<p><strong>ಹೈದರಾಬಾದ್</strong>: ನಿಷೇಧಿತ ಸಂಘಟನೆ ಸಿಪಿಐನ (ಮಾವೋವಾದಿ) ಛತ್ತೀಸಗಢ ಘಟಕದ ಮಹಿಳೆಯೊಬ್ಬರು ತೆಲಂಗಾಣದ ಪೊಲೀಸರಿಗೆ ಸೋಮವಾರ ಶರಣಾಗಿದ್ದಾರೆ. </p>.<p>ಮುಲುಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಬರೀಶ್ ಪಿ. ಅವರ ಮುಂದೆ 30 ವರ್ಷದ ಮಹಿಳೆ ಶರಣಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ. </p>.<p>ತೆಲಂಗಾಣ ಸರ್ಕಾರವು ಶರಣಾದ ಮಾವೋವಾದಿಗಳಿಗಾಗಿ ಪರಿಚಯಿಸಿದ ಪುನರ್ವಸತಿ ಯೋಜನೆ ಮತ್ತು ಬುಡಕಟ್ಟು ಸಮುದಾಯಗಳಿಗೆ ಅನುಷ್ಠಾನಗೊಳಿಸಿದ ಕಲ್ಯಾಣ ಯೋಜನೆಗಳನ್ನು ತಿಳಿದು, ಶಸ್ತ್ರಾಸ್ತ್ರ ತ್ಯಜಿಸಲು ಅವರು ನಿರ್ಧರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ನಿಷೇಧಿತ ಸಂಘಟನೆ ಸಿಪಿಐನ (ಮಾವೋವಾದಿ) ಛತ್ತೀಸಗಢ ಘಟಕದ ಮಹಿಳೆಯೊಬ್ಬರು ತೆಲಂಗಾಣದ ಪೊಲೀಸರಿಗೆ ಸೋಮವಾರ ಶರಣಾಗಿದ್ದಾರೆ. </p>.<p>ಮುಲುಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಬರೀಶ್ ಪಿ. ಅವರ ಮುಂದೆ 30 ವರ್ಷದ ಮಹಿಳೆ ಶರಣಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ. </p>.<p>ತೆಲಂಗಾಣ ಸರ್ಕಾರವು ಶರಣಾದ ಮಾವೋವಾದಿಗಳಿಗಾಗಿ ಪರಿಚಯಿಸಿದ ಪುನರ್ವಸತಿ ಯೋಜನೆ ಮತ್ತು ಬುಡಕಟ್ಟು ಸಮುದಾಯಗಳಿಗೆ ಅನುಷ್ಠಾನಗೊಳಿಸಿದ ಕಲ್ಯಾಣ ಯೋಜನೆಗಳನ್ನು ತಿಳಿದು, ಶಸ್ತ್ರಾಸ್ತ್ರ ತ್ಯಜಿಸಲು ಅವರು ನಿರ್ಧರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>