<p><strong>ಮೊರ್ಬಿ:</strong> 135 ಮಂದಿಯ ಸಾವಿಗೆ ಕಾರಣವಾದ ಗುಜರಾತ್ನ ಮೊರ್ಬಿ ಸೇತುವೆ ದುರಂತಕ್ಕೆ, ನವೀಕರಣಕ್ಕೆ ಗುತ್ತಿಗೆ ಪಡೆದಿದ್ದ ಒರೆವಾ ಕಂಪನಿಯ ಭ್ರಷ್ಟಾಚಾರವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.</p>.<p>ಸೇತುವೆಯ ಪುನಶ್ಚೇತನಕ್ಕೆಂದು ನೀಡಲಾಗಿದ್ದ ಎರಡು ಕೋಟಿ ರೂಪಾಯಿಯಲ್ಲಿ ಕೇವಲ 12 ಲಕ್ಷ ರೂಪಾಯಿ ಮಾತ್ರ ಖರ್ಚು ಮಾಡಿ, ಸೇತುವೆ ಸಿದ್ದವಾಗಿದೆ ಎಂದು ಕಂಪನಿಯು ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಿತ್ತು.</p>.<p>143 ವರ್ಷ ಪುರಾತನ ಸೇತುವೆಯ ದುರಸ್ತಿಗೆಂದು ಪಡೆದುಕೊಂಡಿದ್ದ ಹಣದಲ್ಲಿ ಶೇ 6 ರಷ್ಟು ಮಾತ್ರ ಖರ್ಚು ಮಾಡಿ ಕಳಪೆ ಕಾಮಗಾರಿ ಮಾಡಿತ್ತು. ಕಂಪನಿಯ ಬೇಜವಾಬ್ದಾರಿಗೆ 135 ಮಂದಿ ಬಲಿಯಾಗಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/gujarat-morbi-municipalitys-chief-officer-suspended-days-after-bridge-collapse-incident-985724.html" itemprop="url">ಗುಜರಾತ್: ಮೊರ್ಬಿ ತೂಗು ಸೇತುವೆ ದುರಂತ, ಪುರಸಭೆ ಮುಖ್ಯಾಧಿಕಾರಿ ಅಮಾನತು</a></p>.<p>ಸೇತುವೆಯ ಪುನಶ್ಚೇತನ ಹಾಗೂ 15 ವರ್ಷಗಳ ನಿರ್ವಹಣೆಗೆ ಒರೆವಾ ಗ್ರೂಪ್ ಮೊರ್ಬಿ ನಗರ ಪಾಲಿಕೆ ಜತೆಗೆ ಕಳೆದ ಮಾರ್ಚ್ನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಸೇತುವೆಯನ್ನು ಪುನಶ್ಚೇತನಗೊಳಿಸಿದ್ದ ಕಂಪನಿಯು ಸುರಕ್ಷತಾ ಪರೀಕ್ಷೆ ನಡೆಸದೇ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಿತ್ತು.</p>.<p>ಸೇತುವೆ ಪುನಶ್ಚೇತನದ ಗುತ್ತಿಗೆ ಪಡೆದಿದ್ದ ಒರೆವಾ ಗ್ರೂಪ್, ಕಾಮಗಾರಿ ನಡೆಸಲು ಇನ್ನೊಂದು ಕಂಪನಿಗೆ ಹೊರಗುತ್ತಿಗೆ ನೀಡಿತ್ತು. ಶತಮಾನಗಳಷ್ಟು ಹಳೆಯದಾದ ಸೇತುವೆಯನ್ನು ಗಟ್ಟಿಗೊಳಿಸಲು ಬೇಕಾದಷ್ಟು ಕೆಲಸಗಳನ್ನು ಆ ಕಂಪನಿಯು ಮಾಡಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.</p>.<p>ಗಡಿಯಾರ ತಯಾರಿಸುವುದರಲ್ಲಿ ಅನುಭವ ಇರುವ ಒರೆವಾ ಗ್ರೂಪ್ಗೆ ಇಂತಹ ಕಾಮಗಾರಿ ಮಾಡುವುದರಲ್ಲಿ ಯಾವುದೇ ಅನುಭವ ಇರಲಿಲ್ಲ. ಹೀಗಾಗಿ ದೇವ್ ಪ್ರಕಾಶ್ಸೊಲ್ಯೂಷನ್ ಎನ್ನುವ ಧಾರಗಾದ್ರ ಮೂಲಕ ಕಂಪನಿಗೆ ಹೊರ ಗುತ್ತಿಗೆ ನೀಡಿತ್ತು. ಆದರೆ ಹೊರ ಗುತ್ತಿಗೆ ಪಡೆದುಕೊಂಡ ಕಂಪನಿಗೂ ಈ ಸೇತುವೆ ದುರಸ್ತಿ ಬಗ್ಗೆ ತಾಂತ್ರಿಕ ಮಾಹಿತಿ ಇರಲಿಲ್ಲ ಎನ್ನುವುದು ಈವರೆಗೆ ಆಗಿರುವ ತನಿಖೆಯಿಂದ ಗೊತ್ತಾದ ಮಾಹಿತಿ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/morbi-bridge-collapse-mallikarjun-kharge-slams-pm-by-asking-is-this-negligence-too-an-act-of-god-985377.html" itemprop="url">ಮೊರ್ಬಿ ದುರಂತ: ಇಂತಹ ನಿರ್ಲಕ್ಷ್ಯವೂ ಭಗವಂತನ ಆಟವೇ? ಖರ್ಗೆ ಪ್ರಶ್ನೆ</a></p>.<p>ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಜಾರಿಯಲ್ಲಿದ್ದು, ತನಿಖಾ ಸಂಸ್ಥೆಗಳು ದೇವ್ ಪ್ರಕಾಶ್ ಸೊಲ್ಯೂಷನ್ ಕಂಪನಿಯಿಂದ ಕಾಮಗಾರಿಗೆ ಸಂಬಂಧಿಸಿದ ಹಣಕಾಸು ದಾಖಲೆಗಳನ್ನು ಜಪ್ತಿ ಮಾಡಿವೆ.</p>.<p>ಮೊರ್ಬಿ ತೂಗುಸೇತುವೆಯ ಕೇಬಲ್ಗಳು ತುಕ್ಕು ಹಿಡಿದಿದ್ದರೂ ಅವುಗಳನ್ನು ಬದಲಾಯಿಸದೇ, ಅವುಗಳಿಗೆ ಬಣ್ಣ ಬಳಿಯಲಾಗಿತ್ತು. ಸೇತುವೆಯನ್ನು ಗಟ್ಟಿ ಮಾಡದೇ ಮೇಲ್ನೋಟಕ್ಕೆ ಮಾತ್ರ ಸುಂದರಗೊಳಿಸಲಾಗಿತ್ತು ಎಂದು ಮಾಹಿತಿ ಲಭಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊರ್ಬಿ:</strong> 135 ಮಂದಿಯ ಸಾವಿಗೆ ಕಾರಣವಾದ ಗುಜರಾತ್ನ ಮೊರ್ಬಿ ಸೇತುವೆ ದುರಂತಕ್ಕೆ, ನವೀಕರಣಕ್ಕೆ ಗುತ್ತಿಗೆ ಪಡೆದಿದ್ದ ಒರೆವಾ ಕಂಪನಿಯ ಭ್ರಷ್ಟಾಚಾರವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.</p>.<p>ಸೇತುವೆಯ ಪುನಶ್ಚೇತನಕ್ಕೆಂದು ನೀಡಲಾಗಿದ್ದ ಎರಡು ಕೋಟಿ ರೂಪಾಯಿಯಲ್ಲಿ ಕೇವಲ 12 ಲಕ್ಷ ರೂಪಾಯಿ ಮಾತ್ರ ಖರ್ಚು ಮಾಡಿ, ಸೇತುವೆ ಸಿದ್ದವಾಗಿದೆ ಎಂದು ಕಂಪನಿಯು ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಿತ್ತು.</p>.<p>143 ವರ್ಷ ಪುರಾತನ ಸೇತುವೆಯ ದುರಸ್ತಿಗೆಂದು ಪಡೆದುಕೊಂಡಿದ್ದ ಹಣದಲ್ಲಿ ಶೇ 6 ರಷ್ಟು ಮಾತ್ರ ಖರ್ಚು ಮಾಡಿ ಕಳಪೆ ಕಾಮಗಾರಿ ಮಾಡಿತ್ತು. ಕಂಪನಿಯ ಬೇಜವಾಬ್ದಾರಿಗೆ 135 ಮಂದಿ ಬಲಿಯಾಗಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/gujarat-morbi-municipalitys-chief-officer-suspended-days-after-bridge-collapse-incident-985724.html" itemprop="url">ಗುಜರಾತ್: ಮೊರ್ಬಿ ತೂಗು ಸೇತುವೆ ದುರಂತ, ಪುರಸಭೆ ಮುಖ್ಯಾಧಿಕಾರಿ ಅಮಾನತು</a></p>.<p>ಸೇತುವೆಯ ಪುನಶ್ಚೇತನ ಹಾಗೂ 15 ವರ್ಷಗಳ ನಿರ್ವಹಣೆಗೆ ಒರೆವಾ ಗ್ರೂಪ್ ಮೊರ್ಬಿ ನಗರ ಪಾಲಿಕೆ ಜತೆಗೆ ಕಳೆದ ಮಾರ್ಚ್ನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಸೇತುವೆಯನ್ನು ಪುನಶ್ಚೇತನಗೊಳಿಸಿದ್ದ ಕಂಪನಿಯು ಸುರಕ್ಷತಾ ಪರೀಕ್ಷೆ ನಡೆಸದೇ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಿತ್ತು.</p>.<p>ಸೇತುವೆ ಪುನಶ್ಚೇತನದ ಗುತ್ತಿಗೆ ಪಡೆದಿದ್ದ ಒರೆವಾ ಗ್ರೂಪ್, ಕಾಮಗಾರಿ ನಡೆಸಲು ಇನ್ನೊಂದು ಕಂಪನಿಗೆ ಹೊರಗುತ್ತಿಗೆ ನೀಡಿತ್ತು. ಶತಮಾನಗಳಷ್ಟು ಹಳೆಯದಾದ ಸೇತುವೆಯನ್ನು ಗಟ್ಟಿಗೊಳಿಸಲು ಬೇಕಾದಷ್ಟು ಕೆಲಸಗಳನ್ನು ಆ ಕಂಪನಿಯು ಮಾಡಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.</p>.<p>ಗಡಿಯಾರ ತಯಾರಿಸುವುದರಲ್ಲಿ ಅನುಭವ ಇರುವ ಒರೆವಾ ಗ್ರೂಪ್ಗೆ ಇಂತಹ ಕಾಮಗಾರಿ ಮಾಡುವುದರಲ್ಲಿ ಯಾವುದೇ ಅನುಭವ ಇರಲಿಲ್ಲ. ಹೀಗಾಗಿ ದೇವ್ ಪ್ರಕಾಶ್ಸೊಲ್ಯೂಷನ್ ಎನ್ನುವ ಧಾರಗಾದ್ರ ಮೂಲಕ ಕಂಪನಿಗೆ ಹೊರ ಗುತ್ತಿಗೆ ನೀಡಿತ್ತು. ಆದರೆ ಹೊರ ಗುತ್ತಿಗೆ ಪಡೆದುಕೊಂಡ ಕಂಪನಿಗೂ ಈ ಸೇತುವೆ ದುರಸ್ತಿ ಬಗ್ಗೆ ತಾಂತ್ರಿಕ ಮಾಹಿತಿ ಇರಲಿಲ್ಲ ಎನ್ನುವುದು ಈವರೆಗೆ ಆಗಿರುವ ತನಿಖೆಯಿಂದ ಗೊತ್ತಾದ ಮಾಹಿತಿ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/morbi-bridge-collapse-mallikarjun-kharge-slams-pm-by-asking-is-this-negligence-too-an-act-of-god-985377.html" itemprop="url">ಮೊರ್ಬಿ ದುರಂತ: ಇಂತಹ ನಿರ್ಲಕ್ಷ್ಯವೂ ಭಗವಂತನ ಆಟವೇ? ಖರ್ಗೆ ಪ್ರಶ್ನೆ</a></p>.<p>ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಜಾರಿಯಲ್ಲಿದ್ದು, ತನಿಖಾ ಸಂಸ್ಥೆಗಳು ದೇವ್ ಪ್ರಕಾಶ್ ಸೊಲ್ಯೂಷನ್ ಕಂಪನಿಯಿಂದ ಕಾಮಗಾರಿಗೆ ಸಂಬಂಧಿಸಿದ ಹಣಕಾಸು ದಾಖಲೆಗಳನ್ನು ಜಪ್ತಿ ಮಾಡಿವೆ.</p>.<p>ಮೊರ್ಬಿ ತೂಗುಸೇತುವೆಯ ಕೇಬಲ್ಗಳು ತುಕ್ಕು ಹಿಡಿದಿದ್ದರೂ ಅವುಗಳನ್ನು ಬದಲಾಯಿಸದೇ, ಅವುಗಳಿಗೆ ಬಣ್ಣ ಬಳಿಯಲಾಗಿತ್ತು. ಸೇತುವೆಯನ್ನು ಗಟ್ಟಿ ಮಾಡದೇ ಮೇಲ್ನೋಟಕ್ಕೆ ಮಾತ್ರ ಸುಂದರಗೊಳಿಸಲಾಗಿತ್ತು ಎಂದು ಮಾಹಿತಿ ಲಭಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>