯಲ್ಲೇ ಹೋಗಿದ್ದಾರೆ.</p>.<p>* 68 ದಿನಗಳ ಲಾಕ್ಡೌನ್ನ ಮೊದಲ ಭಾಗದಲ್ಲಿ ವಲಸೆ ಕಾರ್ಮಿಕರು ಆಹಾರ, ಹಣ ಇಲ್ಲದೆ ಸಂಕಷ್ಟಪಟ್ಟರೆ ದ್ವಿತೀಯ ಭಾಗದಲ್ಲಿ ಊರಿಗೆ ಮರಳುವ ಯಾತ್ರೆಯ ಯಾತನೆ ಅನುಭವಿಸಿದ್ದರು.</p>.<p>* ಆರ್ಥಿಕ ಚಟುವಟಿಕೆಗಳು ಪುನಃ ಆರಂಭವಾಗಿರುವುದರಿಂದ ವಲಸಿಗರು ಊರಿಗೆ ಮರಳುತ್ತಿಲ್ಲ ಎಂಬ ಕಾರಣಕ್ಕೆ ಶ್ರಮಿಕ ರೈಲುಗಳನ್ನು ರದ್ದು ಮಾಡುವುದಾಗಿ ಸರ್ಕಾರ ಹೇಳಿದೆ. ಆದರೆ ಶೇ 55ರಷ್ಟು ಕಾರ್ಮಿಕರು ಈಗಲೂ ಊರಿಗೆ ಮರಳಲು ಉತ್ಸುಕರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ನವದೆಹಲಿ</strong>: ಲಾಕ್ಡೌನ್ನಿಂದಾಗಿ ಕೆಲಸ ಬಿಟ್ಟು ಊರಿಗೆ ಮರಳಿದ ವಲಸೆ ಕಾರ್ಮಿಕರು ಈಗಲೂ ಸಂಕಷ್ಟದಲ್ಲಿದ್ದಾರೆ. ಇಂಥವರಲ್ಲಿ ಮೂರನೇ ಒಂದರಷ್ಟು ಮಂದಿ ಆಹಾರಧಾನ್ಯದ ಕೊರತೆ ಎದುರಿಸುತ್ತಿದ್ದರೆ, ಶೇ 63ರಷ್ಟು ಮಂದಿ ‘ನಮ್ಮ ಜೇಬಿನಲ್ಲಿ ₹100 ಕೂಡ ಉಳಿದಿಲ್ಲ’ ಎಂದು ಹೇಳಿದ್ದಾರೆ.</p>.<p>ಸ್ವಾನ್ (ಸ್ಟ್ರಾಂಡೆಡ್ ವರ್ಕರ್ಸ್ ಆ್ಯಕ್ಷನ್ ನೆಟ್ವರ್ಕ್) ಸಂಸ್ಥೆಯವರು ನಡೆಸಿದ ಮೂರನೇ ಸುತ್ತಿನ ಸಮೀಕ್ಷೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.</p>.<p>ತಮ್ಮ ಯಾತನೆಯನ್ನು ವಿವರಿಸಿ ವಲಸೆ ಕಾರ್ಮಿಕರಿಂದ ಬಂದಿರುವ 5,911 ಕರೆಗಳಲ್ಲಿ 821ನ್ನು ವಿಶ್ಲೇಷಣೆಗೆ ಒಳಪಡಿಸಿ ಮತ್ತು ಮೇ 15ರಿಂದ ಜೂನ್ 1ರೊಳಗಿನ ಅವಧಿಯಲ್ಲಿ 1,963 ಕಾರ್ಮಿಕರ ಜತೆ ಸಂವಾದ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ.</p>.<p>* ಬಹಳಷ್ಟು ವಲಸೆ ಕಾರ್ಮಿಕರು ಬಸ್ ಮತ್ತು ಶ್ರಮಿಕ ರೈಲುಗಳ ಮೂಲಕ ಊರಿಗೆ ಮರಳಿದ್ದಾರೆ. ಶೇ 11ರಷ್ಟು ಮಂದಿ ಟ್ರಕ್ ಅಥವಾ ಇತರ ವಾಹನಗಳ ಮೂಲಕ ಮತ್ತು ಶೇ 6ರಷ್ಟು ಮಂದಿ ಕಾಲ್ನಡಿಗೆಯಲ್ಲೇ ಹೋಗಿದ್ದಾರೆ.</p>.<p>* 68 ದಿನಗಳ ಲಾಕ್ಡೌನ್ನ ಮೊದಲ ಭಾಗದಲ್ಲಿ ವಲಸೆ ಕಾರ್ಮಿಕರು ಆಹಾರ, ಹಣ ಇಲ್ಲದೆ ಸಂಕಷ್ಟಪಟ್ಟರೆ ದ್ವಿತೀಯ ಭಾಗದಲ್ಲಿ ಊರಿಗೆ ಮರಳುವ ಯಾತ್ರೆಯ ಯಾತನೆ ಅನುಭವಿಸಿದ್ದರು.</p>.<p>* ಆರ್ಥಿಕ ಚಟುವಟಿಕೆಗಳು ಪುನಃ ಆರಂಭವಾಗಿರುವುದರಿಂದ ವಲಸಿಗರು ಊರಿಗೆ ಮರಳುತ್ತಿಲ್ಲ ಎಂಬ ಕಾರಣಕ್ಕೆ ಶ್ರಮಿಕ ರೈಲುಗಳನ್ನು ರದ್ದು ಮಾಡುವುದಾಗಿ ಸರ್ಕಾರ ಹೇಳಿದೆ. ಆದರೆ ಶೇ 55ರಷ್ಟು ಕಾರ್ಮಿಕರು ಈಗಲೂ ಊರಿಗೆ ಮರಳಲು ಉತ್ಸುಕರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>