<p><strong>ನವದೆಹಲಿ</strong>: ವಂಶವಾಹಿಯಿಂದಾಗಿ ಬರುವ ಬೆನ್ನುಹುರಿಯ ಸಮಸ್ಯೆಯೊಂದನ್ನು ಎದುರಿಸುತ್ತಿರುವ ವ್ಯಕ್ತಿಯೊಬ್ಬರಿಗೆ ಗರಿಷ್ಠ ಮಿತಿಯನ್ನು ಮೀರಿ ₹18 ಲಕ್ಷ ಮೌಲ್ಯದ ಔಷಧಗಳನ್ನು ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.</p>.<p>ಈ ಕಾಯಿಲೆಗೆ ಚಿಕಿತ್ಸೆ ಒದಗಿಸಲು ಕೇಂದ್ರ ಸರ್ಕಾರದಿಂದ ಗರಿಷ್ಠ ₹50 ಲಕ್ಷದವರೆಗೆ ನೆರವು ನೀಡಲು ನಿಯಮಗಳಲ್ಲಿ ಅವಕಾಶ ಇದೆ. </p>.<p class="bodytext">ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇರುವ ವಿಭಾಗೀಯ ಪೀಠವು ಕೇರಳ ಹೈಕೋರ್ಟ್ನ ಆದೇಶಕ್ಕೆ ತಡೆ ನೀಡಿದೆ.</p>.<p class="bodytext">24 ವರ್ಷ ವಯಸ್ಸಿನ ಸೆಬಾ ಪಿ.ಎ. ಅವರಿಗೆ ಚಿಕಿತ್ಸೆ ಮುಂದುವರಿಸಲು ಒಂದು ಬಾರಿಯ ಕ್ರಮವಾಗಿ ರಿಸ್ಡಿಪ್ಲಾಮ್ ಔಷಧವನ್ನು ನೀಡಬೇಕು ಎಂದು ಹೈಕೋರ್ಟ್ ಹೇಳಿತ್ತು.</p>.<p class="bodytext">ಈ ಔಷಧದ ಒಂದು ಬಾಟಲಿಗೆ ₹6.2 ಲಕ್ಷ ಬೆಲೆ ಇದೆ. 20 ಕೆ.ಜಿ.ಗಿಂತ ಕಡಿಮೆ ತೂಕ ಇರುವ ವ್ಯಕ್ತಿಗಳಿಗೆ ತಿಂಗಳಿಗೆ ಒಂದು ಬಾಟಲಿ ಔಷಧಿ ನೀಡಬೇಕಾಗುತ್ತದೆ. ಹೆಚ್ಚು ತೂಕ ಇರುವವರಿಗೆ ಮೂರು ಬಾಟಲಿಗಳವರೆಗೆ ಬೇಕಾಗುತ್ತದೆ. ಇದರಿಂದಾಗಿ ಈ ಕಾಯಿಲೆಗೆ ದೀರ್ಘ ಅವಧಿಯವರೆಗೆ ಚಿಕಿತ್ಸೆ ಒದಗಿಸುವುದು ಹಣಕಾಸಿನ ದೃಷ್ಟಿಯಿಂದ ಭಾರಿ ಹೊರೆ.</p>.<p class="bodytext">ರೋಗಿಗಳಿಗೆ ₹50 ಲಕ್ಷದವರೆಗೆ ಮಾತ್ರ ನೆರವು ಒದಗಿಸಲು ಅವಕಾಶ ಇದೆ ಎಂದು ಕೇಂದ್ರವು ಪೀಠಕ್ಕೆ ತಿಳಿಸಿತು.</p>.<p class="bodytext">ಪ್ರಕರಣವನ್ನು ಪರಿಶೀಲಿಸಿ ₹50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವೆಚ್ಚಗಳನ್ನು ಭರಿಸಲು ಅನುಮತಿ ನೀಡುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ಕೇಂದ್ರಕ್ಕೆ ಪೀಠವು ಸೂಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ವಂಶವಾಹಿಯಿಂದಾಗಿ ಬರುವ ಬೆನ್ನುಹುರಿಯ ಸಮಸ್ಯೆಯೊಂದನ್ನು ಎದುರಿಸುತ್ತಿರುವ ವ್ಯಕ್ತಿಯೊಬ್ಬರಿಗೆ ಗರಿಷ್ಠ ಮಿತಿಯನ್ನು ಮೀರಿ ₹18 ಲಕ್ಷ ಮೌಲ್ಯದ ಔಷಧಗಳನ್ನು ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.</p>.<p>ಈ ಕಾಯಿಲೆಗೆ ಚಿಕಿತ್ಸೆ ಒದಗಿಸಲು ಕೇಂದ್ರ ಸರ್ಕಾರದಿಂದ ಗರಿಷ್ಠ ₹50 ಲಕ್ಷದವರೆಗೆ ನೆರವು ನೀಡಲು ನಿಯಮಗಳಲ್ಲಿ ಅವಕಾಶ ಇದೆ. </p>.<p class="bodytext">ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇರುವ ವಿಭಾಗೀಯ ಪೀಠವು ಕೇರಳ ಹೈಕೋರ್ಟ್ನ ಆದೇಶಕ್ಕೆ ತಡೆ ನೀಡಿದೆ.</p>.<p class="bodytext">24 ವರ್ಷ ವಯಸ್ಸಿನ ಸೆಬಾ ಪಿ.ಎ. ಅವರಿಗೆ ಚಿಕಿತ್ಸೆ ಮುಂದುವರಿಸಲು ಒಂದು ಬಾರಿಯ ಕ್ರಮವಾಗಿ ರಿಸ್ಡಿಪ್ಲಾಮ್ ಔಷಧವನ್ನು ನೀಡಬೇಕು ಎಂದು ಹೈಕೋರ್ಟ್ ಹೇಳಿತ್ತು.</p>.<p class="bodytext">ಈ ಔಷಧದ ಒಂದು ಬಾಟಲಿಗೆ ₹6.2 ಲಕ್ಷ ಬೆಲೆ ಇದೆ. 20 ಕೆ.ಜಿ.ಗಿಂತ ಕಡಿಮೆ ತೂಕ ಇರುವ ವ್ಯಕ್ತಿಗಳಿಗೆ ತಿಂಗಳಿಗೆ ಒಂದು ಬಾಟಲಿ ಔಷಧಿ ನೀಡಬೇಕಾಗುತ್ತದೆ. ಹೆಚ್ಚು ತೂಕ ಇರುವವರಿಗೆ ಮೂರು ಬಾಟಲಿಗಳವರೆಗೆ ಬೇಕಾಗುತ್ತದೆ. ಇದರಿಂದಾಗಿ ಈ ಕಾಯಿಲೆಗೆ ದೀರ್ಘ ಅವಧಿಯವರೆಗೆ ಚಿಕಿತ್ಸೆ ಒದಗಿಸುವುದು ಹಣಕಾಸಿನ ದೃಷ್ಟಿಯಿಂದ ಭಾರಿ ಹೊರೆ.</p>.<p class="bodytext">ರೋಗಿಗಳಿಗೆ ₹50 ಲಕ್ಷದವರೆಗೆ ಮಾತ್ರ ನೆರವು ಒದಗಿಸಲು ಅವಕಾಶ ಇದೆ ಎಂದು ಕೇಂದ್ರವು ಪೀಠಕ್ಕೆ ತಿಳಿಸಿತು.</p>.<p class="bodytext">ಪ್ರಕರಣವನ್ನು ಪರಿಶೀಲಿಸಿ ₹50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವೆಚ್ಚಗಳನ್ನು ಭರಿಸಲು ಅನುಮತಿ ನೀಡುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ಕೇಂದ್ರಕ್ಕೆ ಪೀಠವು ಸೂಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>