<p><strong>ಶ್ರೀನಗರ:</strong> ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿದ ಘಟನೆ ಬೆನ್ನಲ್ಲೇ, ಪಾಕಿಸ್ತಾನ ಪ್ರಜೆಗಳನ್ನು ಗಡೀಪಾರು ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ಬಿಸಿ ಶೌರ್ಯ ಚಕ್ರ ಗೌರವಕ್ಕೆ ಪಾತ್ರರಾಗಿದ್ದ ಸೈನಿಕರೊಬ್ಬರ ತಾಯಿಗೂ ತಟ್ಟಿದೆ.</p>.<p>ಹುತಾತ್ಮ ಪೊಲೀಸ್ ಕಾನ್ಸ್ಸ್ಟೆಬಲ್ ಮುದಸಿರ್ ಅಹ್ಮದ್ ಶೇಖ್ ಅವರ ತಾಯಿ ಶಮೀಮಾ ಅಖ್ತರ್ ಅವರನ್ನು ಜಮ್ಮು–ಕಾಶ್ಮೀರ ಸರ್ಕಾರ ಗಡೀಪಾರು ಮಾಡಲಿದೆ. ದೇಶದಿಂದ ಹೊರಹಾಕಲು ಸರ್ಕಾರ ಗುರುತಿಸಿರುವ 60 ಜನರಲ್ಲಿ ಶಮೀಮಾ ಅವರೂ ಸೇರಿದ್ದಾರೆ.</p>.<p>ಉಗ್ರರೊಂದಿಗೆ ಹೋರಾಡುವ ವೇಳೆ, 2022ರ ಮೇನಲ್ಲಿ ಮುದಸಿರ್ ಶೇಖ್ ಅವರು ಹುತಾತ್ಮರಾಗಿದ್ದರು. ಬಾರಾಮುಲ್ಲಾ ನಗರದ ಚೌಕವೊಂದಕ್ಕೆ ‘ಶಹೀದ್ ಮುದಸಿರ್ ಚೌಕ್’ ಎಂದು ನಾಮಕರಣ ಮಾಡಲಾಗಿದೆ.</p>.<p>ಮುದಸಿರ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಘೋಷಿಸಲಾಗಿತ್ತು. 2023ರ ಮೇನಲ್ಲಿ ಶಮೀಮಾ– ಮೊಹಮ್ಮದ್ ಮಕ್ಸೂದ್ ದಂಪತಿ ಈ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದ್ದರು.</p>.<p>ಮೊಹಮ್ಮದ್ ಮಕ್ಸೂದ್ ಅವರನ್ನು 1990ರಲ್ಲಿ ಶಮೀಮಾ ಮದುವೆಯಾಗಿದ್ದರು. ಮಕ್ಸೂದ್ ಅವರು ನಿವೃತ್ತ ಪೊಲೀಸ್ ಅಧಿಕಾರಿ.</p>.<p>‘ಶಮೀಮಾ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ(ಪಿಒಕೆ) ಸೇರಿದವರು. ಪಿಒಕೆ ಕೂಡ ಭಾರತದ ಪ್ರದೇಶವಾಗಿದೆ. ಪಾಕಿಸ್ತಾನ ಪ್ರಜೆಗಳನ್ನು ಮಾತ್ರ ಗಡೀಪಾರು ಮಾಡಬೇಕಿತ್ತು’ ಎಂದು ಶಮೀಮಾ ಅವರ ಸಂಬಂಧಿ ಮೊಹಮ್ಮದ್ ಯೂನುಸ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಉಗ್ರರೊಂದಿಗಿನ ಹೋರಾಟದಲ್ಲಿ ಮುದಸಿರ್ ಹುತಾತ್ಮನಾದ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮುದಸಿರ್ ಮನೆಗೆ ಭೇಟಿ ನೀಡಿದ್ದರು’ ಎಂದೂ ಯೂನುಸ್ ಹೇಳಿದರು. </p>.<p>‘ಇಲ್ಲಿಗೆ ಬಂದಾಗ ಶಮೀಮಾ 20 ವರ್ಷದವಳಿದ್ದಳು. ಕಳೆದ 45 ವರ್ಷಗಳಿಂದ ಆಕೆ ಇಲ್ಲಿ ವಾಸವಿದ್ದಾಳೆ. ಆಕೆಯನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇನೆ’ ಎಂದರು.</p>.<p>‘ಪಂಜಾಬ್ನ ವಿವಿಧ ಜಿಲ್ಲೆಗಳಲ್ಲಿ ವಾಸವಾಗಿರುವ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ, ಅವರನ್ನು ವಾಘಾ ಗಡಿಗೆ ಕರೆದೊಯ್ದು, ಪಾಕಿಸ್ತಾನ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ:</strong> ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿದ ಘಟನೆ ಬೆನ್ನಲ್ಲೇ, ಪಾಕಿಸ್ತಾನ ಪ್ರಜೆಗಳನ್ನು ಗಡೀಪಾರು ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ಬಿಸಿ ಶೌರ್ಯ ಚಕ್ರ ಗೌರವಕ್ಕೆ ಪಾತ್ರರಾಗಿದ್ದ ಸೈನಿಕರೊಬ್ಬರ ತಾಯಿಗೂ ತಟ್ಟಿದೆ.</p>.<p>ಹುತಾತ್ಮ ಪೊಲೀಸ್ ಕಾನ್ಸ್ಸ್ಟೆಬಲ್ ಮುದಸಿರ್ ಅಹ್ಮದ್ ಶೇಖ್ ಅವರ ತಾಯಿ ಶಮೀಮಾ ಅಖ್ತರ್ ಅವರನ್ನು ಜಮ್ಮು–ಕಾಶ್ಮೀರ ಸರ್ಕಾರ ಗಡೀಪಾರು ಮಾಡಲಿದೆ. ದೇಶದಿಂದ ಹೊರಹಾಕಲು ಸರ್ಕಾರ ಗುರುತಿಸಿರುವ 60 ಜನರಲ್ಲಿ ಶಮೀಮಾ ಅವರೂ ಸೇರಿದ್ದಾರೆ.</p>.<p>ಉಗ್ರರೊಂದಿಗೆ ಹೋರಾಡುವ ವೇಳೆ, 2022ರ ಮೇನಲ್ಲಿ ಮುದಸಿರ್ ಶೇಖ್ ಅವರು ಹುತಾತ್ಮರಾಗಿದ್ದರು. ಬಾರಾಮುಲ್ಲಾ ನಗರದ ಚೌಕವೊಂದಕ್ಕೆ ‘ಶಹೀದ್ ಮುದಸಿರ್ ಚೌಕ್’ ಎಂದು ನಾಮಕರಣ ಮಾಡಲಾಗಿದೆ.</p>.<p>ಮುದಸಿರ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಘೋಷಿಸಲಾಗಿತ್ತು. 2023ರ ಮೇನಲ್ಲಿ ಶಮೀಮಾ– ಮೊಹಮ್ಮದ್ ಮಕ್ಸೂದ್ ದಂಪತಿ ಈ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದ್ದರು.</p>.<p>ಮೊಹಮ್ಮದ್ ಮಕ್ಸೂದ್ ಅವರನ್ನು 1990ರಲ್ಲಿ ಶಮೀಮಾ ಮದುವೆಯಾಗಿದ್ದರು. ಮಕ್ಸೂದ್ ಅವರು ನಿವೃತ್ತ ಪೊಲೀಸ್ ಅಧಿಕಾರಿ.</p>.<p>‘ಶಮೀಮಾ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ(ಪಿಒಕೆ) ಸೇರಿದವರು. ಪಿಒಕೆ ಕೂಡ ಭಾರತದ ಪ್ರದೇಶವಾಗಿದೆ. ಪಾಕಿಸ್ತಾನ ಪ್ರಜೆಗಳನ್ನು ಮಾತ್ರ ಗಡೀಪಾರು ಮಾಡಬೇಕಿತ್ತು’ ಎಂದು ಶಮೀಮಾ ಅವರ ಸಂಬಂಧಿ ಮೊಹಮ್ಮದ್ ಯೂನುಸ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಉಗ್ರರೊಂದಿಗಿನ ಹೋರಾಟದಲ್ಲಿ ಮುದಸಿರ್ ಹುತಾತ್ಮನಾದ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮುದಸಿರ್ ಮನೆಗೆ ಭೇಟಿ ನೀಡಿದ್ದರು’ ಎಂದೂ ಯೂನುಸ್ ಹೇಳಿದರು. </p>.<p>‘ಇಲ್ಲಿಗೆ ಬಂದಾಗ ಶಮೀಮಾ 20 ವರ್ಷದವಳಿದ್ದಳು. ಕಳೆದ 45 ವರ್ಷಗಳಿಂದ ಆಕೆ ಇಲ್ಲಿ ವಾಸವಿದ್ದಾಳೆ. ಆಕೆಯನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇನೆ’ ಎಂದರು.</p>.<p>‘ಪಂಜಾಬ್ನ ವಿವಿಧ ಜಿಲ್ಲೆಗಳಲ್ಲಿ ವಾಸವಾಗಿರುವ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ, ಅವರನ್ನು ವಾಘಾ ಗಡಿಗೆ ಕರೆದೊಯ್ದು, ಪಾಕಿಸ್ತಾನ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>