ದೂರುದಾರ ಲೆಖ್ರಮ್ ಆದಿವಾಸಿ ಎಂಬವರು ಪತ್ನಿ ಹಾಗೂ ಮಗುವಿನೊಂದಿಗೆ ಗೊಂದ್ವಾನ ಎಕ್ಸ್ಪ್ರೆಸ್ ರೈಲಿನಲ್ಲಿ ದೆಹಲಿಯಿಂದ ಬಂದಿದ್ದರು. ಮಾಡಿಯಾದೋಹ್ ಗ್ರಾಮಕ್ಕೆ ತೆರಳಬೇಕಿದ್ದ ಅವರು, ಮಗು ಕಾಯಿಲೆ ಬಿದ್ದಿದ್ದರಿಂದ ದಾಮೋಹ್ ನಿಲ್ದಾಣದಲ್ಲಿ ಇಳಿದು ಜಿಲ್ಲಾ ಆಸ್ಪತ್ರೆಗೆ ತೆರಳಬೇಕೆಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೆಖ್ರಮ್ ಅವರ ಪತ್ನಿ ಮಗುವಿಗೆ ನೀರು ಕುಡಿಸುತ್ತಿದ್ದ ವೇಳೆ ಬಂದ ಆಗಂತುಕನೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಲೆಖ್ರಮ್ ಅಲ್ಲಿಯೇ ಬಿದ್ದಿದ್ದ ಇಟ್ಟಿಗೆ ತುಂಡನ್ನು ಎತ್ತಿ ಅವನನ್ನು ಓಡಿಸಿದ್ದಾನೆ. ಆಗಂತುಕನ ದಾಳಿಯಲ್ಲಿ ಮಗು ಸಾವಿಗೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.