‘ಪಕ್ಷ ಬಿಡಲು ಹೇಳಿ ನಮಗೆ ಆಮಿಷಗಳನ್ನು ಒಡ್ಡಲಾಗುತ್ತಿದೆ‘ ಎಂದು ಟಿಆರ್ಎಸ್ ಶಾಸಕರು ಮಾಹಿತಿ ನೀಡಿದ್ದರು. ಟಿಆರ್ಎಸ್ ತೊರೆದರೆ ಹಣ, ಅಧಿಕಾರ ನೀಡಲಾಗುವುದು ಎಂದು ಶಾಸಕರಾದ ಜಿ ಬಾಲರಾಜು, ಬಿ ಹರ್ಷವರ್ಧನ್ ರೆಡ್ಡಿ, ಆರ್ ಕಾಂತರಾವ್ ಮತ್ತು ರೋಹಿತ್ ರೆಡ್ಡಿ ಅವರಿಗೆ ಮೂವರು ಭರವಸೆ ನೀಡಿದ್ದರು’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.