<p><strong>ತಿರುವನಂತಪುರ: </strong>‘ಕೇರಳದಲ್ಲಿ ಲವ್ ಹಾಗೂ ಮಾದಕವಸ್ತು ಜಿಹಾದ್ ನಡೆಯುತ್ತಿದೆ’ ಎಂಬ ಪಾಲಾ ಜೋಸೆಫ್ ಕಲ್ಲರಂಗಾಟ್ ಅವರ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರಂಭವಾಗಿರುವ ವಾಕ್ಸಮರ ಈಗ ತೀವ್ರಗೊಂಡಿದೆ.</p>.<p>‘ಕೇರಳದಲ್ಲಿ ಸಂಘ ಪರಿವಾರ ನೆಲೆಯೂರುವುದನ್ನು ತಾನು ಬಯಸುವುದಿಲ್ಲ’ ಎಂದು ಕಾಂಗ್ರೆಸ್ ಮುಖಂಡರು ಭಾನುವಾರ ಹೇಳಿದ್ದಾರೆ. ‘ಈ ವಿಷಯವನ್ನು ಮುಂದಿಟ್ಟುಕೊಂಡು ಸಿಪಿಎಂ ಹಾಗೂ ಕಾಂಗ್ರೆಸ್ ಪಕ್ಷಗಳು ಬಿಷಪ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿವೆ’ ಎಂದು ಬಿಜೆಪಿ ಪಾಳೆಯ ತಿರುಗೇಟು ನೀಡಿದೆ.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ನ ಹಿರಿಯ ಮುಖಂಡ ಕೆ.ಮುರಳೀಧರನ್, ‘ಬಿಷಪ್ ಅವರ ಮೇಲೆ ಪಕ್ಷ ದಾಳಿ ಮಾಡುತ್ತಿಲ್ಲ’ ಎಂದರು.</p>.<p>‘ರಾಜ್ಯದ ದಕ್ಷಿಣ ಭಾಗದಲ್ಲಿ ಮದ್ಯ ಹಾಗೂ ಮಾದಕವಸ್ತುಗಳ ಮಾಫಿಯಾ ತೀವ್ರವಾಗಿರುವುದು ನಿಜ. ಈ ವಿಷಯವನ್ನೇ ಮುಂದು ಮಾಡಿ ಒಂದು ಸಮುದಾಯದ ವಿರುದ್ಧ ಆರೋಪ ಹೊರಿಸುವುದು ತಪ್ಪು ಎಂಬುದನ್ನು ಪಕ್ಷ ಹೇಳುತ್ತಿದೆಯಷ್ಟೇ’ ಎಂದರು.</p>.<p>‘ರಾಜ್ಯದಲ್ಲಿ ಕೋಮು ಸೌಹಾರ್ದ ಹಾಳಾಗುವುದನ್ನಾಗಲಿ ಅಥವಾ ಸಂಘ ಪರಿವಾರ ಅಸ್ತಿತ್ವ ಕಂಡುಕೊಳ್ಳುವುದನ್ನಾಗಲಿ ಕಾಂಗ್ರೆಸ್ ಇಷ್ಟಪಡುವುದಿಲ್ಲ’ ಎಂದು ಹೇಳಿದರು.</p>.<p>ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್, ‘ಬಿಷಪ್ ಅವರು ಭಯೋತ್ಪಾದನೆ ವಿರುದ್ಧ ಮಾತನಾಡಿದ್ದಾರೆ. ಅವರ ಮಾತುಗಳು ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳಿಗೆ ಬಲವಾಗಿ ತಿವಿದಿವೆ. ಇದನ್ನು ಸಹಿಸಲಾಗದೇ ಆ ಎರಡು ಪಕ್ಷಗಳು ಬಿಷಪ್ ಅವರ ವಿರುದ್ಧ ಟೀಕೆ ಮಾಡುತ್ತಿವೆ’ ಎಂದರು.</p>.<p>ಎಸ್ಎನ್ಡಿಪಿ ಮುಖಂಡ ವೆಲ್ಲಪಳ್ಳಿ ನಟೇಶನ್ ಅವರ 84ನೇ ಜನ್ಮದಿನದ ಸಂದರ್ಭದಲ್ಲಿ ಮಾತನಾಡಿದ ಸುರೇಂದ್ರನ್, ‘ಕಾಂಗ್ರೆಸ್ ಹಾಗೂ ಸಿಪಿಎಂ ಮುಖಂಡರ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಮತ ಬ್ಯಾಂಕ್ ರಾಜಕಾರಣದ ಉದ್ದೇಶದಿಂದ ಆ ಎರಡೂ ಪಕ್ಷಗಳು ಧಾರ್ಮಿಕ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವುದು ಸ್ಪಷ್ಟವಾಗುತ್ತದೆ’ ಎಂದೂ ಟೀಕಿಸಿದರು.</p>.<p>‘ಈ ಎರಡು ಪಕ್ಷಗಳಿಂದ ದಾಳಿಗೆ ಒಳಗಾಗುತ್ತಿರುವ ಬಿಷಪ್ ಅವರಿಗೆ ಬಿಜೆಪಿ ಎಲ್ಲ ರೀತಿಯ ಬೆಂಬಲ ನೀಡಲಿದೆ’ ಎಂದು ಅವರು ಹೇಳಿದರು.</p>.<p>‘ಕೇರಳದಲ್ಲಿ ಕ್ರೈಸ್ತ ಯುವತಿಯರು ಲವ್ ಹಾಗೂ ಮಾದಕವಸ್ತು ಜಿಹಾದ್ನ ಬಲಿಪಶುಗಳಾಗುತ್ತಿದ್ದಾರೆ. ಶಸ್ತ್ರಾಸ್ತ್ರಗಳನ್ನು ಬಳಸಲು ಸಾಧ್ಯವಿಲ್ಲದ ಸ್ಥಳಗಳಲ್ಲಿ ಉಗ್ರರು ಇಂಥ ಮಾರ್ಗಗಳನ್ನು ಬಳಸಿ, ಯುವ ಸಮುದಾಯವನ್ನು ನಾಶ ಮಾಡುತ್ತಾರೆ’ ಎಂದು ಬಿಷಪ್ ಕಲ್ಲರಂಗಾಟ್ ಇತ್ತೀಚೆಗೆ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ: </strong>‘ಕೇರಳದಲ್ಲಿ ಲವ್ ಹಾಗೂ ಮಾದಕವಸ್ತು ಜಿಹಾದ್ ನಡೆಯುತ್ತಿದೆ’ ಎಂಬ ಪಾಲಾ ಜೋಸೆಫ್ ಕಲ್ಲರಂಗಾಟ್ ಅವರ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರಂಭವಾಗಿರುವ ವಾಕ್ಸಮರ ಈಗ ತೀವ್ರಗೊಂಡಿದೆ.</p>.<p>‘ಕೇರಳದಲ್ಲಿ ಸಂಘ ಪರಿವಾರ ನೆಲೆಯೂರುವುದನ್ನು ತಾನು ಬಯಸುವುದಿಲ್ಲ’ ಎಂದು ಕಾಂಗ್ರೆಸ್ ಮುಖಂಡರು ಭಾನುವಾರ ಹೇಳಿದ್ದಾರೆ. ‘ಈ ವಿಷಯವನ್ನು ಮುಂದಿಟ್ಟುಕೊಂಡು ಸಿಪಿಎಂ ಹಾಗೂ ಕಾಂಗ್ರೆಸ್ ಪಕ್ಷಗಳು ಬಿಷಪ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿವೆ’ ಎಂದು ಬಿಜೆಪಿ ಪಾಳೆಯ ತಿರುಗೇಟು ನೀಡಿದೆ.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ನ ಹಿರಿಯ ಮುಖಂಡ ಕೆ.ಮುರಳೀಧರನ್, ‘ಬಿಷಪ್ ಅವರ ಮೇಲೆ ಪಕ್ಷ ದಾಳಿ ಮಾಡುತ್ತಿಲ್ಲ’ ಎಂದರು.</p>.<p>‘ರಾಜ್ಯದ ದಕ್ಷಿಣ ಭಾಗದಲ್ಲಿ ಮದ್ಯ ಹಾಗೂ ಮಾದಕವಸ್ತುಗಳ ಮಾಫಿಯಾ ತೀವ್ರವಾಗಿರುವುದು ನಿಜ. ಈ ವಿಷಯವನ್ನೇ ಮುಂದು ಮಾಡಿ ಒಂದು ಸಮುದಾಯದ ವಿರುದ್ಧ ಆರೋಪ ಹೊರಿಸುವುದು ತಪ್ಪು ಎಂಬುದನ್ನು ಪಕ್ಷ ಹೇಳುತ್ತಿದೆಯಷ್ಟೇ’ ಎಂದರು.</p>.<p>‘ರಾಜ್ಯದಲ್ಲಿ ಕೋಮು ಸೌಹಾರ್ದ ಹಾಳಾಗುವುದನ್ನಾಗಲಿ ಅಥವಾ ಸಂಘ ಪರಿವಾರ ಅಸ್ತಿತ್ವ ಕಂಡುಕೊಳ್ಳುವುದನ್ನಾಗಲಿ ಕಾಂಗ್ರೆಸ್ ಇಷ್ಟಪಡುವುದಿಲ್ಲ’ ಎಂದು ಹೇಳಿದರು.</p>.<p>ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್, ‘ಬಿಷಪ್ ಅವರು ಭಯೋತ್ಪಾದನೆ ವಿರುದ್ಧ ಮಾತನಾಡಿದ್ದಾರೆ. ಅವರ ಮಾತುಗಳು ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳಿಗೆ ಬಲವಾಗಿ ತಿವಿದಿವೆ. ಇದನ್ನು ಸಹಿಸಲಾಗದೇ ಆ ಎರಡು ಪಕ್ಷಗಳು ಬಿಷಪ್ ಅವರ ವಿರುದ್ಧ ಟೀಕೆ ಮಾಡುತ್ತಿವೆ’ ಎಂದರು.</p>.<p>ಎಸ್ಎನ್ಡಿಪಿ ಮುಖಂಡ ವೆಲ್ಲಪಳ್ಳಿ ನಟೇಶನ್ ಅವರ 84ನೇ ಜನ್ಮದಿನದ ಸಂದರ್ಭದಲ್ಲಿ ಮಾತನಾಡಿದ ಸುರೇಂದ್ರನ್, ‘ಕಾಂಗ್ರೆಸ್ ಹಾಗೂ ಸಿಪಿಎಂ ಮುಖಂಡರ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಮತ ಬ್ಯಾಂಕ್ ರಾಜಕಾರಣದ ಉದ್ದೇಶದಿಂದ ಆ ಎರಡೂ ಪಕ್ಷಗಳು ಧಾರ್ಮಿಕ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವುದು ಸ್ಪಷ್ಟವಾಗುತ್ತದೆ’ ಎಂದೂ ಟೀಕಿಸಿದರು.</p>.<p>‘ಈ ಎರಡು ಪಕ್ಷಗಳಿಂದ ದಾಳಿಗೆ ಒಳಗಾಗುತ್ತಿರುವ ಬಿಷಪ್ ಅವರಿಗೆ ಬಿಜೆಪಿ ಎಲ್ಲ ರೀತಿಯ ಬೆಂಬಲ ನೀಡಲಿದೆ’ ಎಂದು ಅವರು ಹೇಳಿದರು.</p>.<p>‘ಕೇರಳದಲ್ಲಿ ಕ್ರೈಸ್ತ ಯುವತಿಯರು ಲವ್ ಹಾಗೂ ಮಾದಕವಸ್ತು ಜಿಹಾದ್ನ ಬಲಿಪಶುಗಳಾಗುತ್ತಿದ್ದಾರೆ. ಶಸ್ತ್ರಾಸ್ತ್ರಗಳನ್ನು ಬಳಸಲು ಸಾಧ್ಯವಿಲ್ಲದ ಸ್ಥಳಗಳಲ್ಲಿ ಉಗ್ರರು ಇಂಥ ಮಾರ್ಗಗಳನ್ನು ಬಳಸಿ, ಯುವ ಸಮುದಾಯವನ್ನು ನಾಶ ಮಾಡುತ್ತಾರೆ’ ಎಂದು ಬಿಷಪ್ ಕಲ್ಲರಂಗಾಟ್ ಇತ್ತೀಚೆಗೆ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>