<p><strong>ವಯನಾಡ್ (ಕೇರಳ):</strong> ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ‘ಮತ ಕಳ್ಳತನ’ಕ್ಕೆ ಸಂಬಂಧಿಸಿದ ಮಾಹಿತಿಯನ್ನು ಚುನಾವಣಾ ಆಯೋಗವು (ಇ.ಸಿ) ಅಲ್ಲಿನ ಸಿಐಡಿಗೆ ನೀಡುತ್ತಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಪುನರುಚ್ಚರಿಸಿದ್ದಾರೆ.</p>.<p>‘ಮತ ಕಳ್ಳತನ’ ಎಷ್ಟು ಪ್ರಮಾಣದಲ್ಲಿ ನಡೆದಿದೆ ಎಂಬ ಮಾಹಿತಿ ಕೋರಿ ಕರ್ನಾಟಕದ ಸಿಐಡಿ ಚುನಾವಣಾ ಆಯೋಗಕ್ಕೆ ಹಲವು ಪತ್ರಗಳನ್ನು ಬರೆದಿದೆ. ಆದರೆ, ಆಯೋಗವು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. </p>.<p>‘ಪೊಲೀಸರು ಕೇಳಿರುವ ಮಾಹಿತಿಯನ್ನು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಒದಗಿಸುತ್ತಿಲ್ಲ. ಸಿಇಸಿ ವಿರುದ್ಧ ಇದಕ್ಕಿಂತ ದೊಡ್ಡ ಆಪಾದನೆ ಇನ್ನೊಂದಿಲ್ಲ. ಇದು ನನ್ನ ಹೇಳಿಕೆಯಷ್ಟೇ ಅಲ್ಲ. ಇದು ಸತ್ಯ’ ಎಂದು ದೂರಿದ್ದಾರೆ.</p>.<p class="bodytext">ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿನ ಮತಕಳವು ಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಕೇಂದ್ರ ಚುನಾವಣಾ ಆಯೋಗವು ಅಗತ್ಯ ಸಾಕ್ಷ್ಯಗಳನ್ನು ವಾರದೊಳಗೆ ಒದಗಿಸಬೇಕು ಎಂದು ರಾಹುಲ್ ಗಾಂಧಿ ಅವರು ಗುರುವಾರ ಗಡುವು ವಿಧಿಸಿದ್ದರು.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರು ‘ಮತ ಕಳ್ಳತನ’ ಮಾಡಿಯೇ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂಬುದರ ಬಗ್ಗೆ ಯಾರಿಗೂ ಯಾವುದೇ ಸಂದೇಹ ಬಾರದ ರೀತಿಯಲ್ಲಿ ಕಾಂಗ್ರೆಸ್ ಪಕ್ಷವು ಪುರಾವೆಗಳನ್ನು ಒದಗಿಸಲಿದೆ’ ಎಂದು ರಾಹುಲ್ ಹೇಳಿದ್ದಾರೆ.</p>.<p>‘ನಾನು ಈ ಹಿಂದಿನ ಎರಡು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವಂತೆ ಮತ ಕಳ್ಳತನಕ್ಕೆ ಸಂಬಂಧಿಸಿದ ಹೈಡ್ರೋಜನ್ ಬಾಂಬ್ನಂಥ ಮಾಹಿತಿಯನ್ನು ಶೀಘ್ರ ಬಹಿರಂಗಪಡಿಸಲಿದ್ದೇವೆ. ನಾವು ಪ್ರಬಲ ಪುರಾವೆಗಳನ್ನು ಇಟ್ಟುಕೊಂಡೇ ಎಲ್ಲ ಹೇಳಿಕೆಗಳನ್ನು ನೀಡುತ್ತಿದ್ದೇವೆ’ ಎಂದಿದ್ದಾರೆ.</p>.<p>ರಾಹುಲ್ ಅವರು ಶುಕ್ರವಾರ ಆಯೋಗವನ್ನು ‘ಚುನಾವ್ ಕಾ ಚೌಕಿದಾರ್’ (ಚುನಾವಣೆಯ ಕಾವಲುಗಾರ) ಎಂದು ಕರೆದಿದ್ದರಲ್ಲದೆ, ‘ಚುನಾವಣೆಯ ಕಾವಲುಗಾರ ಎಚ್ಚರವಾಗಿಯೇ ಇದ್ದನಲ್ಲದೆ, ಮತ ಕಳ್ಳತನವನ್ನೂ ನೋಡುತ್ತಿದ್ದ. ಆ ಬಳಿಕ ಕಳ್ಳರನ್ನು ರಕ್ಷಿಸಿದ’ ಎಂದು ಲೇವಡಿ ಮಾಡಿದ್ದರು.</p>.ಆಳಂದ ವಿಧಾನಸಭಾ ಕ್ಷೇತ್ರ ಮತಕಳವು ಪ್ರಕರಣ: ಎಸ್ಐಟಿ ರಚನೆ.ಆಳಂದ ಕ್ಷೇತ್ರ | 6,018 ಅರ್ಜಿ ಸಲ್ಲಿಸಿದ್ದು ನಿಜ: ಮುಖ್ಯ ಚುನಾವಣಾಧಿಕಾರಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಯನಾಡ್ (ಕೇರಳ):</strong> ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ‘ಮತ ಕಳ್ಳತನ’ಕ್ಕೆ ಸಂಬಂಧಿಸಿದ ಮಾಹಿತಿಯನ್ನು ಚುನಾವಣಾ ಆಯೋಗವು (ಇ.ಸಿ) ಅಲ್ಲಿನ ಸಿಐಡಿಗೆ ನೀಡುತ್ತಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಪುನರುಚ್ಚರಿಸಿದ್ದಾರೆ.</p>.<p>‘ಮತ ಕಳ್ಳತನ’ ಎಷ್ಟು ಪ್ರಮಾಣದಲ್ಲಿ ನಡೆದಿದೆ ಎಂಬ ಮಾಹಿತಿ ಕೋರಿ ಕರ್ನಾಟಕದ ಸಿಐಡಿ ಚುನಾವಣಾ ಆಯೋಗಕ್ಕೆ ಹಲವು ಪತ್ರಗಳನ್ನು ಬರೆದಿದೆ. ಆದರೆ, ಆಯೋಗವು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. </p>.<p>‘ಪೊಲೀಸರು ಕೇಳಿರುವ ಮಾಹಿತಿಯನ್ನು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಒದಗಿಸುತ್ತಿಲ್ಲ. ಸಿಇಸಿ ವಿರುದ್ಧ ಇದಕ್ಕಿಂತ ದೊಡ್ಡ ಆಪಾದನೆ ಇನ್ನೊಂದಿಲ್ಲ. ಇದು ನನ್ನ ಹೇಳಿಕೆಯಷ್ಟೇ ಅಲ್ಲ. ಇದು ಸತ್ಯ’ ಎಂದು ದೂರಿದ್ದಾರೆ.</p>.<p class="bodytext">ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿನ ಮತಕಳವು ಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಕೇಂದ್ರ ಚುನಾವಣಾ ಆಯೋಗವು ಅಗತ್ಯ ಸಾಕ್ಷ್ಯಗಳನ್ನು ವಾರದೊಳಗೆ ಒದಗಿಸಬೇಕು ಎಂದು ರಾಹುಲ್ ಗಾಂಧಿ ಅವರು ಗುರುವಾರ ಗಡುವು ವಿಧಿಸಿದ್ದರು.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರು ‘ಮತ ಕಳ್ಳತನ’ ಮಾಡಿಯೇ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂಬುದರ ಬಗ್ಗೆ ಯಾರಿಗೂ ಯಾವುದೇ ಸಂದೇಹ ಬಾರದ ರೀತಿಯಲ್ಲಿ ಕಾಂಗ್ರೆಸ್ ಪಕ್ಷವು ಪುರಾವೆಗಳನ್ನು ಒದಗಿಸಲಿದೆ’ ಎಂದು ರಾಹುಲ್ ಹೇಳಿದ್ದಾರೆ.</p>.<p>‘ನಾನು ಈ ಹಿಂದಿನ ಎರಡು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವಂತೆ ಮತ ಕಳ್ಳತನಕ್ಕೆ ಸಂಬಂಧಿಸಿದ ಹೈಡ್ರೋಜನ್ ಬಾಂಬ್ನಂಥ ಮಾಹಿತಿಯನ್ನು ಶೀಘ್ರ ಬಹಿರಂಗಪಡಿಸಲಿದ್ದೇವೆ. ನಾವು ಪ್ರಬಲ ಪುರಾವೆಗಳನ್ನು ಇಟ್ಟುಕೊಂಡೇ ಎಲ್ಲ ಹೇಳಿಕೆಗಳನ್ನು ನೀಡುತ್ತಿದ್ದೇವೆ’ ಎಂದಿದ್ದಾರೆ.</p>.<p>ರಾಹುಲ್ ಅವರು ಶುಕ್ರವಾರ ಆಯೋಗವನ್ನು ‘ಚುನಾವ್ ಕಾ ಚೌಕಿದಾರ್’ (ಚುನಾವಣೆಯ ಕಾವಲುಗಾರ) ಎಂದು ಕರೆದಿದ್ದರಲ್ಲದೆ, ‘ಚುನಾವಣೆಯ ಕಾವಲುಗಾರ ಎಚ್ಚರವಾಗಿಯೇ ಇದ್ದನಲ್ಲದೆ, ಮತ ಕಳ್ಳತನವನ್ನೂ ನೋಡುತ್ತಿದ್ದ. ಆ ಬಳಿಕ ಕಳ್ಳರನ್ನು ರಕ್ಷಿಸಿದ’ ಎಂದು ಲೇವಡಿ ಮಾಡಿದ್ದರು.</p>.ಆಳಂದ ವಿಧಾನಸಭಾ ಕ್ಷೇತ್ರ ಮತಕಳವು ಪ್ರಕರಣ: ಎಸ್ಐಟಿ ರಚನೆ.ಆಳಂದ ಕ್ಷೇತ್ರ | 6,018 ಅರ್ಜಿ ಸಲ್ಲಿಸಿದ್ದು ನಿಜ: ಮುಖ್ಯ ಚುನಾವಣಾಧಿಕಾರಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>