<p><strong>ಬಹರಾಇಚ್:</strong> ಕೋಮುಗಲಭೆ, ಸಂಘರ್ಷ, ದಾಳಿ ಘಟನೆಗಳಿಂದಲೇ ಸುದ್ದಿಗೆ ಗ್ರಾಸವಾಗುತ್ತಿದ್ದ ಉತ್ತರ ಪ್ರದೇಶದ ನೆಲದಿಂದ ಈಗ ಕೋಮುಸೌಹಾರ್ದದ ಸುದ್ದಿ ಹೊರಬಿದ್ದಿದೆ.</p>.<p>ಅವರು ಮುಸ್ಲಿಂ. 18 ವರ್ಷಗಳಿಂದ ಹಿಂದೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದಾರೆ. ದೇಗುಲದ ಆಸ್ತಿ ರಕ್ಷಿಸುವ ಕಾಯಕ ಕೈಗೊಂಡಿದ್ದಾರೆ. ಸೌಹಾರ್ದಕ್ಕೆ ಉದಾಹರಣೆ ಆಗಿದ್ದಾರೆ.</p>.<p>ಅವರ ಹೆಸರು ಮೊಹಮ್ಮದ್ ಅಲಿ. ಜಿಲ್ಲಾ ಕೇಂದ್ರದಿಂದ 27 ಕಿ.ಮೀ. ದೂರದ ಜೈತಂಪುರ್ ಬಜಾರ್ನಲ್ಲಿ ಇರುವ ವೃದ್ಧಿ ಮಾತೇಶ್ವರಿಮಠ ಗುರುದೇವಿ ದೇವಸ್ಥಾನದ ಆಡಳಿತ ಮಂಡಳಿಗೆ ಇವರೇ ಅಧ್ಯಕ್ಷರು. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಮುಸ್ಲಿಮರೂ ದೇಗುಲವನ್ನು ಪೂಜ್ಯ ಭಾವದಿಂದ ನೋಡುತ್ತಾರೆ. </p>.<p>58 ವರ್ಷದ ವಯಸ್ಸಿನ ಅಲಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ರೋಜಾ (ರಂಜಾನ್ ಮಾಸದ ಉಪವಾಸ) ಪಾಲಿಸುತ್ತಾರೆ. ಜೊತೆಗೆ ಗುರುದೇವಿ ಮಾತೆ ಮತ್ತು ಹನುಮಂತನನ್ನೂ ಆರಾಧಿಸುತ್ತಾರೆ.</p>.<p>‘ನನಗಾಗ ಏಳು ವರ್ಷ. ಲ್ಯುಕೋಡರ್ಮಾ (ಚರ್ಮದ) ಕಾಯಿಲೆ ಇತ್ತು. ಕಣ್ಣುಗಳು ಬಿಳಿ ಬಣ್ಣಕ್ಕೆ ತಿರುಗಿದ್ದವು. ಚಿಕಿತ್ಸೆ ಫಲ ನೀಡಿರಲಿಲ್ಲ. ನನ್ನ ತಾಯಿ ಆಗ ನನ್ನನ್ನು ಈ ದೇವಸ್ಥಾನಕ್ಕೆ ಕರೆತಂದಿದ್ದರು’ ಎಂದು ಅಲಿ ದೇಗುಲಕ್ಕೆ ತಮ್ಮ ಮೊದಲ ಭೇಟಿಯನ್ನು ಸ್ಮರಿಸುತ್ತಾರೆ.</p>.<p>‘ದೇಗುಲದಲ್ಲಿ ಪಡೆದಿದ್ದ ತೀರ್ಥವನ್ನು ತಾಯಿ ಮೈಗೆ ಲೇಪಿಸಿದ್ದರು. ಆ ನಂತರದ ದಿನಗಳಲ್ಲಿ ಗುಣಮುಖ ಆಗಿದ್ದೆ. ಇದು, ದೇವಸ್ಥಾನದ ಜೊತೆಗೆ ಶಾಶ್ವತ ಸಂಬಂಧ ಬೆಳೆಸಿತು. 2007ರಿಂದಲೂ ಈ ದೇಗುಲದ ಸೇವೆಯಲ್ಲಿ ನಾನು ಸಕ್ರಿಯನಾಗಿದ್ದೇನೆ’ ಎಂದು ತಿಳಿಸಿದರು.</p>.<p>ಅಲಿ ನಾಯಕತ್ವದಲ್ಲಿ ದೇಗುಲ ಪ್ರಗತಿ ಕಂಡಿದೆ. ನಿಧಿ, ದೇಣಿಗೆ ಸಂಗ್ರಹ ಏರಿದೆ. ‘ದೇಗುಲದ ಅಭಿವೃದ್ಧಿಗಾಗಿ ಈ ವರ್ಷ ₹2.7 ಲಕ್ಷ ಸಂಗ್ರಹವಾಗಿದೆ. ಸರ್ಕಾರ ಮತ್ತು ಸಾರ್ವಜನಿಕರ ನೆರವಿನ ₹30.40 ಲಕ್ಷ ಬಳಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ’ ಎಂದು ಅಲಿ ಸುದ್ದಿಸಂಸ್ಥೆಗೆ ತಿಳಿಸಿದರು. </p>.<p>ಹಿಂದೂಗಳಷ್ಟೇ ಅಲ್ಲದೆ, ಅನೇಕ ಮುಸ್ಲಿಂ ಮಹಿಳೆಯರು ಇಲ್ಲಿಗೆ ಭೇಟಿ ನೀಡುತ್ತಾರೆ. ದೇಗುಲ ಸೌಹಾರ್ದದ ಸಂಕೇತವಾಗಿ ಉಳಿದಿದೆ. ‘ಈ ದೇಗುಲವು ಧಾರ್ಮಿಕ ಪ್ರವಾಸೋದ್ಯಮದ ಭಾಗವಾಗಿದೆ’ ಎಂದು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಶ್ರೀವಾತ್ಸವ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಹರಾಇಚ್:</strong> ಕೋಮುಗಲಭೆ, ಸಂಘರ್ಷ, ದಾಳಿ ಘಟನೆಗಳಿಂದಲೇ ಸುದ್ದಿಗೆ ಗ್ರಾಸವಾಗುತ್ತಿದ್ದ ಉತ್ತರ ಪ್ರದೇಶದ ನೆಲದಿಂದ ಈಗ ಕೋಮುಸೌಹಾರ್ದದ ಸುದ್ದಿ ಹೊರಬಿದ್ದಿದೆ.</p>.<p>ಅವರು ಮುಸ್ಲಿಂ. 18 ವರ್ಷಗಳಿಂದ ಹಿಂದೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದಾರೆ. ದೇಗುಲದ ಆಸ್ತಿ ರಕ್ಷಿಸುವ ಕಾಯಕ ಕೈಗೊಂಡಿದ್ದಾರೆ. ಸೌಹಾರ್ದಕ್ಕೆ ಉದಾಹರಣೆ ಆಗಿದ್ದಾರೆ.</p>.<p>ಅವರ ಹೆಸರು ಮೊಹಮ್ಮದ್ ಅಲಿ. ಜಿಲ್ಲಾ ಕೇಂದ್ರದಿಂದ 27 ಕಿ.ಮೀ. ದೂರದ ಜೈತಂಪುರ್ ಬಜಾರ್ನಲ್ಲಿ ಇರುವ ವೃದ್ಧಿ ಮಾತೇಶ್ವರಿಮಠ ಗುರುದೇವಿ ದೇವಸ್ಥಾನದ ಆಡಳಿತ ಮಂಡಳಿಗೆ ಇವರೇ ಅಧ್ಯಕ್ಷರು. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಮುಸ್ಲಿಮರೂ ದೇಗುಲವನ್ನು ಪೂಜ್ಯ ಭಾವದಿಂದ ನೋಡುತ್ತಾರೆ. </p>.<p>58 ವರ್ಷದ ವಯಸ್ಸಿನ ಅಲಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ರೋಜಾ (ರಂಜಾನ್ ಮಾಸದ ಉಪವಾಸ) ಪಾಲಿಸುತ್ತಾರೆ. ಜೊತೆಗೆ ಗುರುದೇವಿ ಮಾತೆ ಮತ್ತು ಹನುಮಂತನನ್ನೂ ಆರಾಧಿಸುತ್ತಾರೆ.</p>.<p>‘ನನಗಾಗ ಏಳು ವರ್ಷ. ಲ್ಯುಕೋಡರ್ಮಾ (ಚರ್ಮದ) ಕಾಯಿಲೆ ಇತ್ತು. ಕಣ್ಣುಗಳು ಬಿಳಿ ಬಣ್ಣಕ್ಕೆ ತಿರುಗಿದ್ದವು. ಚಿಕಿತ್ಸೆ ಫಲ ನೀಡಿರಲಿಲ್ಲ. ನನ್ನ ತಾಯಿ ಆಗ ನನ್ನನ್ನು ಈ ದೇವಸ್ಥಾನಕ್ಕೆ ಕರೆತಂದಿದ್ದರು’ ಎಂದು ಅಲಿ ದೇಗುಲಕ್ಕೆ ತಮ್ಮ ಮೊದಲ ಭೇಟಿಯನ್ನು ಸ್ಮರಿಸುತ್ತಾರೆ.</p>.<p>‘ದೇಗುಲದಲ್ಲಿ ಪಡೆದಿದ್ದ ತೀರ್ಥವನ್ನು ತಾಯಿ ಮೈಗೆ ಲೇಪಿಸಿದ್ದರು. ಆ ನಂತರದ ದಿನಗಳಲ್ಲಿ ಗುಣಮುಖ ಆಗಿದ್ದೆ. ಇದು, ದೇವಸ್ಥಾನದ ಜೊತೆಗೆ ಶಾಶ್ವತ ಸಂಬಂಧ ಬೆಳೆಸಿತು. 2007ರಿಂದಲೂ ಈ ದೇಗುಲದ ಸೇವೆಯಲ್ಲಿ ನಾನು ಸಕ್ರಿಯನಾಗಿದ್ದೇನೆ’ ಎಂದು ತಿಳಿಸಿದರು.</p>.<p>ಅಲಿ ನಾಯಕತ್ವದಲ್ಲಿ ದೇಗುಲ ಪ್ರಗತಿ ಕಂಡಿದೆ. ನಿಧಿ, ದೇಣಿಗೆ ಸಂಗ್ರಹ ಏರಿದೆ. ‘ದೇಗುಲದ ಅಭಿವೃದ್ಧಿಗಾಗಿ ಈ ವರ್ಷ ₹2.7 ಲಕ್ಷ ಸಂಗ್ರಹವಾಗಿದೆ. ಸರ್ಕಾರ ಮತ್ತು ಸಾರ್ವಜನಿಕರ ನೆರವಿನ ₹30.40 ಲಕ್ಷ ಬಳಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ’ ಎಂದು ಅಲಿ ಸುದ್ದಿಸಂಸ್ಥೆಗೆ ತಿಳಿಸಿದರು. </p>.<p>ಹಿಂದೂಗಳಷ್ಟೇ ಅಲ್ಲದೆ, ಅನೇಕ ಮುಸ್ಲಿಂ ಮಹಿಳೆಯರು ಇಲ್ಲಿಗೆ ಭೇಟಿ ನೀಡುತ್ತಾರೆ. ದೇಗುಲ ಸೌಹಾರ್ದದ ಸಂಕೇತವಾಗಿ ಉಳಿದಿದೆ. ‘ಈ ದೇಗುಲವು ಧಾರ್ಮಿಕ ಪ್ರವಾಸೋದ್ಯಮದ ಭಾಗವಾಗಿದೆ’ ಎಂದು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಶ್ರೀವಾತ್ಸವ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>