ಅಯೋಧ್ಯೆ/ಲಖನೌ: ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ನಂತರದಲ್ಲಿ ಭಾರಿ ಪ್ರಮಾಣದ ಭಕ್ತರ ಹರಿವನ್ನು ಕಂಡಿದ್ದ ಅಯೋಧ್ಯೆಯಲ್ಲಿ ಬುಧವಾರ ಭಕ್ತರ ಸಂಖ್ಯೆಯು ತುಸು ಮಟ್ಟಿಗೆ ಕಡಿಮೆ ಇತ್ತು. ಇದು ಅಲ್ಲಿನ ಅಧಿಕಾರಿಗಳಲ್ಲಿ ಸಮಾಧಾನ ಮೂಡಿಸಿತು. ಹೀಗಿದ್ದರೂ, ಅತಿಗಣ್ಯ ವ್ಯಕ್ತಿಗಳು ಮುಂದಿನ ಹತ್ತು ದಿನಗಳವರೆಗೆ ಮಂದಿರಕ್ಕೆ ಭೇಟಿ ನೀಡಬಾರದು ಎಂದು ಉತ್ತರ ಪ್ರದೇಶ ಸರ್ಕಾರವು ಬುಧವಾರ ಕೋರಿದೆ.