ಒಬ್ರಯಾನ್ ಅವರು ಸದನದ ಬಾವಿಗೆ ಇಳಿದು ಘೋಷಣೆಗಳನ್ನು ಕೂಗುತ್ತಾ, ಭದ್ರತಾ ವೈಫಲ್ಯ ಪ್ರಕರಣವನ್ನು ಚರ್ಚಿಸಬೇಕು ಎಂದು ಅಶಿಸ್ತಿನ ವರ್ತನೆ ತೋರಿದ್ದರು. ಈ ಹಿನ್ನೆಲೆ ಸ್ಪೀಕರ್ ಜಗದೀಪ್ ಧನಕರ್ ಅವರು, ಈ ಕೂಡಲೇ ಒಬ್ರಯಾನ್ ಅವರು ಸದನವನ್ನು ತೊರೆಯುವಂತೆ ಆದೇಶಿಸಿದ್ದಾರೆ. ಆದರೂ ಒಬ್ರಯಾನ್ ಸೇರಿ ಇತರ ಪ್ರತಿಪಕ್ಷಗಳ ನಾಯಕರು ಗಲಾಟೆಯನ್ನು ಮುಂದುವರಿಸಿದ್ದರು. ಹೀಗಾಗಿ ಅಧಿವೇಶನವನ್ನು ಮೊಟಕುಗೊಳಿಸಿದ ಸ್ಪೀಕರ್ 2 ಗಂಟೆಗೆ ಮುಂದೂಡಿದರು.