‘ಚುನಾವಣಾ ಪ್ರಕ್ರಿಯೆಗಳು ಈಗಾಗಲೇ ನಡೆಯುತ್ತಿವೆ. ಆದರೆ ಅರ್ಜಿಯಲ್ಲಿ ಚುನಾವಣೆಯ ನಿಯಮಗಳನ್ನು ಪ್ರಶ್ನೆ ಮಾಡಿರುವುದನ್ನು ವಿಚಾರಣೆಗೆ ಮುಕ್ತವಾಗಿರಿಸಲಿದ್ದೇವೆ’ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಕೆ.ವಿ ವಿಶ್ವನಾಥನ್ ಅವರಿದ್ದ ಪೀಠ ಹೇಳಿತು.
‘ಇವಿಎಂಗಳು ಹಾಗೂ ಚಿಹ್ನೆಗಳನ್ನು ಈಗಾಗಲೇ ಹಂಚಿಕೆಯಾಗಿದೆ. ನಮ್ಮಲ್ಲಿಗೆ ಬರಲು ಇಷ್ಟು ತಡವೇಕೆ ಮಾಡಿದಿರಿ? ಈವರೆಗೂ ಕೇಳಿರದ ಸಂಗತಿಗಳೆಲ್ಲಾ ನಡೆಯುತ್ತಿವೆ. ನೀವು ಬೇಗ ಬರಬೇಕಿತ್ತು. ತಾತ್ಕಾಲಿಕ ನಾಮಪತ್ರ ಸಲ್ಲಿಸಲು ಹೈಕೋರ್ಟ್ನಲ್ಲಿ ಅರ್ಜಿ ಹಾಕಿ, ಅಲ್ಲಿ ಮಾನ್ಯ ಮಾಡದಿದ್ದರೆ, ನೀವು ಇಲ್ಲಿಗೆ ಬರಬಹುದಿತ್ತು’ ಎಂದಿತು.