ಎರಡನೆಯದಾಗಿ, ಸಿಎಎ ಜಾರಿಯಾಗಿ ನಾಲ್ಕು ವರ್ಷಗಳ ನಂತರ, ಚುನಾವಣೆ ಸಮಯದಲ್ಲಿ ನಿಯಮಗಳ ಬಗ್ಗೆ ಅಧಿಸೂಚನೆ ಹೊರಡಿಸಿರುವುದು ಯಾಕೆ? ಎಂದು ಪ್ರಶ್ನಿಸುವ ಮೂಲಕ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಮೂರನೇಯದಾಗಿ, ಬಿಜೆಪಿಯು ಧ್ರುವೀಕರಣ ಮತ್ತು ವಿಭಜನೆ ರಾಜಕೀಯ ಮಾಡುತ್ತಿದೆ. ಸಿಎಎ ಜಾರಿಯಿಂದ ಸಂವಿಧಾನ ಸ್ವರೂಪಕ್ಕೆ ಧಕ್ಕೆಯಾಗಲಿದೆ. ಹಾಗೂ ಸಿಎಎ ಬಗ್ಗೆ ರಾಜ್ಯ ಸರ್ಕಾರಗಳಿಗೆ ಯಾವುದೇ ಅಧಿಕಾರ ನೀಡಿಲ್ಲ ಎಂದು ಬೃಂದಾ ಕಾರಟ್ ವಿರೋಧ ವ್ಯಕ್ತಪಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆಗೆ ಸಂಸತ್ತು 2019ರ ಡಿಸೆಂಬರ್ 11ರಂದು ಅಂಗೀಕಾರ ನೀಡಿತ್ತು. ಅದಕ್ಕೆ ರಾಷ್ಟ್ರಪತಿಯವರು ಮಾರನೆಯ ದಿನವೇ ಅಂಕಿತ ಹಾಕಿದ್ದರು. 2020ರ ಜನವರಿ 10ರಂದು ಕಾಯ್ದೆಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು.