<p><strong>ಗಯಾ (ಬಿಹಾರ):</strong> ಜಿಲ್ಲೆಯ ಬುಧೌಲ್ ಎಂಬ ಹಳ್ಳಿಯ ಜನರು ಸ್ಥಳೀಯವಾಗಿ ಸಂಗ್ರಹಿಸಿದ ದೇಣಿಗೆಯಿಂದಲೇ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ.</p>.<p>ಹಳ್ಳಿಯ ಜನರು ಹೇಳುವ ಪ್ರಕಾರ ಕಳೆದ 30 ವರ್ಷಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿತ್ತು ಎನ್ನಲಾಗಿದೆ.</p>.<p>ಸಾಮಾಜಿಕ ಕಾರ್ಯಕರ್ತ ಚಿತ್ರಾಂಜನ್ ಕುಮಾರ್ ಎನ್ನುವವರು, ‘ಇಲ್ಲಿನನಿವಾಸಿಗಳು ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರವನ್ನುಒತ್ತಾಯಿಸಿದ್ದರು. ಆದರೆ, ಅವರ ಮನವಿಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.ಇತ್ತೀಚೆಗೆ ಪಂಚಾಯಿತಿ ಸಭೆ ನಡೆಸಿದ ಜನರು, ಸೇತುವೆ ನಿರ್ಮಾಣ ಪೂರ್ಣಗೊಳಿಸಲು ನಿರ್ಧರಿಸಿದರು’ ಎಂದಿದ್ದಾರೆ.</p>.<p>ಮುಂದುವರಿದು, ‘ಹಳ್ಳಿಯ ಜನರು ಅಗತ್ಯ ಸರಕುಗಳನ್ನು ಒಟ್ಟುಗೂಡಿಸಿದ್ದಾರೆ. ಕೆಲವರು ಕಾರ್ಮಿಕರಾಗಿ ದುಡಿಯುತ್ತಿದ್ದು, ಕಾಮಗಾರಿ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.</p>.<p>ಹಳ್ಳಿಯ ಪಕ್ಕದಲ್ಲೇ ನದಿ ಹರಿಯುತ್ತಿರುವುದರಿಂದ ಜನರು ಪಕ್ಕದ ಊರಿಗೆ ಹೋಗಲು ಸುಮಾರು 15 ಕಿ.ಮೀ ದೂರ ಸಾಗಬೇಕಿತ್ತು. ಸದ್ಯ ನದಿಗೆ ಅಡ್ಡಲಾಗಿ ಈ ನೇತುವೆ ನಿರ್ಮಿಸುತ್ತಿರುವುದರಿಂದ, ಪಕ್ಕದ ಊರಿಗೆ ಹೋಗಲು ಇದ್ದ ದೂರ ಕೇವಲ ಒಂದು ಕಿ.ಮೀ ಇಳಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಯಾ (ಬಿಹಾರ):</strong> ಜಿಲ್ಲೆಯ ಬುಧೌಲ್ ಎಂಬ ಹಳ್ಳಿಯ ಜನರು ಸ್ಥಳೀಯವಾಗಿ ಸಂಗ್ರಹಿಸಿದ ದೇಣಿಗೆಯಿಂದಲೇ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ.</p>.<p>ಹಳ್ಳಿಯ ಜನರು ಹೇಳುವ ಪ್ರಕಾರ ಕಳೆದ 30 ವರ್ಷಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿತ್ತು ಎನ್ನಲಾಗಿದೆ.</p>.<p>ಸಾಮಾಜಿಕ ಕಾರ್ಯಕರ್ತ ಚಿತ್ರಾಂಜನ್ ಕುಮಾರ್ ಎನ್ನುವವರು, ‘ಇಲ್ಲಿನನಿವಾಸಿಗಳು ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರವನ್ನುಒತ್ತಾಯಿಸಿದ್ದರು. ಆದರೆ, ಅವರ ಮನವಿಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.ಇತ್ತೀಚೆಗೆ ಪಂಚಾಯಿತಿ ಸಭೆ ನಡೆಸಿದ ಜನರು, ಸೇತುವೆ ನಿರ್ಮಾಣ ಪೂರ್ಣಗೊಳಿಸಲು ನಿರ್ಧರಿಸಿದರು’ ಎಂದಿದ್ದಾರೆ.</p>.<p>ಮುಂದುವರಿದು, ‘ಹಳ್ಳಿಯ ಜನರು ಅಗತ್ಯ ಸರಕುಗಳನ್ನು ಒಟ್ಟುಗೂಡಿಸಿದ್ದಾರೆ. ಕೆಲವರು ಕಾರ್ಮಿಕರಾಗಿ ದುಡಿಯುತ್ತಿದ್ದು, ಕಾಮಗಾರಿ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.</p>.<p>ಹಳ್ಳಿಯ ಪಕ್ಕದಲ್ಲೇ ನದಿ ಹರಿಯುತ್ತಿರುವುದರಿಂದ ಜನರು ಪಕ್ಕದ ಊರಿಗೆ ಹೋಗಲು ಸುಮಾರು 15 ಕಿ.ಮೀ ದೂರ ಸಾಗಬೇಕಿತ್ತು. ಸದ್ಯ ನದಿಗೆ ಅಡ್ಡಲಾಗಿ ಈ ನೇತುವೆ ನಿರ್ಮಿಸುತ್ತಿರುವುದರಿಂದ, ಪಕ್ಕದ ಊರಿಗೆ ಹೋಗಲು ಇದ್ದ ದೂರ ಕೇವಲ ಒಂದು ಕಿ.ಮೀ ಇಳಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>