ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ಅವರ ಹಾದಿಯಲ್ಲಿ ನಡೆದ ಸ್ವಾಮೀಜಿ ತಮ್ಮ 111 ವರ್ಷ ಜೀವಮಾನದಲ್ಲಿ ಸಾವಿರಾರು ಮಕ್ಕಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಏಳಿಗೆಗಾಗಿ ಶ್ರಮಿಸಿದರು. ಆಹಾರ, ಆಶ್ರಯ, ಶಿಕ್ಷಣ(ತ್ರಿವಿಧ ದಾಸೋಹ),ಆಧ್ಮಾತ್ಮ ಜ್ಞಾನ, ರೈತರ ಕಲ್ಯಾಣ ಅವರ ಸಮಾಜ ಸುಧಾರಣಾ ಅಂಶಗಳಲ್ಲಿ ಪ್ರಧಾನ ಆದ್ಯತೆಯಾಗಿತ್ತು.