ಉತ್ತರ ಪ್ರದೇಶದಲ್ಲಿ ಸ್ಪರ್ಧಿಸುವುದಾಗಿ ಓವೈಸಿ ಹೇಳಿದ್ದು, ಎನ್ಆರ್ಸಿ ಹಾಗೂ ಸಿಎಎ ರದ್ದುಗೊಳಿಸಲು ಒತ್ತಾಯಿಸಿದ್ದಾರೆ. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಠಕ್, 'ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದುಪಕ್ಷಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ. ಅವರು (ಓವೈಸಿ) ರಾಷ್ಟ್ರೀಯ ಪಕ್ಷವಾಗಿಸಲು ಯತ್ನಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲು ಅವರನ್ನು ಸ್ವಾಗಿಸುತ್ತೇನೆ. ಅವರು ಮತಾಂಧತೆಯನ್ನು ಯುಪಿಯಲ್ಲೂ ಹರಡಿ ಮತ್ತೊಬ್ಬ ಜಿನ್ನಾ ಆಗಲು ಯತ್ನಿಸುತ್ತಿದ್ದಾರೆ. ದೇಶ ವಿಭಜನೆಯ ಏಕೈಕ ಅಜೆಂಡಾವನ್ನು ಹೊಂದಿದ್ದಾರೆ. ಆದರೆ ಅವರ ಅಜೆಂಡಾವನ್ನು ನಿರ್ನಾಮ ಮಾಡುವುದು ನಮ್ಮ ಗುರಿಯಾಗಿದೆ' ಎಂದು ಹೇಳಿದರು.