<p><strong>ಲಖನೌ</strong>: ನಿರ್ಗಮನದ ಹಾದಿಯಲ್ಲಿರುವವರ ಮಾತಿಗಳಿಗೆ ನಾವೇಕೆ ತಲೆಕೆಡಿಸಿಕೊಳ್ಳಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಿರುಗೇಟು ನೀಡಿದ್ದಾರೆ.</p><p>ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಖಿಲೇಶ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿ ಸರ್ಕಾರವು ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.</p>.ಫಡಣವೀಸ್ 100 ಜನ್ಮ ಎತ್ತಿದರೂ ಪವಾರ್ ಮನಸ್ಸು ಅರ್ಥಮಾಡಿಕೊಳ್ಳಲಾಗದು: ರಾವುತ್.ರೈಲು ಹಳಿ ಮೇಲೆ ಸಿಲಿಂಡರ್ ಎಸೆದ ಕಿಡಿಗೇಡಿಗಳು: ತಪ್ಪಿದ ಅನಾಹುತ. <p>‘ಆದಿತ್ಯನಾಥ್ ಅವರ ಮಾತುಗಳಿಗೆ ಅವರ ಪಕ್ಷದವರೇ ಕಿವಿಕೊಡದಿದ್ದಾಗ, ನಿರ್ಗಮನದ ಹಾದಿಯಲ್ಲಿರುವವರ ಮಾತಿಗಳಿಗೆ ನಾವೇಕೆ ಚಿಂತಿಸಬೇಕು’ ಎಂದು ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.</p><p>‘ಯಾವ ಕಾರಣದಿಂದ ಐಪಿಎಸ್ ಅಧಿಕಾರಿಗಳು ತಿಂಗಳುಗಟ್ಟಲೆ ತಲೆಮರೆಸಿಕೊಂಡಿದ್ದಾರೆ. ದಿನಕ್ಕೆ ₹15 ಲಕ್ಷ ಗಳಿಸುವ ಪೊಲೀಸ್ ಠಾಣೆಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಬಿಜೆಪಿ ಸದಸ್ಯರೇ ಈ ಲೂಟಿಯಲ್ಲಿ ಭಾಗಿಯಾಗಿದ್ದಾರೆ. ಇಂತಹ ಚುವಟಿಕೆಗಳಿಗೆ ಬುಲ್ಡೋಜರ್ ಕ್ರಮ ಎಂದು ಹೆಸರಿಸಲಾಗಿದೆ’ ಎಂದು ಯಾದವ್ ಆರೋಪಿಸಿದ್ದಾರೆ.</p>.ನೈಜೀರಿಯಾ | ಟ್ರಕ್ಗೆ ಡಿಕ್ಕಿ ಹೊಡೆದ ಪೆಟ್ರೋಲ್ ಟ್ಯಾಂಕರ್: 48 ಮಂದಿ ಸಾವು.ಉತ್ಪಾದನಾ ವಲಯದಲ್ಲಿ ಚೀನಾ ಆಧಿಪತ್ಯ, ಭಾರತ–ಅಮೆರಿಕದಲ್ಲಿ ನಿರುದ್ಯೋಗ: ರಾಹುಲ್. <p>‘ಅಧಿಕಾರವನ್ನು ಕುಟುಂಬದ ಆಸ್ತಿ ಎಂದು ಪರಿಗಣಿಸಿರುವ ಯಾದವ್ ಅವರು, ಅಧಿಕಾರಕ್ಕೆ ಮತ್ತೆ ಹಿಂದಿರುಗುದಿಲ್ಲ ಎಂದು ಅರಿತುಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಅರಾಜಕತೆ ಸೃಷ್ಷಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ’ ಎಂದು ಯಾದವ್ ವಿರುದ್ಧ ಯೋಗಿ ವಾಗ್ದಾಳಿ ನಡೆಸಿದ್ದಾರೆ.</p>.ಉತ್ತರ ಪ್ರದೇಶ | 24 ಗಂಟೆಗಳಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ 9 ಮಂದಿ ಸಾವು.ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇನ್ಮುಂದೆ ರಾತ್ರಿಯೂ ‘ಅನ್ನದಾಸೋಹ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ನಿರ್ಗಮನದ ಹಾದಿಯಲ್ಲಿರುವವರ ಮಾತಿಗಳಿಗೆ ನಾವೇಕೆ ತಲೆಕೆಡಿಸಿಕೊಳ್ಳಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಿರುಗೇಟು ನೀಡಿದ್ದಾರೆ.</p><p>ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಖಿಲೇಶ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿ ಸರ್ಕಾರವು ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.</p>.ಫಡಣವೀಸ್ 100 ಜನ್ಮ ಎತ್ತಿದರೂ ಪವಾರ್ ಮನಸ್ಸು ಅರ್ಥಮಾಡಿಕೊಳ್ಳಲಾಗದು: ರಾವುತ್.ರೈಲು ಹಳಿ ಮೇಲೆ ಸಿಲಿಂಡರ್ ಎಸೆದ ಕಿಡಿಗೇಡಿಗಳು: ತಪ್ಪಿದ ಅನಾಹುತ. <p>‘ಆದಿತ್ಯನಾಥ್ ಅವರ ಮಾತುಗಳಿಗೆ ಅವರ ಪಕ್ಷದವರೇ ಕಿವಿಕೊಡದಿದ್ದಾಗ, ನಿರ್ಗಮನದ ಹಾದಿಯಲ್ಲಿರುವವರ ಮಾತಿಗಳಿಗೆ ನಾವೇಕೆ ಚಿಂತಿಸಬೇಕು’ ಎಂದು ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.</p><p>‘ಯಾವ ಕಾರಣದಿಂದ ಐಪಿಎಸ್ ಅಧಿಕಾರಿಗಳು ತಿಂಗಳುಗಟ್ಟಲೆ ತಲೆಮರೆಸಿಕೊಂಡಿದ್ದಾರೆ. ದಿನಕ್ಕೆ ₹15 ಲಕ್ಷ ಗಳಿಸುವ ಪೊಲೀಸ್ ಠಾಣೆಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಬಿಜೆಪಿ ಸದಸ್ಯರೇ ಈ ಲೂಟಿಯಲ್ಲಿ ಭಾಗಿಯಾಗಿದ್ದಾರೆ. ಇಂತಹ ಚುವಟಿಕೆಗಳಿಗೆ ಬುಲ್ಡೋಜರ್ ಕ್ರಮ ಎಂದು ಹೆಸರಿಸಲಾಗಿದೆ’ ಎಂದು ಯಾದವ್ ಆರೋಪಿಸಿದ್ದಾರೆ.</p>.ನೈಜೀರಿಯಾ | ಟ್ರಕ್ಗೆ ಡಿಕ್ಕಿ ಹೊಡೆದ ಪೆಟ್ರೋಲ್ ಟ್ಯಾಂಕರ್: 48 ಮಂದಿ ಸಾವು.ಉತ್ಪಾದನಾ ವಲಯದಲ್ಲಿ ಚೀನಾ ಆಧಿಪತ್ಯ, ಭಾರತ–ಅಮೆರಿಕದಲ್ಲಿ ನಿರುದ್ಯೋಗ: ರಾಹುಲ್. <p>‘ಅಧಿಕಾರವನ್ನು ಕುಟುಂಬದ ಆಸ್ತಿ ಎಂದು ಪರಿಗಣಿಸಿರುವ ಯಾದವ್ ಅವರು, ಅಧಿಕಾರಕ್ಕೆ ಮತ್ತೆ ಹಿಂದಿರುಗುದಿಲ್ಲ ಎಂದು ಅರಿತುಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಅರಾಜಕತೆ ಸೃಷ್ಷಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ’ ಎಂದು ಯಾದವ್ ವಿರುದ್ಧ ಯೋಗಿ ವಾಗ್ದಾಳಿ ನಡೆಸಿದ್ದಾರೆ.</p>.ಉತ್ತರ ಪ್ರದೇಶ | 24 ಗಂಟೆಗಳಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ 9 ಮಂದಿ ಸಾವು.ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇನ್ಮುಂದೆ ರಾತ್ರಿಯೂ ‘ಅನ್ನದಾಸೋಹ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>