<p><strong>ಮುಂಬೈ</strong>: ಇಲ್ಲಿನ ಕಿಂಗ್ಸ್ ವೃತ್ತದಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಜಿಎಸ್ಬಿ ಸೇವಾ ಮಂಡಲ ಪ್ರತಿಷ್ಠಾಪಿಸಿರುವ ಗಣಪತಿಯು ದೇಶದ ‘ಶ್ರೀಮಂತ ಗಣೇಶ ಮೂರ್ತಿ’ ಎನಿಸಿಕೊಂಡಿದೆ. ಈ ಗಣೇಶ ಮೂರ್ತಿಗೆ ನ್ಯೂ ಇಂಡಿಯಾ ಇನ್ಯೂರೆನ್ಸ್ ಕಂಪನಿಯಿಂದ ₹474.46 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ. </p> <p>‘2024ರಲ್ಲಿ ಪ್ರತಿಷ್ಠಾಪಿಸಲಾದ ಗಣೇಶಮೂರ್ತಿಗೆ ₹400.58 ಕೋಟಿ ಮೊತ್ತದ ವಿಮೆ ಮಾಡಿಸಲಾಗಿತ್ತು. ಈ ಬಾರಿ ಈ ಮೊತ್ತ ₹73.88 ಕೋಟಿಯಷ್ಟು ಹೆಚ್ಚಿದೆ’ ಎಂದು ಜಿಎಸ್ಬಿ ಸೇವಾ ಮಂಡಲದ ಅಧ್ಯಕ್ಷ ಅಮಿತ್ ಡಿ.ಪೈ ತಿಳಿಸಿದ್ದಾರೆ. ಆದರೆ, ₹474.46 ಕೋಟಿ ಮೊತ್ತದ ವಿಮೆಗೆ ಜಿಎಸ್ಬಿ ಸೇವಾ ಮಂಡಲ ಪಾವತಿಸಿರುವ ವಿಮಾ ಕಂತು ಎಷ್ಟು ಎನ್ನುವುದನ್ನು ಪದಾಧಿಕಾರಿಗಳು ಬಹಿರಂಗಪಡಿಸಿಲ್ಲ. </p> <p>ಗಣೇಶ ಮೂರ್ತಿ ಅಲಂಕಾರಕ್ಕೆ ಭಕ್ತರು ಸೇವಾ ರೂಪದಲ್ಲಿ ನೀಡುವ 69 ಕೆ.ಜಿಯಷ್ಟು ಚಿನ್ನಾಭರಣ ಮತ್ತು 336 ಕೆ.ಜಿಯಷ್ಟು ಬೆಳ್ಳಿಯ ಆಭರಣಗಳನ್ನು ಬಳಸಲಾಗುತ್ತದೆ. ಈ ಆಭರಣಗಳಿಗೆ ಹಾನಿಯಾನಿದರೆ, ಕಳುವಾದರೆ, ನಷ್ಟವಾದರೆ ₹67.03 ಕೋಟಿ ವಿಮಾ ಪರಿಹಾರ ಸಿಗಲಿದೆ. ವೇದಿಕೆಯಲ್ಲಿ ಅಗ್ನಿ ಅವಘಡ ಸಂಭವಿಸಿದರೆ ₹2 ಕೋಟಿಯಷ್ಟು ಪರಿಹಾರ ಸಿಗಲಿದೆ. ಭೂಕಂಪದಿಂದ ವೇದಿಕೆ, ಮೂರ್ತಿ ಅಲಂಕಾರಕ್ಕೆ ಬಳಸಿರುವ ಹೂವು, ಹಣ್ಣು, ತರಕಾರಿ ಇತರೆ ವಸ್ತುಗಳು, ಪೀಠೋಪಕರಣ, ಕಂಪ್ಯೂಟರ್, ಸಿ.ಸಿ.ಟಿ.ವಿ ಕ್ಯಾಮೆರಾ, ಕ್ಯೂಆರ್ ಕೋಡ್ ಸ್ಕ್ಯಾನರ್ ಯಂತ್ರ ಸೇರಿದಂತೆ ಇತರೆ ಹಾನಿಯಾದರೆ ವಿಶೇಷ ಪರಿಹಾರ ಲಭಿಸಲಿದೆ. </p> <p>ಗಣೇಶೋತ್ಸವ ನಡೆಯುವ ಮೈದಾನ, ಪೆಂಡಾಲ್, ದರ್ಶನಕ್ಕೆ ಬರುವ ಭಕ್ತರಿಗಾಗಿ ₹30 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ. ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವರು, ಭದ್ರತಾ ಸಿಬ್ಬಂದಿ, ಅಡುಗೆ ಕೆಲಸದವರು, ವಾಹನ ನಿಲುಗಡೆ ನಿರ್ವಹಣೆಗಾರರು, ಪಾದರಕ್ಷೆ ಅಂಗಡಿಯವರು ಕೂಡ ವಿಮಾ ವ್ಯಾಪ್ತಿಗೆ ಬರಲಿದ್ದು, ಅಪಘಾತವಾದರೆ, ಜೀವ ಹಾನಿಯಾದರೆ ಇವರಿಗಾಗಿ ₹375 ಕೋಟಿ ಮೊತ್ತದ ವಿಮಾ ಪರಿಹಾರ ಲಭಿಸಲಿದೆ. ವೇದಿಕೆ, ಪೆಂಡಾಲ್ ಹೊರಗೆ ಅಗ್ನಿ ಅವಘಡ ಸಂಭವಿಸಿದರೂ ₹43 ಲಕ್ಷದ ವಿಮಾ ಪರಿಹಾರ ಲಭಿಸಲಿದೆ. </p> <p>ಜಿಎಸ್ಬಿ ಗಣೇಶೋತ್ಸವದಲ್ಲಿ ದಿನದ 24 ಗಂಟೆಯೂ ಪೂಜೆ, ಅರ್ಜನೆ, ಸೇವೆ, ಅನ್ನದಾನ ನಡೆಯುತ್ತದೆ. ಈ ಗಣೇಶ ಮೂರ್ತಿಯು ‘ನೌಸಾಲಾ ಪೌನಾರಾ ವಿಶ್ವಾಚರಾಜ’ (ಹರಕೆ ಪೂರೈಸುವ ವಿಶ್ವದ ರಾಜ) ಎಂದೇ ಹೆಸರುವಾಸಿ. ಗಣೇಶೋತ್ಸವದ ಅಂಗವಾಗಿ ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಮಿತ್ ಡಿ.ಪೈ ಹೇಳಿದರು.</p> <p>ದರ್ಶನಕ್ಕೆ ಆ.25ರ ರಾತ್ರಿ 8 ಗಂಟೆಯಿಂದ ಅವಕಾಶ ಕಲ್ಪಿಸಲಾಗಿದೆ. ಗಣೇಶೋತ್ಸವ ಆ.27ರಿಂದ 31ರವರೆಗೆ ನಡೆಯಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಇಲ್ಲಿನ ಕಿಂಗ್ಸ್ ವೃತ್ತದಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಜಿಎಸ್ಬಿ ಸೇವಾ ಮಂಡಲ ಪ್ರತಿಷ್ಠಾಪಿಸಿರುವ ಗಣಪತಿಯು ದೇಶದ ‘ಶ್ರೀಮಂತ ಗಣೇಶ ಮೂರ್ತಿ’ ಎನಿಸಿಕೊಂಡಿದೆ. ಈ ಗಣೇಶ ಮೂರ್ತಿಗೆ ನ್ಯೂ ಇಂಡಿಯಾ ಇನ್ಯೂರೆನ್ಸ್ ಕಂಪನಿಯಿಂದ ₹474.46 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ. </p> <p>‘2024ರಲ್ಲಿ ಪ್ರತಿಷ್ಠಾಪಿಸಲಾದ ಗಣೇಶಮೂರ್ತಿಗೆ ₹400.58 ಕೋಟಿ ಮೊತ್ತದ ವಿಮೆ ಮಾಡಿಸಲಾಗಿತ್ತು. ಈ ಬಾರಿ ಈ ಮೊತ್ತ ₹73.88 ಕೋಟಿಯಷ್ಟು ಹೆಚ್ಚಿದೆ’ ಎಂದು ಜಿಎಸ್ಬಿ ಸೇವಾ ಮಂಡಲದ ಅಧ್ಯಕ್ಷ ಅಮಿತ್ ಡಿ.ಪೈ ತಿಳಿಸಿದ್ದಾರೆ. ಆದರೆ, ₹474.46 ಕೋಟಿ ಮೊತ್ತದ ವಿಮೆಗೆ ಜಿಎಸ್ಬಿ ಸೇವಾ ಮಂಡಲ ಪಾವತಿಸಿರುವ ವಿಮಾ ಕಂತು ಎಷ್ಟು ಎನ್ನುವುದನ್ನು ಪದಾಧಿಕಾರಿಗಳು ಬಹಿರಂಗಪಡಿಸಿಲ್ಲ. </p> <p>ಗಣೇಶ ಮೂರ್ತಿ ಅಲಂಕಾರಕ್ಕೆ ಭಕ್ತರು ಸೇವಾ ರೂಪದಲ್ಲಿ ನೀಡುವ 69 ಕೆ.ಜಿಯಷ್ಟು ಚಿನ್ನಾಭರಣ ಮತ್ತು 336 ಕೆ.ಜಿಯಷ್ಟು ಬೆಳ್ಳಿಯ ಆಭರಣಗಳನ್ನು ಬಳಸಲಾಗುತ್ತದೆ. ಈ ಆಭರಣಗಳಿಗೆ ಹಾನಿಯಾನಿದರೆ, ಕಳುವಾದರೆ, ನಷ್ಟವಾದರೆ ₹67.03 ಕೋಟಿ ವಿಮಾ ಪರಿಹಾರ ಸಿಗಲಿದೆ. ವೇದಿಕೆಯಲ್ಲಿ ಅಗ್ನಿ ಅವಘಡ ಸಂಭವಿಸಿದರೆ ₹2 ಕೋಟಿಯಷ್ಟು ಪರಿಹಾರ ಸಿಗಲಿದೆ. ಭೂಕಂಪದಿಂದ ವೇದಿಕೆ, ಮೂರ್ತಿ ಅಲಂಕಾರಕ್ಕೆ ಬಳಸಿರುವ ಹೂವು, ಹಣ್ಣು, ತರಕಾರಿ ಇತರೆ ವಸ್ತುಗಳು, ಪೀಠೋಪಕರಣ, ಕಂಪ್ಯೂಟರ್, ಸಿ.ಸಿ.ಟಿ.ವಿ ಕ್ಯಾಮೆರಾ, ಕ್ಯೂಆರ್ ಕೋಡ್ ಸ್ಕ್ಯಾನರ್ ಯಂತ್ರ ಸೇರಿದಂತೆ ಇತರೆ ಹಾನಿಯಾದರೆ ವಿಶೇಷ ಪರಿಹಾರ ಲಭಿಸಲಿದೆ. </p> <p>ಗಣೇಶೋತ್ಸವ ನಡೆಯುವ ಮೈದಾನ, ಪೆಂಡಾಲ್, ದರ್ಶನಕ್ಕೆ ಬರುವ ಭಕ್ತರಿಗಾಗಿ ₹30 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ. ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವರು, ಭದ್ರತಾ ಸಿಬ್ಬಂದಿ, ಅಡುಗೆ ಕೆಲಸದವರು, ವಾಹನ ನಿಲುಗಡೆ ನಿರ್ವಹಣೆಗಾರರು, ಪಾದರಕ್ಷೆ ಅಂಗಡಿಯವರು ಕೂಡ ವಿಮಾ ವ್ಯಾಪ್ತಿಗೆ ಬರಲಿದ್ದು, ಅಪಘಾತವಾದರೆ, ಜೀವ ಹಾನಿಯಾದರೆ ಇವರಿಗಾಗಿ ₹375 ಕೋಟಿ ಮೊತ್ತದ ವಿಮಾ ಪರಿಹಾರ ಲಭಿಸಲಿದೆ. ವೇದಿಕೆ, ಪೆಂಡಾಲ್ ಹೊರಗೆ ಅಗ್ನಿ ಅವಘಡ ಸಂಭವಿಸಿದರೂ ₹43 ಲಕ್ಷದ ವಿಮಾ ಪರಿಹಾರ ಲಭಿಸಲಿದೆ. </p> <p>ಜಿಎಸ್ಬಿ ಗಣೇಶೋತ್ಸವದಲ್ಲಿ ದಿನದ 24 ಗಂಟೆಯೂ ಪೂಜೆ, ಅರ್ಜನೆ, ಸೇವೆ, ಅನ್ನದಾನ ನಡೆಯುತ್ತದೆ. ಈ ಗಣೇಶ ಮೂರ್ತಿಯು ‘ನೌಸಾಲಾ ಪೌನಾರಾ ವಿಶ್ವಾಚರಾಜ’ (ಹರಕೆ ಪೂರೈಸುವ ವಿಶ್ವದ ರಾಜ) ಎಂದೇ ಹೆಸರುವಾಸಿ. ಗಣೇಶೋತ್ಸವದ ಅಂಗವಾಗಿ ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಮಿತ್ ಡಿ.ಪೈ ಹೇಳಿದರು.</p> <p>ದರ್ಶನಕ್ಕೆ ಆ.25ರ ರಾತ್ರಿ 8 ಗಂಟೆಯಿಂದ ಅವಕಾಶ ಕಲ್ಪಿಸಲಾಗಿದೆ. ಗಣೇಶೋತ್ಸವ ಆ.27ರಿಂದ 31ರವರೆಗೆ ನಡೆಯಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>