<p><strong>ಶ್ರೀನಗರ</strong>: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯ ಭೀತಿಯಿಂದಾಗಿ ಮನೆಗಳನ್ನು ತೊರೆದು ಹೋಗಿದ್ದ ಜನರು ಮತ್ತೆ ಮನೆಗಳಿಗೆ ತೆರಳಬಹುದು ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ.</p><p>ಶೆಲ್, ದಾಳಿಯಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳಿಗೆ ಒಮರ್ ಭೇಟಿ ನೀಡಿ, ಜನರೊಂದಿಗೆ ಮಾತುಕತೆ ನಡೆಸಿದರು. </p><p>'ಇಲ್ಲಿನ ಪ್ರದೇಶಗಳನ್ನು ನೋಡಿದಾಗ ಯುದ್ಧದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಪಾಕ್ ಶೆಲ್ ದಾಳಿಯಿಂದಾಗಿ ಪೂಂಚ್ ಜಿಲ್ಲೆ ಅತಿ ಹೆಚ್ಚು ಹಾನಿಗೆ ಒಳಗಾಗಿದೆ' ಎಂದು ಒಮರ್ ಕಳವಳ ವ್ಯಕ್ತಪಡಿಸಿದ್ದಾರೆ.</p>.ʼಮಹಾʼ ಬಿಜೆಪಿ ನಾಯಕನ ಮಾನಹಾನಿಕರ ವಿಡಿಯೊ ಅಳಿಸಲು ಆದೇಶ: ಬಾಂಬೆ ಹೈಕೋರ್ಟ್ .ಟೆಸ್ಟ್ಗೆ ಕೊಹ್ಲಿ ನಿವೃತ್ತಿ: ಇಲ್ಲಿದೆ ಪತ್ನಿ ಅನುಷ್ಕಾ ಭಾವನಾತ್ಮಕ ಪೋಸ್ಟ್. <p>ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ತಿಳಿಯಾಗಿದ್ದು, ಕದನ ವಿರಾಮ ಘೋಷಣೆಯಾದ ಬೆನ್ನೆಲ್ಲೇ ಶೆಲ್ ದಾಳಿಯ ಭೀತಿಯಿಂದ ಮನೆಗಳನ್ನು ತೊರೆದು ಹೋಗಿದ್ದ ಜನರು ಮತ್ತೆ ಮನೆಗಳಿಗೆ ತೆರಳಬಹುದು ಎಂದು ಒಮರ್ ಭರವಸೆ ನೀಡಿದ್ದಾರೆ.</p><p>ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೋಮು ಸಾಮರಸ್ಯವನ್ನು ಕಾಪಾಡಿಕೊಂಡು, ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರ ನಡುವೆ ಭೇದ ಭಾವನೆ ಇಲ್ಲದೇ ಏಕತೆಯಿಂದ ಹೋರಾಡಿದ್ದಕ್ಕಾಗಿ ಪೂಂಚ್ನ ಜನರನ್ನು ಶ್ಲಾಘಿಸಿದರು. ಈ ವೇಳೆ ಭವಿಷ್ಯದ ಹಿತದೃಷ್ಟಿಯಿಂದ ಬಂಕರ್ಗಳ ಸ್ಥಾಪಿಸುವುದು ಅಗತ್ಯವಾಗಿದೆ ಎಂದು ಒಮರ್ ತಿಳಿಸಿದ್ದಾರೆ.</p>.Video | ಹಿಂದೂ–ಮುಸ್ಲಿಮರು ಸಡಗರದಿಂದ ಪಾಲ್ಗೊಳ್ಳುವ ಉಳ್ಳಾಲ ದರ್ಗಾ ಉರುಸ್.ಯುದ್ಧವೆಂದರೆ ಪ್ರಣಯ, ಬಾಲಿವುಡ್ ಸಿನಿಮಾ ಅಲ್ಲ: ಸೇನೆಯ ನಿವೃತ್ತ ಮುಖ್ಯಸ್ಥ ನರವಣೆ. <p>ಪಹಲ್ಗಾಮ್ನಲ್ಲಿ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆ ಉಗ್ರರ ಒಂಬತ್ತು ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯನ್ನು ನಡೆಸಿತ್ತು.</p>.ಯಾವುದೇ ಸನ್ನಿವೇಶ ಎದುರಿಸಲು ಸೇನೆ ಸನ್ನದ್ಧ: ಏರ್ ಮಾರ್ಷಲ್ ಎ.ಕೆ. ಭಾರ್ತಿ.ರಾಷ್ಟ್ರವನ್ನುದ್ದೇಶಿಸಿ ಇಂದು ರಾತ್ರಿ 8ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾತು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯ ಭೀತಿಯಿಂದಾಗಿ ಮನೆಗಳನ್ನು ತೊರೆದು ಹೋಗಿದ್ದ ಜನರು ಮತ್ತೆ ಮನೆಗಳಿಗೆ ತೆರಳಬಹುದು ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ.</p><p>ಶೆಲ್, ದಾಳಿಯಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳಿಗೆ ಒಮರ್ ಭೇಟಿ ನೀಡಿ, ಜನರೊಂದಿಗೆ ಮಾತುಕತೆ ನಡೆಸಿದರು. </p><p>'ಇಲ್ಲಿನ ಪ್ರದೇಶಗಳನ್ನು ನೋಡಿದಾಗ ಯುದ್ಧದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಪಾಕ್ ಶೆಲ್ ದಾಳಿಯಿಂದಾಗಿ ಪೂಂಚ್ ಜಿಲ್ಲೆ ಅತಿ ಹೆಚ್ಚು ಹಾನಿಗೆ ಒಳಗಾಗಿದೆ' ಎಂದು ಒಮರ್ ಕಳವಳ ವ್ಯಕ್ತಪಡಿಸಿದ್ದಾರೆ.</p>.ʼಮಹಾʼ ಬಿಜೆಪಿ ನಾಯಕನ ಮಾನಹಾನಿಕರ ವಿಡಿಯೊ ಅಳಿಸಲು ಆದೇಶ: ಬಾಂಬೆ ಹೈಕೋರ್ಟ್ .ಟೆಸ್ಟ್ಗೆ ಕೊಹ್ಲಿ ನಿವೃತ್ತಿ: ಇಲ್ಲಿದೆ ಪತ್ನಿ ಅನುಷ್ಕಾ ಭಾವನಾತ್ಮಕ ಪೋಸ್ಟ್. <p>ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ತಿಳಿಯಾಗಿದ್ದು, ಕದನ ವಿರಾಮ ಘೋಷಣೆಯಾದ ಬೆನ್ನೆಲ್ಲೇ ಶೆಲ್ ದಾಳಿಯ ಭೀತಿಯಿಂದ ಮನೆಗಳನ್ನು ತೊರೆದು ಹೋಗಿದ್ದ ಜನರು ಮತ್ತೆ ಮನೆಗಳಿಗೆ ತೆರಳಬಹುದು ಎಂದು ಒಮರ್ ಭರವಸೆ ನೀಡಿದ್ದಾರೆ.</p><p>ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೋಮು ಸಾಮರಸ್ಯವನ್ನು ಕಾಪಾಡಿಕೊಂಡು, ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರ ನಡುವೆ ಭೇದ ಭಾವನೆ ಇಲ್ಲದೇ ಏಕತೆಯಿಂದ ಹೋರಾಡಿದ್ದಕ್ಕಾಗಿ ಪೂಂಚ್ನ ಜನರನ್ನು ಶ್ಲಾಘಿಸಿದರು. ಈ ವೇಳೆ ಭವಿಷ್ಯದ ಹಿತದೃಷ್ಟಿಯಿಂದ ಬಂಕರ್ಗಳ ಸ್ಥಾಪಿಸುವುದು ಅಗತ್ಯವಾಗಿದೆ ಎಂದು ಒಮರ್ ತಿಳಿಸಿದ್ದಾರೆ.</p>.Video | ಹಿಂದೂ–ಮುಸ್ಲಿಮರು ಸಡಗರದಿಂದ ಪಾಲ್ಗೊಳ್ಳುವ ಉಳ್ಳಾಲ ದರ್ಗಾ ಉರುಸ್.ಯುದ್ಧವೆಂದರೆ ಪ್ರಣಯ, ಬಾಲಿವುಡ್ ಸಿನಿಮಾ ಅಲ್ಲ: ಸೇನೆಯ ನಿವೃತ್ತ ಮುಖ್ಯಸ್ಥ ನರವಣೆ. <p>ಪಹಲ್ಗಾಮ್ನಲ್ಲಿ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆ ಉಗ್ರರ ಒಂಬತ್ತು ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯನ್ನು ನಡೆಸಿತ್ತು.</p>.ಯಾವುದೇ ಸನ್ನಿವೇಶ ಎದುರಿಸಲು ಸೇನೆ ಸನ್ನದ್ಧ: ಏರ್ ಮಾರ್ಷಲ್ ಎ.ಕೆ. ಭಾರ್ತಿ.ರಾಷ್ಟ್ರವನ್ನುದ್ದೇಶಿಸಿ ಇಂದು ರಾತ್ರಿ 8ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾತು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>