<p>ರಾಷ್ಟ್ರೀಯ, ರಾಜ್ಯ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.</p>.<p><strong>ಕಾರವಾರ/ಸಿದ್ದಾಪುರ:</strong> ಸಿದ್ದಾಪುರ ತಾಲ್ಲೂಕಿನ ಅವರಗೊಪ್ಪ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ವಸಂತ ನಾಯ್ಕ (43) ಎಂಬುವವರ ಹತ್ಯೆ ನಡೆದಿದೆ. ಹತ್ಯೆ ಆರೋಪಿಗಳಾದ ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾ ನಾಯ್ಕ ಸೇರಿ ಏಳು ಮಂದಿಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.ಸಿದ್ದಾಪುರದ ವಸಂತ ನಾಯ್ಕ ಕೊಲೆ: ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾ ನಾಯ್ಕ ಬಂಧನ.<p><strong>ನವದೆಹಲಿ:</strong> ‘ನರೇಂದ್ರ ಮೋದಿ ಭಯಭೀತರಾಗಿದ್ದಾರೆ. ಅವರ ಮೇಲಿದ್ದ ಎರಡು ಒತ್ತಡಗಳಿಂದಾಗಿ ಭಾರತ ಹಾಗೂ ಅಮೆರಿಕ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ’ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು.</p>.ಮೋದಿ ಮೇಲಿರುವ ಆ ಎರಡು ಒತ್ತಡದ ಕಾರಣಕ್ಕೆ ಅಮೆರಿಕ ಒಪ್ಪಂದಕ್ಕೆ ಸಹಿ: ರಾಗಾ ಆರೋಪ.<p><strong>ನವದೆಹಲಿ</strong>: ಭಾರತ ಮತ್ತು ಚೀನಾ ನಡುವಿನ ಲಡಾಖ್ ಬಿಕ್ಕಟ್ಟಿನ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದ ವಿಷಯ ಇಂದೂ (ಮಂಗಳವಾರ) ಸಹ ಭಾರಿ ಕೋಲಾಹಲಕ್ಕೆ ಕಾರಣವಾಯಿತು.</p>.ಲೋಕಸಭೆಯಲ್ಲಿ ಭಾರಿ ಕೋಲಾಹಲ: ವಿರೋಧ ಪಕ್ಷದ 8 ಸಂಸದರ ಅಮಾನತು.<p><strong>ನವದೆಹಲಿ:</strong> ಎನ್ಡಿಎ ವಿವಿಧ ಚುನಾವಣೆಗಳಲ್ಲಿ ನಿರಂತರ ಜಯ ಸಾಧಿಸುತ್ತಿರುವುದಕ್ಕೆ ಜನಪರ ನೀತಿಗಳು ಹಾಗೂ ಪರಿಶ್ರಮವೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಿಳಿಸಿದ್ದಾರೆ.</p>.ಗೆಲುವುಗಳಿಂದ ತೃಪ್ತರಾಗದೆ ಕೆಲಸ ಮುಂದುವರಿಸಿ: NDA ನಾಯಕರಿಗೆ ಪ್ರಧಾನಿ ಮೋದಿ ಸಲಹೆ.<p><strong>ನವದೆಹಲಿ:</strong> ದತ್ತಾಂಶ ಹಂಚಿಕೆ ಹೆಸರಿನಲ್ಲಿ ಪ್ರಜೆಗಳ ಖಾಸಗಿತನದ ಹಕ್ಕಿನೊಂದಿಗೆ ಆಟವಾಡಕೂಡದು ಎಂದು ಸುಪ್ರೀಂ ಕೋರ್ಟ್ ಕುಟುವಾಗಿ ನುಡಿದಿದೆ.</p>.ಜನರ ಖಾಸಗಿತನದ ಹಕ್ಕು ಉಲ್ಲಂಘಿಸಲು ಬಿಡೆವು: ವಾಟ್ಸ್ಆ್ಯಪ್ಗೆ ಸುಪ್ರಿಂ ಕೋರ್ಟ್.<p><strong>ಬೆಂಗಳೂರು</strong>: ‘ಮಾನ್ಯತೆ ಹೊಂದಿದ ವೀಸಾ, ಪಾಸ್ಪೋರ್ಟ್ ಇಲ್ಲದೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯ ಕಾದಿದೆ’ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.</p>.ವಿದೇಶಿಗರ ಅಕ್ರಮ ಠಿಕಾಣಿ: ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದ ಹೈಕೋರ್ಟ್.<p><strong>ನವದೆಹಲಿ:</strong> ಭಾರತ ಹಾಗೂ ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಘೋಷಣೆಯು ಜಾಗತಿಕವಾಗಿ ಆರ್ಥಿಕತೆಯ ಮೇಲೆ ಉಂಟಾಗಿದ್ದ ಅನಿಶ್ಚಿತತೆಯ ವಾತಾವರಣವನ್ನು ಕೊನೆಗೊಳಿಸಿದೆ. ಮಾತ್ರವಲ್ಲ, ಭಾರತೀಯ ಆರ್ಥಿಕತೆಗೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.<br></p>.ಭಾರತ-ಅಮೆರಿಕ ಒಪ್ಪಂದವು ಆರ್ಥಿಕ ಅನಿಶ್ಚಿತತೆ ಕೊನೆಗೊಳಿಸಿದೆ: ಹಣಕಾಸು ಸಚಿವಾಲಯ.<p><strong>ಮಾಸ್ಕೊ:</strong> ತೈಲ ಖರೀದಿಸುವುದನ್ನು ನಿಲ್ಲಿಸುವ ಬಗ್ಗೆ ಭಾರತದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.</p>.ತೈಲ ಖರೀದಿಸುವುದನ್ನು ನಿಲ್ಲಿಸುವ ಬಗ್ಗೆ ಭಾರತ ಯಾವುದೇ ಮಾಹಿತಿ ನೀಡಿಲ್ಲ: ರಷ್ಯಾ.<p><strong>ವಡೋದರಾ:</strong> ಫೆಬ್ರುವರಿ 7ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ಗಳನ್ನು ಸೋಲಿಸುವುದು ಸುಲಭವಲ್ಲ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಹಾಗೂ ಗುಜರಾತ್ ಜೈಂಟ್ಸ್ ತಂಡದ ಕೋಚ್ ಮೈಕೆಲ್ ಕ್ಲಿಂಗರ್ ಹೇಳಿದ್ದಾರೆ.</p> .ಯಾವುದೇ ತಂಡಕ್ಕೆ ಭಾರತದ ವಿರುದ್ಧ ಗೆಲುವು ಸುಲಭವಲ್ಲ: ಆಸೀಸ್ ಮಾಜಿ ಆಟಗಾರ.<p><strong>ಪಟ್ನಾ</strong>: ಮಾಜಿ ಭೂಗತ ದೊರೆ, ಹಾಲಿ ಜೆಡಿ(ಯು) ಶಾಸಕ ಅನಂತ್ ಕುಮಾರ್ ಸಿಂಗ್ ಅವರನ್ನು ಬಿಹಾರ ವಿಧಾನಸಭೆಗೆ ಮಂಗಳವಾರ ಜೈಲು ವಾಹನದಲ್ಲೆ ಕರೆತರಲಾಯಿತು.</p>.ಬಿಹಾರ: ವಿಧಾನಸಭೆಗೆ ಜೈಲು ವಾಹನದಲ್ಲೇ ಬಂದ ಶಾಸಕ ಅನಂತ್ ಕುಮಾರ್ ಸಿಂಗ್!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಷ್ಟ್ರೀಯ, ರಾಜ್ಯ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.</p>.<p><strong>ಕಾರವಾರ/ಸಿದ್ದಾಪುರ:</strong> ಸಿದ್ದಾಪುರ ತಾಲ್ಲೂಕಿನ ಅವರಗೊಪ್ಪ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ವಸಂತ ನಾಯ್ಕ (43) ಎಂಬುವವರ ಹತ್ಯೆ ನಡೆದಿದೆ. ಹತ್ಯೆ ಆರೋಪಿಗಳಾದ ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾ ನಾಯ್ಕ ಸೇರಿ ಏಳು ಮಂದಿಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.ಸಿದ್ದಾಪುರದ ವಸಂತ ನಾಯ್ಕ ಕೊಲೆ: ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾ ನಾಯ್ಕ ಬಂಧನ.<p><strong>ನವದೆಹಲಿ:</strong> ‘ನರೇಂದ್ರ ಮೋದಿ ಭಯಭೀತರಾಗಿದ್ದಾರೆ. ಅವರ ಮೇಲಿದ್ದ ಎರಡು ಒತ್ತಡಗಳಿಂದಾಗಿ ಭಾರತ ಹಾಗೂ ಅಮೆರಿಕ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ’ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು.</p>.ಮೋದಿ ಮೇಲಿರುವ ಆ ಎರಡು ಒತ್ತಡದ ಕಾರಣಕ್ಕೆ ಅಮೆರಿಕ ಒಪ್ಪಂದಕ್ಕೆ ಸಹಿ: ರಾಗಾ ಆರೋಪ.<p><strong>ನವದೆಹಲಿ</strong>: ಭಾರತ ಮತ್ತು ಚೀನಾ ನಡುವಿನ ಲಡಾಖ್ ಬಿಕ್ಕಟ್ಟಿನ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದ ವಿಷಯ ಇಂದೂ (ಮಂಗಳವಾರ) ಸಹ ಭಾರಿ ಕೋಲಾಹಲಕ್ಕೆ ಕಾರಣವಾಯಿತು.</p>.ಲೋಕಸಭೆಯಲ್ಲಿ ಭಾರಿ ಕೋಲಾಹಲ: ವಿರೋಧ ಪಕ್ಷದ 8 ಸಂಸದರ ಅಮಾನತು.<p><strong>ನವದೆಹಲಿ:</strong> ಎನ್ಡಿಎ ವಿವಿಧ ಚುನಾವಣೆಗಳಲ್ಲಿ ನಿರಂತರ ಜಯ ಸಾಧಿಸುತ್ತಿರುವುದಕ್ಕೆ ಜನಪರ ನೀತಿಗಳು ಹಾಗೂ ಪರಿಶ್ರಮವೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಿಳಿಸಿದ್ದಾರೆ.</p>.ಗೆಲುವುಗಳಿಂದ ತೃಪ್ತರಾಗದೆ ಕೆಲಸ ಮುಂದುವರಿಸಿ: NDA ನಾಯಕರಿಗೆ ಪ್ರಧಾನಿ ಮೋದಿ ಸಲಹೆ.<p><strong>ನವದೆಹಲಿ:</strong> ದತ್ತಾಂಶ ಹಂಚಿಕೆ ಹೆಸರಿನಲ್ಲಿ ಪ್ರಜೆಗಳ ಖಾಸಗಿತನದ ಹಕ್ಕಿನೊಂದಿಗೆ ಆಟವಾಡಕೂಡದು ಎಂದು ಸುಪ್ರೀಂ ಕೋರ್ಟ್ ಕುಟುವಾಗಿ ನುಡಿದಿದೆ.</p>.ಜನರ ಖಾಸಗಿತನದ ಹಕ್ಕು ಉಲ್ಲಂಘಿಸಲು ಬಿಡೆವು: ವಾಟ್ಸ್ಆ್ಯಪ್ಗೆ ಸುಪ್ರಿಂ ಕೋರ್ಟ್.<p><strong>ಬೆಂಗಳೂರು</strong>: ‘ಮಾನ್ಯತೆ ಹೊಂದಿದ ವೀಸಾ, ಪಾಸ್ಪೋರ್ಟ್ ಇಲ್ಲದೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯ ಕಾದಿದೆ’ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.</p>.ವಿದೇಶಿಗರ ಅಕ್ರಮ ಠಿಕಾಣಿ: ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದ ಹೈಕೋರ್ಟ್.<p><strong>ನವದೆಹಲಿ:</strong> ಭಾರತ ಹಾಗೂ ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಘೋಷಣೆಯು ಜಾಗತಿಕವಾಗಿ ಆರ್ಥಿಕತೆಯ ಮೇಲೆ ಉಂಟಾಗಿದ್ದ ಅನಿಶ್ಚಿತತೆಯ ವಾತಾವರಣವನ್ನು ಕೊನೆಗೊಳಿಸಿದೆ. ಮಾತ್ರವಲ್ಲ, ಭಾರತೀಯ ಆರ್ಥಿಕತೆಗೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.<br></p>.ಭಾರತ-ಅಮೆರಿಕ ಒಪ್ಪಂದವು ಆರ್ಥಿಕ ಅನಿಶ್ಚಿತತೆ ಕೊನೆಗೊಳಿಸಿದೆ: ಹಣಕಾಸು ಸಚಿವಾಲಯ.<p><strong>ಮಾಸ್ಕೊ:</strong> ತೈಲ ಖರೀದಿಸುವುದನ್ನು ನಿಲ್ಲಿಸುವ ಬಗ್ಗೆ ಭಾರತದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.</p>.ತೈಲ ಖರೀದಿಸುವುದನ್ನು ನಿಲ್ಲಿಸುವ ಬಗ್ಗೆ ಭಾರತ ಯಾವುದೇ ಮಾಹಿತಿ ನೀಡಿಲ್ಲ: ರಷ್ಯಾ.<p><strong>ವಡೋದರಾ:</strong> ಫೆಬ್ರುವರಿ 7ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ಗಳನ್ನು ಸೋಲಿಸುವುದು ಸುಲಭವಲ್ಲ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಹಾಗೂ ಗುಜರಾತ್ ಜೈಂಟ್ಸ್ ತಂಡದ ಕೋಚ್ ಮೈಕೆಲ್ ಕ್ಲಿಂಗರ್ ಹೇಳಿದ್ದಾರೆ.</p> .ಯಾವುದೇ ತಂಡಕ್ಕೆ ಭಾರತದ ವಿರುದ್ಧ ಗೆಲುವು ಸುಲಭವಲ್ಲ: ಆಸೀಸ್ ಮಾಜಿ ಆಟಗಾರ.<p><strong>ಪಟ್ನಾ</strong>: ಮಾಜಿ ಭೂಗತ ದೊರೆ, ಹಾಲಿ ಜೆಡಿ(ಯು) ಶಾಸಕ ಅನಂತ್ ಕುಮಾರ್ ಸಿಂಗ್ ಅವರನ್ನು ಬಿಹಾರ ವಿಧಾನಸಭೆಗೆ ಮಂಗಳವಾರ ಜೈಲು ವಾಹನದಲ್ಲೆ ಕರೆತರಲಾಯಿತು.</p>.ಬಿಹಾರ: ವಿಧಾನಸಭೆಗೆ ಜೈಲು ವಾಹನದಲ್ಲೇ ಬಂದ ಶಾಸಕ ಅನಂತ್ ಕುಮಾರ್ ಸಿಂಗ್!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>