<p><strong>ಭುವನೇಶ್ವರ (ಪಿಟಿಐ):</strong> ಪುರಿಯಲ್ಲಿ ರಥಯಾತ್ರೆ ವೇಳೆ ನಡೆದ ಕಾಲ್ತುಳಿತ ಪ್ರಕರಣದ ವಿಚಾರಣೆಯನ್ನು 30 ದಿನಗಳ ಒಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಾಲ್ಕು ಸದಸ್ಯರ ತಂಡವೊಂದನ್ನು ಒಡಿಶಾ ಸರ್ಕಾರ ಬುಧವಾರ ರಚಿಸಿದೆ.</p>.<p>ಅಭಿವೃದ್ಧಿ ಆಯುಕ್ತರಾದ ಅನು ಗರ್ಗ್ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ತಂಡವು ಅವರಿಗೆ ವಿಚಾರಣೆ ತ್ವರಿತಗೊಳಿಸಲು ಸಹಾಯ ಮಾಡಲಿದೆ. ಒಡಿಶಾ ಆಡಳಿತ ಸೇವಾ (ಒಎಎಸ್) ಅಧಿಕಾರಿಗಳಾದ ಮಾನಸ್ ರಂಜನ್ ಸಾಮಲ್, ವಿನಯ ಕುಮಾರ್ ದಾಶ್, ರಶ್ಮೀ ರಂಜನ್ ನಾಯಕ್ ಹಾಗೂ ಪ್ರದೀಪ್ ಕುಮಾರ್ ಸಾಹು ಅವರು ತಂಡದಲ್ಲಿದ್ದಾರೆ. </p>.<p class="title">ಜೂನ್ 29ರಂದು ರಥಯಾತ್ರೆ ವೇಳೆ ನಡೆದ ಕಾಲ್ತುಳಿತದಲ್ಲಿ 3 ಮಂದಿ ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದರು. ಅನು ಅವರು ಸೋಮವಾರ ತನಿಖೆ ಆರಂಭಿಸಿದ್ದು, ಶೀಘ್ರವೇ ಕಾಲ್ತುಳಿತಕ್ಕೆ ಕಾರಣವಾದವರನ್ನು ಪತ್ತೆಹಚ್ಚುವುದಾಗಿ ಭರವಸೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ (ಪಿಟಿಐ):</strong> ಪುರಿಯಲ್ಲಿ ರಥಯಾತ್ರೆ ವೇಳೆ ನಡೆದ ಕಾಲ್ತುಳಿತ ಪ್ರಕರಣದ ವಿಚಾರಣೆಯನ್ನು 30 ದಿನಗಳ ಒಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಾಲ್ಕು ಸದಸ್ಯರ ತಂಡವೊಂದನ್ನು ಒಡಿಶಾ ಸರ್ಕಾರ ಬುಧವಾರ ರಚಿಸಿದೆ.</p>.<p>ಅಭಿವೃದ್ಧಿ ಆಯುಕ್ತರಾದ ಅನು ಗರ್ಗ್ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ತಂಡವು ಅವರಿಗೆ ವಿಚಾರಣೆ ತ್ವರಿತಗೊಳಿಸಲು ಸಹಾಯ ಮಾಡಲಿದೆ. ಒಡಿಶಾ ಆಡಳಿತ ಸೇವಾ (ಒಎಎಸ್) ಅಧಿಕಾರಿಗಳಾದ ಮಾನಸ್ ರಂಜನ್ ಸಾಮಲ್, ವಿನಯ ಕುಮಾರ್ ದಾಶ್, ರಶ್ಮೀ ರಂಜನ್ ನಾಯಕ್ ಹಾಗೂ ಪ್ರದೀಪ್ ಕುಮಾರ್ ಸಾಹು ಅವರು ತಂಡದಲ್ಲಿದ್ದಾರೆ. </p>.<p class="title">ಜೂನ್ 29ರಂದು ರಥಯಾತ್ರೆ ವೇಳೆ ನಡೆದ ಕಾಲ್ತುಳಿತದಲ್ಲಿ 3 ಮಂದಿ ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದರು. ಅನು ಅವರು ಸೋಮವಾರ ತನಿಖೆ ಆರಂಭಿಸಿದ್ದು, ಶೀಘ್ರವೇ ಕಾಲ್ತುಳಿತಕ್ಕೆ ಕಾರಣವಾದವರನ್ನು ಪತ್ತೆಹಚ್ಚುವುದಾಗಿ ಭರವಸೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>