<p><strong>ಪುಣೆ:</strong> ‘ಭಾರತದ ಆರ್ಥಿಕತೆ ಸತ್ತಿದೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಅವಮಾನಕಾರವಾಗಿದ್ದು, ಅದನ್ನು ಅಕ್ಷರಶಃ ತೆಗೆದುಕೊಳ್ಳಬಾರದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.</p><p>ಪುಣೆಯಲ್ಲಿ ಕ್ರಾಸ್ವರ್ಡ್ ಸಿಇಒ ಆಕಾಶ್ ಗುಪ್ತಾ ಅವರೊಂದಿಗಿನ ಸಂವಾದದಲ್ಲಿ ಭಾಗಿಯಾಗಿರುವ ಶಶಿ ತರೂರ್ ಅವರು ‘ದಿ ಲಿವಿಂಗ್ ಕಾನ್ಸ್ಟಿಟ್ಯೂಷನ್’ ಪುಸ್ತಕ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. </p><p>‘ಜಗತ್ತಿನ ಕೆಲವು ದೊಡ್ಡ ಶಕ್ತಿಗಳ (ದೇಶಗಳು) ಸಕ್ರಿಯ ಪಾಲ್ಗೊಳ್ಳುವಿಕೆಯಿಂದಾಗಿ ಯುದ್ಧಗಳು ನಡೆಯುತ್ತಿರುವಾಗ ಮತ್ತು ನಿಯಮಗಳನ್ನು ಎತ್ತಿಹಿಡಿಯಬೇಕಾದ ಜನರು ಅವ್ಯವಸ್ಥೆಯನ್ನು ಉತ್ತೇಜಿಸುತ್ತಿರುವಾಗ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಬಹಳ ಸ್ಪಷ್ಟತೆ ಹೊಂದಿರಬೇಕು’ ಎಂದು ತರೂರ್ ಹೇಳಿದ್ದಾರೆ. </p><p>'ಟ್ರಂಪ್ ಬಗ್ಗೆ ನಾನು ಹೇಳುವುದೇನೆಂದರೆ, ಅವರು (ಟ್ರಂಪ್) ಅಮೆರಿಕದ ಅಧ್ಯಕ್ಷರಾಗಿರುವುದರಿಂದ ಅವರು ತೆಗೆದುಕೊಳ್ಳುವ ನಿರ್ಧಾರಗಳು ದ್ವಿಪಕ್ಷೀಯ ನೀತಿಗಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಅವರನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ, ಅವರು ನೀಡುವ ಹೇಳಿಕೆಗಳನ್ನು ಅಕ್ಷರಶಃ ತೆಗೆದುಕೊಳ್ಳಬಾರದು’ ಎಂದು ತರೂರ್ ತಿಳಿಸಿದ್ದಾರೆ. </p><p>‘ಭಾರತದ ಆರ್ಥಿಕತೆ ಸತ್ತಿದೆ’ ಎಂದು ಟ್ರಂಪ್ ಹೇಳಿರುವುದು ‘ಆಟದ ಮೈದಾನದಲ್ಲಿ ಶಾಲಾ ಬಾಲಕನೊಬ್ಬ ನಿಮ್ಮ ತಾಯಿ ಕೊಳಕು’ ಎಂದು ಹೇಳಿದಂತಿದೆ. ಹಾಗಾಗಿ ಅವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು’ ಎಂದಿದ್ದಾರೆ. </p><p>ಕಳೆದ ಆರು ತಿಂಗಳಿನಿಂದ ಟ್ರಂಪ್ ಅವರ ಸುಂಕ ನೀತಿಗಳ ಪರಿಣಾಮವು ಇಡೀ ಜಗತ್ತನ್ನು ಹಿಂದಕ್ಕೆ ಕೊಂಡೊಯ್ದಿದೆ. ಭಾರತವೂ ಕೇವಲ ಎರಡು ಮೂರು ದಿನಗಳ ಹಿಂದೆ ಸ್ವಲ್ಪ ಆಘಾತಕ್ಕೊಳಗಾಗಿತ್ತು ಎಂದು ತರೂರ್ ಹೇಳಿದ್ದಾರೆ.</p><p>ಭಾರತವು ತನ್ನ ಹಿತಾಸಕ್ತಿಗಳು ಮತ್ತು ಜನರ ಪರ ಹೇಗೆ ನಿಲ್ಲಬೇಕು ಎಂಬುದರ ಬಗ್ಗೆ ಈಗಾಗಲೇ ಸ್ಪಷ್ಟತೆಯನ್ನು ಹೊಂದಿದೆ. ಹಾಗಾಗಿ ಅನಿಶ್ಚಿತತೆಯನ್ನು ಬುದ್ಧಿವಂತಿಕೆಯಿಂದ ಎದುರಿಸುತ್ತದೆ ಎಂದು ತರೂರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.ಆಳ ಅಗಲ| ಡೊನಾಲ್ಡ್ ಟ್ರಂಪ್ 25% ಸುಂಕ: ಪರಿಣಾಮ ಏನು?.ಭಾರತದ್ದು 'ಸತ್ತ' ಆರ್ಥಿಕತೆ; ಟ್ರಂಪ್ ಹೇಳಿಕೆಗೆ ದೇವೇಗೌಡ ತೀಕ್ಷ್ಣ ಪ್ರತಿಕ್ರಿಯೆ.ಭವಿಷ್ಯದಲ್ಲಿ ಪಾಕ್ನವರು ಭಾರತಕ್ಕೆ ತೈಲ ಮಾರಾಟ ಮಾಡಬಹುದು: ಡೊನಾಲ್ಡ್ ಟ್ರಂಪ್.ಫ್ಯಾಕ್ಟ್ಚೆಕ್: ಅಸಮಾಧಾನದಿಂದ ಮೋದಿ ವಿರುದ್ಧ ಟ್ರಂಪ್ ಪೋಸ್ಟ್; ಸುಳ್ಳು ಸುದ್ದಿ.'ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ'; ಮಗದೊಮ್ಮೆ ವಾದ ಮಂಡಿಸಿದ ಟ್ರಂಪ್.ಮೋದಿ 'ಸುಳ್ಳುಗಾರ' ಅಂದರೆ ಟ್ರಂಪ್ ಅವರಿಂದ ಸತ್ಯಾಂಶ ಬಯಲು: ರಾಹುಲ್ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ:</strong> ‘ಭಾರತದ ಆರ್ಥಿಕತೆ ಸತ್ತಿದೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಅವಮಾನಕಾರವಾಗಿದ್ದು, ಅದನ್ನು ಅಕ್ಷರಶಃ ತೆಗೆದುಕೊಳ್ಳಬಾರದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.</p><p>ಪುಣೆಯಲ್ಲಿ ಕ್ರಾಸ್ವರ್ಡ್ ಸಿಇಒ ಆಕಾಶ್ ಗುಪ್ತಾ ಅವರೊಂದಿಗಿನ ಸಂವಾದದಲ್ಲಿ ಭಾಗಿಯಾಗಿರುವ ಶಶಿ ತರೂರ್ ಅವರು ‘ದಿ ಲಿವಿಂಗ್ ಕಾನ್ಸ್ಟಿಟ್ಯೂಷನ್’ ಪುಸ್ತಕ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. </p><p>‘ಜಗತ್ತಿನ ಕೆಲವು ದೊಡ್ಡ ಶಕ್ತಿಗಳ (ದೇಶಗಳು) ಸಕ್ರಿಯ ಪಾಲ್ಗೊಳ್ಳುವಿಕೆಯಿಂದಾಗಿ ಯುದ್ಧಗಳು ನಡೆಯುತ್ತಿರುವಾಗ ಮತ್ತು ನಿಯಮಗಳನ್ನು ಎತ್ತಿಹಿಡಿಯಬೇಕಾದ ಜನರು ಅವ್ಯವಸ್ಥೆಯನ್ನು ಉತ್ತೇಜಿಸುತ್ತಿರುವಾಗ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಬಹಳ ಸ್ಪಷ್ಟತೆ ಹೊಂದಿರಬೇಕು’ ಎಂದು ತರೂರ್ ಹೇಳಿದ್ದಾರೆ. </p><p>'ಟ್ರಂಪ್ ಬಗ್ಗೆ ನಾನು ಹೇಳುವುದೇನೆಂದರೆ, ಅವರು (ಟ್ರಂಪ್) ಅಮೆರಿಕದ ಅಧ್ಯಕ್ಷರಾಗಿರುವುದರಿಂದ ಅವರು ತೆಗೆದುಕೊಳ್ಳುವ ನಿರ್ಧಾರಗಳು ದ್ವಿಪಕ್ಷೀಯ ನೀತಿಗಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಅವರನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ, ಅವರು ನೀಡುವ ಹೇಳಿಕೆಗಳನ್ನು ಅಕ್ಷರಶಃ ತೆಗೆದುಕೊಳ್ಳಬಾರದು’ ಎಂದು ತರೂರ್ ತಿಳಿಸಿದ್ದಾರೆ. </p><p>‘ಭಾರತದ ಆರ್ಥಿಕತೆ ಸತ್ತಿದೆ’ ಎಂದು ಟ್ರಂಪ್ ಹೇಳಿರುವುದು ‘ಆಟದ ಮೈದಾನದಲ್ಲಿ ಶಾಲಾ ಬಾಲಕನೊಬ್ಬ ನಿಮ್ಮ ತಾಯಿ ಕೊಳಕು’ ಎಂದು ಹೇಳಿದಂತಿದೆ. ಹಾಗಾಗಿ ಅವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು’ ಎಂದಿದ್ದಾರೆ. </p><p>ಕಳೆದ ಆರು ತಿಂಗಳಿನಿಂದ ಟ್ರಂಪ್ ಅವರ ಸುಂಕ ನೀತಿಗಳ ಪರಿಣಾಮವು ಇಡೀ ಜಗತ್ತನ್ನು ಹಿಂದಕ್ಕೆ ಕೊಂಡೊಯ್ದಿದೆ. ಭಾರತವೂ ಕೇವಲ ಎರಡು ಮೂರು ದಿನಗಳ ಹಿಂದೆ ಸ್ವಲ್ಪ ಆಘಾತಕ್ಕೊಳಗಾಗಿತ್ತು ಎಂದು ತರೂರ್ ಹೇಳಿದ್ದಾರೆ.</p><p>ಭಾರತವು ತನ್ನ ಹಿತಾಸಕ್ತಿಗಳು ಮತ್ತು ಜನರ ಪರ ಹೇಗೆ ನಿಲ್ಲಬೇಕು ಎಂಬುದರ ಬಗ್ಗೆ ಈಗಾಗಲೇ ಸ್ಪಷ್ಟತೆಯನ್ನು ಹೊಂದಿದೆ. ಹಾಗಾಗಿ ಅನಿಶ್ಚಿತತೆಯನ್ನು ಬುದ್ಧಿವಂತಿಕೆಯಿಂದ ಎದುರಿಸುತ್ತದೆ ಎಂದು ತರೂರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.ಆಳ ಅಗಲ| ಡೊನಾಲ್ಡ್ ಟ್ರಂಪ್ 25% ಸುಂಕ: ಪರಿಣಾಮ ಏನು?.ಭಾರತದ್ದು 'ಸತ್ತ' ಆರ್ಥಿಕತೆ; ಟ್ರಂಪ್ ಹೇಳಿಕೆಗೆ ದೇವೇಗೌಡ ತೀಕ್ಷ್ಣ ಪ್ರತಿಕ್ರಿಯೆ.ಭವಿಷ್ಯದಲ್ಲಿ ಪಾಕ್ನವರು ಭಾರತಕ್ಕೆ ತೈಲ ಮಾರಾಟ ಮಾಡಬಹುದು: ಡೊನಾಲ್ಡ್ ಟ್ರಂಪ್.ಫ್ಯಾಕ್ಟ್ಚೆಕ್: ಅಸಮಾಧಾನದಿಂದ ಮೋದಿ ವಿರುದ್ಧ ಟ್ರಂಪ್ ಪೋಸ್ಟ್; ಸುಳ್ಳು ಸುದ್ದಿ.'ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ'; ಮಗದೊಮ್ಮೆ ವಾದ ಮಂಡಿಸಿದ ಟ್ರಂಪ್.ಮೋದಿ 'ಸುಳ್ಳುಗಾರ' ಅಂದರೆ ಟ್ರಂಪ್ ಅವರಿಂದ ಸತ್ಯಾಂಶ ಬಯಲು: ರಾಹುಲ್ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>