<p><strong>ಅಗರ್ತಲಾ:</strong>ತ್ರಿಪುರ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇಬ್ ಅವರು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರಿಗೆ ಗೌರವ ಹಾಗೂ ಸೌಜನ್ಯದ ಸಂಕೇತವಾಗಿ400ಅನಾನಸ್ಗಳನ್ನು ಕಳುಹಿಸಿಕೊಟ್ಟಿದ್ದಾರೆ.</p>.<p>ತ್ರಿಪುರತೋಟಗಾರಿಕೆ ಮತ್ತು ಮಣ್ಣಿನ ಸಂರಕ್ಷಣಾ ಇಲಾಖೆಯ ನಿರ್ದೇಶಕ ಡಾ. ಫನಿ ಭೂಷಣ್ ಜಮಾತಿಯಾ ಅವರು ಚಿತ್ತಗಾಂಗ್ನಲ್ಲಿರುವ ಭಾರತದ ಹೈಕಮಿಷನ್ ಕಾರ್ಯದರ್ಶಿ ಉದೊತ್ ಝಾ ಅವರಿಗೆಅಗರ್ತಲಾ ಚೆಕ್ಪೋಸ್ಟ್ ಬಳಿ ಹಣ್ಣುಗಳನ್ನು ನೀಡಿದರು. ಈ ವೇಳೆ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಟಿ.ಕೆ.ಚಕ್ಮಾ ಅವರು ಉಪಸ್ಥಿತರಿದ್ದರು.ಉದೊತ್ ಝಾ, ಬಾಂಗ್ಲಾ ಪ್ರಧಾನಿಗೆ ಹಣ್ಣುಗಳನ್ನು ತಲುಪಿಸಲಿದ್ದಾರೆ.</p>.<p>ಈ ವೇಳೆ ಮಾತನಾಡಿದಉದೊತ್ ಝಾ ಅವರು, ʼಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರತ್ತತ್ರಿಪುರ ಮುಖ್ಯಮಂತ್ರಿತೋರಿರುವ ಸೌಹಾರ್ದಯುತ ನಡೆಯು ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಂಬಂಧವನ್ನು ದೀರ್ಘಕಾಲದವರೆಗೆ ಗಟ್ಟಿಗೊಳಿಸುತ್ತದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p>ಮುಂದುವರಿದು,ʼತ್ರಿಪುರ ಸರ್ಕಾರ ಮತ್ತು ಮುಖ್ಯಮಂತ್ರಿ ಅವರಿಗೆ ಅವರ ಸೌಹಾರ್ದ ನಡೆಗಾಗಿ ಧನ್ಯವಾದ ಹೇಳಲು ಬಯಸುತ್ತೇನೆʼ ಎಂದೂ ಹೇಳಿದ್ದಾರೆ.</p>.<p>ʼತ್ರಿಪುರ ಮತ್ತು ಬಾಂಗ್ಲಾದೇಶದ ಸಂಬಂಧ ಬಲವಾಗಿದೆ. ಆಮದು-ರಫ್ತು ವ್ಯಾಪಾರ ಮತ್ತು ವೈದ್ಯಕೀಯ ಪ್ರವಾಸೋದ್ಯಮದ ಅವಕಾಶಗಳನ್ನು ಹೆಚ್ಚಿಸಲುಹೆಚ್ಚಿನ ಅವಕಾಶಗಳಿವೆʼ ಎಂದು ಟಿ.ಕೆ.ಚಕ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ವೈವಿಧ್ಯಮಯ ಅನಾನಸ್ಗಳನ್ನು ತ್ರಿಪುರದತೋಟಗಾರಿಕೆ ಮತ್ತು ಮಣ್ಣಿನ ಸಂರಕ್ಷಣಾ ಇಲಾಖೆಯು ಕುಮಾರ್ಘಾಟ್ ಮತ್ತು ಒಂಪಿ ಪ್ರದೇಶಗಳಿಂದಸಂಗ್ರಹಿಸಿತ್ತು.</p>.<p>ಬಾಂಗ್ಲಾ ಪ್ರಧಾನಿ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ತ್ರಿಪುರ ಸೇರಿದಂತೆ ತನ್ನ ನೆರಯಲ್ಲಿರುವ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳಿಗೆಹರಿಭಂಗಾ ಮಾವಿನ ಹಣ್ಣುಗಳನ್ನು ಕಳುಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಗರ್ತಲಾ:</strong>ತ್ರಿಪುರ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇಬ್ ಅವರು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರಿಗೆ ಗೌರವ ಹಾಗೂ ಸೌಜನ್ಯದ ಸಂಕೇತವಾಗಿ400ಅನಾನಸ್ಗಳನ್ನು ಕಳುಹಿಸಿಕೊಟ್ಟಿದ್ದಾರೆ.</p>.<p>ತ್ರಿಪುರತೋಟಗಾರಿಕೆ ಮತ್ತು ಮಣ್ಣಿನ ಸಂರಕ್ಷಣಾ ಇಲಾಖೆಯ ನಿರ್ದೇಶಕ ಡಾ. ಫನಿ ಭೂಷಣ್ ಜಮಾತಿಯಾ ಅವರು ಚಿತ್ತಗಾಂಗ್ನಲ್ಲಿರುವ ಭಾರತದ ಹೈಕಮಿಷನ್ ಕಾರ್ಯದರ್ಶಿ ಉದೊತ್ ಝಾ ಅವರಿಗೆಅಗರ್ತಲಾ ಚೆಕ್ಪೋಸ್ಟ್ ಬಳಿ ಹಣ್ಣುಗಳನ್ನು ನೀಡಿದರು. ಈ ವೇಳೆ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಟಿ.ಕೆ.ಚಕ್ಮಾ ಅವರು ಉಪಸ್ಥಿತರಿದ್ದರು.ಉದೊತ್ ಝಾ, ಬಾಂಗ್ಲಾ ಪ್ರಧಾನಿಗೆ ಹಣ್ಣುಗಳನ್ನು ತಲುಪಿಸಲಿದ್ದಾರೆ.</p>.<p>ಈ ವೇಳೆ ಮಾತನಾಡಿದಉದೊತ್ ಝಾ ಅವರು, ʼಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರತ್ತತ್ರಿಪುರ ಮುಖ್ಯಮಂತ್ರಿತೋರಿರುವ ಸೌಹಾರ್ದಯುತ ನಡೆಯು ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಂಬಂಧವನ್ನು ದೀರ್ಘಕಾಲದವರೆಗೆ ಗಟ್ಟಿಗೊಳಿಸುತ್ತದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p>ಮುಂದುವರಿದು,ʼತ್ರಿಪುರ ಸರ್ಕಾರ ಮತ್ತು ಮುಖ್ಯಮಂತ್ರಿ ಅವರಿಗೆ ಅವರ ಸೌಹಾರ್ದ ನಡೆಗಾಗಿ ಧನ್ಯವಾದ ಹೇಳಲು ಬಯಸುತ್ತೇನೆʼ ಎಂದೂ ಹೇಳಿದ್ದಾರೆ.</p>.<p>ʼತ್ರಿಪುರ ಮತ್ತು ಬಾಂಗ್ಲಾದೇಶದ ಸಂಬಂಧ ಬಲವಾಗಿದೆ. ಆಮದು-ರಫ್ತು ವ್ಯಾಪಾರ ಮತ್ತು ವೈದ್ಯಕೀಯ ಪ್ರವಾಸೋದ್ಯಮದ ಅವಕಾಶಗಳನ್ನು ಹೆಚ್ಚಿಸಲುಹೆಚ್ಚಿನ ಅವಕಾಶಗಳಿವೆʼ ಎಂದು ಟಿ.ಕೆ.ಚಕ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ವೈವಿಧ್ಯಮಯ ಅನಾನಸ್ಗಳನ್ನು ತ್ರಿಪುರದತೋಟಗಾರಿಕೆ ಮತ್ತು ಮಣ್ಣಿನ ಸಂರಕ್ಷಣಾ ಇಲಾಖೆಯು ಕುಮಾರ್ಘಾಟ್ ಮತ್ತು ಒಂಪಿ ಪ್ರದೇಶಗಳಿಂದಸಂಗ್ರಹಿಸಿತ್ತು.</p>.<p>ಬಾಂಗ್ಲಾ ಪ್ರಧಾನಿ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ತ್ರಿಪುರ ಸೇರಿದಂತೆ ತನ್ನ ನೆರಯಲ್ಲಿರುವ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳಿಗೆಹರಿಭಂಗಾ ಮಾವಿನ ಹಣ್ಣುಗಳನ್ನು ಕಳುಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>