<p><strong>ಶ್ರೀನಗರ</strong>: ಪಹಲ್ಗಾಮ್ ದಾಳಿಯ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿರುವ ರಾಷ್ಟ್ರೀಯ ತನಿಖಾ ಏಜೆನ್ಸಿಯು (ಎನ್ಐಎ), ಜಮ್ಮು ಜೈಲಿನಲ್ಲಿ ಇರುವ ಇಬ್ಬರು ಉಗ್ರರ ವಿಚಾರಣೆ ನಡೆಸಿದೆ. ಮುಷ್ತಾಕ್ ಮತ್ತು ನಿಸಾರ್ ಎಂಬ ಇಬ್ಬರು ಉಗ್ರರನ್ನು 2023ರಲ್ಲಿ ರಜೌರಿಯಲ್ಲಿ ನಡೆದ ದಾಳಿಯ ಸಂಬಂಧ ಬಂಧಿಸಲಾಗಿದೆ.</p><p>ಇಬ್ಬರು ಉಗ್ರರು 2023ರ ಏಪ್ರಿಲ್ನಿಂದ ಜೈಲಿನಲ್ಲಿ ಇದ್ದಾರೆ. ರಜೌರಿ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಏಳು ಮಂದಿ ನಾಗರಿಕರು ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು. ದಾಳಿಯ ಮಾರನೆಯ ದಿನ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿತ್ತು.</p><p>26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯನ್ನು ಎನ್ಐಎ ನಡೆಸುತ್ತಿದೆ. ಪಹಲ್ಗಾಮ್ ದಾಳಿಯ ಬಗ್ಗೆ ಮುಷ್ತಾಕ್ ಮತ್ತು ನಿಸಾರ್ಗೆ ಮೊದಲೇ ಗೊತ್ತಿತ್ತು ಅಥವಾ ಆ ದಾಳಿಯ ಯೋಜನೆ ರೂಪಿಸಲು ಅವರಿಬ್ಬರು ನೆರವು ಒದಗಿಸಿದ್ದಾರೆ ಎಂದು ತನಿಖಾಧಿಕಾರಿ ಗಳು ನಂಬಿದ್ದಾರೆ. ದಾಳಿಯ ಹಿಂದಿನ ಭಯೋತ್ಪಾದಕರ ಜಾಲವನ್ನು ಪತ್ತೆಮಾಡುವ ಪ್ರಯತ್ನದ ಭಾಗವಾಗಿ ಇಬ್ಬರನ್ನೂ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಗೊತ್ತಾಗಿದೆ.</p><p>ತನಿಖೆಯ ಭಾಗವಾಗಿ ಎನ್ಐಎ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಸೂಕ್ಷ್ಮ ವಲಯ ಎಂದು ಗುರುತಿಸ ಲಾಗಿರುವ ಕೆಲವು ಗಡಿ ಪ್ರದೇಶಗಳ ಮೇಲೆಯೂ ಕಣ್ಣಿರಿಸಿದ್ದಾರೆ. ಆ ಪ್ರದೇಶಗಳ ಮೂಲಕ ಭಯೋತ್ಪಾದಕರು ಒಳನುಸುಳುತ್ತಿರಬಹುದು, ಅಲ್ಲಿ ಶಂಕಿತ ಭಯೋತ್ಪಾದಕರ ಅಡಗುದಾಣಗಳು ಇವೆ ಎನ್ನಲಾಗಿದೆ.</p><p>ಪಹಲ್ಗಾಮ್ ದಾಳಿಕೋರರಿಗೆ ನೆರವು ಒದಗಿಸಿದ ಆರೋಪದ ಅಡಿಯಲ್ಲಿ ಅಂದಾಜು 20 ಮಂದಿಯನ್ನು ವಿಚಾರಣೆಗೆ ಗುರಿಪಡಿಸಲಾಗಿದೆ.</p><p>ಕಠಿಣ ಕಾನೂನಾಗಿರುವ ‘ಸಾರ್ವಜನಿಕ ಸುರಕ್ಷತಾ ಕಾಯ್ದೆ’ಯ ಅಡಿಯಲ್ಲಿ 100ಕ್ಕೂ ಹೆಚ್ಚು ಮಂದಿ ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಾಯ್ದೆಯ ಅಡಿಯಲ್ಲಿ ಶಂಕಿತರನ್ನು ವಿಚಾರಣೆ ಇಲ್ಲದೆ ಗರಿಷ್ಠ ಎರಡು ವರ್ಷಗಳವರೆಗೆ ವಶದಲ್ಲಿ ಇರಿಸಿಕೊಳ್ಳಲು ಅವಕಾಶ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ಪಹಲ್ಗಾಮ್ ದಾಳಿಯ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿರುವ ರಾಷ್ಟ್ರೀಯ ತನಿಖಾ ಏಜೆನ್ಸಿಯು (ಎನ್ಐಎ), ಜಮ್ಮು ಜೈಲಿನಲ್ಲಿ ಇರುವ ಇಬ್ಬರು ಉಗ್ರರ ವಿಚಾರಣೆ ನಡೆಸಿದೆ. ಮುಷ್ತಾಕ್ ಮತ್ತು ನಿಸಾರ್ ಎಂಬ ಇಬ್ಬರು ಉಗ್ರರನ್ನು 2023ರಲ್ಲಿ ರಜೌರಿಯಲ್ಲಿ ನಡೆದ ದಾಳಿಯ ಸಂಬಂಧ ಬಂಧಿಸಲಾಗಿದೆ.</p><p>ಇಬ್ಬರು ಉಗ್ರರು 2023ರ ಏಪ್ರಿಲ್ನಿಂದ ಜೈಲಿನಲ್ಲಿ ಇದ್ದಾರೆ. ರಜೌರಿ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಏಳು ಮಂದಿ ನಾಗರಿಕರು ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು. ದಾಳಿಯ ಮಾರನೆಯ ದಿನ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿತ್ತು.</p><p>26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯನ್ನು ಎನ್ಐಎ ನಡೆಸುತ್ತಿದೆ. ಪಹಲ್ಗಾಮ್ ದಾಳಿಯ ಬಗ್ಗೆ ಮುಷ್ತಾಕ್ ಮತ್ತು ನಿಸಾರ್ಗೆ ಮೊದಲೇ ಗೊತ್ತಿತ್ತು ಅಥವಾ ಆ ದಾಳಿಯ ಯೋಜನೆ ರೂಪಿಸಲು ಅವರಿಬ್ಬರು ನೆರವು ಒದಗಿಸಿದ್ದಾರೆ ಎಂದು ತನಿಖಾಧಿಕಾರಿ ಗಳು ನಂಬಿದ್ದಾರೆ. ದಾಳಿಯ ಹಿಂದಿನ ಭಯೋತ್ಪಾದಕರ ಜಾಲವನ್ನು ಪತ್ತೆಮಾಡುವ ಪ್ರಯತ್ನದ ಭಾಗವಾಗಿ ಇಬ್ಬರನ್ನೂ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಗೊತ್ತಾಗಿದೆ.</p><p>ತನಿಖೆಯ ಭಾಗವಾಗಿ ಎನ್ಐಎ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಸೂಕ್ಷ್ಮ ವಲಯ ಎಂದು ಗುರುತಿಸ ಲಾಗಿರುವ ಕೆಲವು ಗಡಿ ಪ್ರದೇಶಗಳ ಮೇಲೆಯೂ ಕಣ್ಣಿರಿಸಿದ್ದಾರೆ. ಆ ಪ್ರದೇಶಗಳ ಮೂಲಕ ಭಯೋತ್ಪಾದಕರು ಒಳನುಸುಳುತ್ತಿರಬಹುದು, ಅಲ್ಲಿ ಶಂಕಿತ ಭಯೋತ್ಪಾದಕರ ಅಡಗುದಾಣಗಳು ಇವೆ ಎನ್ನಲಾಗಿದೆ.</p><p>ಪಹಲ್ಗಾಮ್ ದಾಳಿಕೋರರಿಗೆ ನೆರವು ಒದಗಿಸಿದ ಆರೋಪದ ಅಡಿಯಲ್ಲಿ ಅಂದಾಜು 20 ಮಂದಿಯನ್ನು ವಿಚಾರಣೆಗೆ ಗುರಿಪಡಿಸಲಾಗಿದೆ.</p><p>ಕಠಿಣ ಕಾನೂನಾಗಿರುವ ‘ಸಾರ್ವಜನಿಕ ಸುರಕ್ಷತಾ ಕಾಯ್ದೆ’ಯ ಅಡಿಯಲ್ಲಿ 100ಕ್ಕೂ ಹೆಚ್ಚು ಮಂದಿ ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಾಯ್ದೆಯ ಅಡಿಯಲ್ಲಿ ಶಂಕಿತರನ್ನು ವಿಚಾರಣೆ ಇಲ್ಲದೆ ಗರಿಷ್ಠ ಎರಡು ವರ್ಷಗಳವರೆಗೆ ವಶದಲ್ಲಿ ಇರಿಸಿಕೊಳ್ಳಲು ಅವಕಾಶ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>